ನಾವುಂದ ಸಾಲ್ಬುಡದಲ್ಲಿ ಮುಳುಗಿದ ಕೃಷಿ ಭೂಮಿ

ಬೈಂದೂರು:ಕಳೆದೆರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆದ ಪರಿಣಾಮ ಬೈಂದೂರು ತಾಲೂಕಿನ ನೆರೆ ಬಾಧಿತ ಪ್ರದೇಶವಾದ ನಾವುಂದ ಸಾಲ್ಬುಡದಲ್ಲಿ ಸಣ್ಣ ಪ್ರಮಾಣದಲ್ಲಿ ಗುರುವಾರ ನೆರೆ ಕಾಣಸಿಕೊಂಡಿದೆ.ಕೃಷಿ ಭೂಮಿಗಳು ಜಲಾವೃತ ಗೊಂಡಿವೆ.ಮಳೆ ಹೀಗೆ ಮುಂದುವರಿದರೆ ಸೌಪರ್ಣಿಕಾ ನದಿ ಪಾತ್ರ ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಲಿದೆ.

ಭಾರಿ ಗಾಳಿ ಮಳೆಗೆ ಉರುಳಿದ ಮರ:ವಿದ್ಯುತ್ ಸಂಪರ್ಕ ಕಡಿತ

ಕುಂದಾಪುರ:ಮುಳ್ಳಿಕಟ್ಟೆ-ನಾಯಕವಾಡಿ ಮುಖ್ಯ ರಸ್ತೆ ಮೇಲೆ ಹಾದು ಹೋದ 11,000.ಕೆ.ವಿ ವಿದ್ಯುತ್ ಲೈನ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ರಸ್ತೆಗೆ ಒರಗಿದೆ.ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ತಂತಿ ತುಂಡಾಗಿದ್ದರಿಂದ ಆಸುಪಾಸಿನ ಪರಿಸರದಲ್ಲಿ ಬೆಳಿಗ್ಗೆ ಯಿಂದ ಸಂಜೆ ತನಕ ವಿದ್ಯುತ್ ಕೈ ಕೊಟ್ಟಿದ್ದೆ.ಗುಜ್ಜಾಡಿ ಗ್ರಾ.ಪಂ ಮತ್ತು ಮೆ.ಸ್ಕಾಂ ಸಿಬ್ಬಂದಿಗಳು ಹಾಗೂ ಇಬ್ರಾಹಿಂ ಗಂಗೊಳ್ಳಿ ಮತ್ತು ಸ್ಥಳೀಯರು ಮರವನ್ನು ತೆರವು ಮಾಡಿದರು.

ಕುಬ್ಜ ನದಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅರ್ಚಕ ಸಾವು

ಕುಂದಾಪುರ:ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಿದ್ದ ಸಂದರ್ಭ ತಪ್ಪಲು ಎಂಬಲ್ಲಿ ಸೇತುವೆ ದಾಟುತ್ತಿದ್ದಾಗ ಕಮಲಶಿಲೆ ದೇವಳದ ಅರ್ಚಕ ಶೇಷಾದ್ರಿ ಐತಾಳ್(75) ಎನ್ನುವವರು ಕುಬ್ಜ ನದಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಘಟನೆ ನಡೆದಿದೆ.ಮುಳುಗು ತಜ್ಞ ಮಂಜುನಾಥ ಕನ್ನೇರಿ,ರಾಘವೇಂದ್ರ ಮೊಗವೀರ,ಕೌಶಿಕ್ ಶವವನ್ನು ಮೇಲೆಕ್ಕೆತ್ತಿದರು.ಕಳೆದ ಮೂರು ದಿನಗಳಿಂದ ಕುಂದಾಪುರ ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದರಿಂದ ಕುಬ್ಜ ನದಿಯಲ್ಲಿ ನೀರಿನ ಹರಿವು ಕೂಡ ಅಧಿಕವಾಗಿತ್ತು. (ಸೇತುವೆ )

You cannot copy content of this page