ಗಂಗೊಳ್ಳಿ:ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕುಂದಾಪುರ:ಕಿನಾರಾ ಜ್ಯೋತಿ ಮತ್ತು ಪ್ರಗತಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ, ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಹೊಸತು ಆಚರಣೆ ಕಾರ್ಯಕ್ರಮ ಗಂಗೊಳ್ಳಿಯ ವಿಲ್ಸನ್ ಡಯಾಸ್ ಮನೆ ವಠಾರದಲ್ಲಿ ನಡೆಯಿತು.ಗಂಗೊಳ್ಳಿ ಚರ್ಚ್‍ನ ಧರ್ಮಗುರು ರೆ.ಫಾ.ತೋಮಸ್ ರೋಶನ್ ಡಿಸೋಜ ಆಶೀರ್ವಚನ ನೀಡಿದರು.ಚರ್ಚಿನ ಪಾಲನಾ ಮಂಡಳಿ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ,ಕುಂದಾಪುರ-ಬೈಂದೂರು ವಲಯದ ಸ್ವಸಹಾಯ ಸಂಘಗಳ ಪ್ರೇರಕಿ ಸಿಂತಿಯಾ ರೊಡ್ರಿಗಸ್,ಅಮೃತ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆಸಿಂತಾ ಮಿರಾಂದ ಉಪಸ್ಥಿತರಿದ್ದರು.ಹೆಣ್ಣು ಮಕ್ಕಳನ್ನು ಹಾಗೂ ಸ್ಥಳೀಯ ಶಿಕ್ಷಕರನ್ನು ಗೌರವಿಸಲಾಯಿತು.ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ […]

ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಉಪ್ರಳ್ಳಿ ಪದಾಧಿಕಾರಿಗಳ ಆಯ್ಕೆ

ಬೈಂದೂರು:ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಉಪ್ರಳ್ಳಿ ಅದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ದೇವಳದ ಮೊಕ್ತೇಸರರಾದ ಕಳಿ ಚಂದ್ರಯ್ಯ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಮಹಿಳಾ ಸಮಿತಿ ನೂತನ ಅಧ್ಯಕ್ಷರಾಗಿ ಶೈಲಾ ಆಚಾರ್ಯ ಉಪ್ಪುಂದ ಹಾಗೂ ಕಾರ್ಯದರ್ಶಿಯಾಗಿ ಜ್ಯೋತಿ ಆಚಾರ್ಯ ಗುಜ್ಜಾಡಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಸುಮತಿ ಆಚಾರ್ಯ ಕಿರಿಮಂಜೇಶ್ವರ,ಇಂದಿರಾ ಆಚಾರ್ಯ ನೀರ್ಕರೆ,ಶ್ರೀಮತಿ ಆಚಾರ್ಯ ಮರವಂತೆ,ಸವಿತ ಆಚಾರ್ಯ ಬಾರಂದಾಡಿ,ಶ್ರೀಮತಿ ಆಚಾರ್ಯ ಮರವಂತೆ,ಗಾಯಿತ್ರಿ ಆಚಾರ್ಯ ಮರವಂತೆ ಆಯ್ಕೆಯಾದರು.ಜೊತೆ ಕಾರ್ಯದರ್ಶಿಯಾಗಿ ಶರಾವತಿ ಆಚಾರ್ಯ ಪಡುಕೋಣೆ,ಸುಜಾತ ಆಚಾರ್ಯ ಕಟ್‍ಬೇಲ್ತೂರು,ಅನುಷಾ ಆಚಾರ್ಯ ಮಾಣಿಕೊಳಲು,ವಿಜಯ ಗಣೇಶ ಪುರೋಹಿತರು,ಕ್ರೀಡಾ ಕಾರ್ಯದರ್ಶಿಯಾಗಿ […]

ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನಾಟಾ(NATA) ತರಗತಿಯ ಉದ್ಘಾಟನೆ,ಮಾಹಿತಿ ಕಾರ್ಯಕ್ರಮ.

ಹೆಮ್ಮಾಡಿ:ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ನಾಟಾ(NATA) ಪರೀಕ್ಷೆಯ ತರಬೇತಿಯ ಕುರಿತಾಗಿ ಮಾಹಿತಿ ಕಾರ್ಯಕ್ರಮ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯ ಅಗತ್ಯತೆಯ ಕುರಿತು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಚಂದ್ರಶೇಖರ್ ರವರು ನಾಟಾ(NATA) ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ್ ಪೂಜಾರಿ,ಬೋಧಕ ಬೋಧಕೇತರ ವೃಂದದವರು,ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.ಉಪನ್ಯಾಸಕ ಅಭಿಜಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

You cannot copy content of this page