ತ್ರಾಸಿ:ಬೆಂಕಿ ತಗುಲಿ ಕಾರು ಭಸ್ಮ

ಕುಂದಾಪುರ:ತಾಲೂಕಿನ ತ್ರಾಸಿ ಸರ್ಕಲ್ ಬಳಿ ಪೆಟ್ರೋಲ್ ಬಂಕ್ ಎದುರುಗಡೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಕೆನ್ನಾಲಿಗೆಗೆ ವಿನಾಯಕ ಗ್ಯಾರೇಜ್ ಬಳಿ ನಿಲ್ಲಿಸಿದ ಹಳೆ ಕಾರೊಂದು ಸುಟ್ಟು ಕರಕಲಾಗಿದ್ದ ಘಟನೆ ಭಾನುವಾರ ನಡೆದಿದೆ.ಬೈಂದೂರು ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಬಂಕಿನಲ್ಲಿರುವ ಬೆಂಕಿ ನಿರೋಧಕ ಉಪಕರಣದ ಮೂಲಕ ಬೆಂಕಿಯನ್ನು ತಹಬದಿಗೆ ತರಲು ಪ್ರಾಥಮಿಕ ಹಂತದಲ್ಲಿ ಪ್ರಯತ್ನಿಸಿದ್ದರು.

ಪಡುವರಿ ಕಲ್ಲಾರ್‍ಹಿತ್ಲು,ನಜ್ರೆ ಹಿತ್ಲು ರಸ್ತೆ ಅಭಿವೃದ್ಧಿಗೆ ಆಗ್ರಹ

ಕುಂದಾಪುರ:ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಕಲ್ಲಾರ್ ಹಿತ್ಲು ಮತ್ತು ನಜ್ರೆಹಿತ್ಲು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ಸುಮಾರ್ 1 ಕಿ.ಮೀ ವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.ದುಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ಸಾಗುವುದು ಕಷ್ಟಕರವಾಗಿದ್ದು.ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯ ಸ್ವಸಾಹಯ ಸಂಘಗಳಾದ ಆಶಾದೀಪ,ದಿವ್ಯಜ್ಯೋತಿ,ಪ್ರಕೃತಿ,ಸ್ಪಂದನ ಹಾಗೂ ಧರ್ಮಸ್ಥಳ ಸ್ವಸಾಹಯ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಬೈಂದೂರು ಪಟ್ಟಣ ಪಂಚಾಯಿತಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ಇಲ್ಲಿ ತನಕ ಯಾವುದೆ ರೀತಿ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

ಮುಳ್ಳಿಕಟ್ಟೆಯಲ್ಲಿ ಲಾರಿ ಪಲ್ಟಿ:ಚಾಲಕನಿಗೆ ಗಾಯ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿಕಟ್ಟೆ ಸರ್ಕಲ್ ಸಮೀಪ ಅರಾಟೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಚಾಲಕ ಮತ್ತು ಕ್ಲಿನರ್ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚಾಲಕ ಅತಿಯಾದ ಮದ್ಯವನ್ನು ಸೇವಿಸಿದ್ದರ ಪರಿಣಾಮ ರಸ್ತೆಯನ್ನು ಗುರುತಿಸಲು ಸಾಧ್ಯವಾಗದೆ.ರಸ್ತೆ ಅಂಚಿನ ಮೇಲೆ ಲಾರಿ ಚಲಾಯಿಸಿದ್ದು.ನಿಯಂತ್ರಣ ಕಳೆದುಕೊಂಡ ಲಾರಿ ಮಗುಚಿ ಸರ್ವಿಸ್ ರಸ್ತೆ ಮೇಲೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯ […]

You cannot copy content of this page