ಕಾರವಾರ:ಮುರಿದು ಬಿದ್ದ ಕಾಳಿ ಸೇತುವೆ,ಮುಂದುವರೆದ ಸೇತುವೆ ದುರ್ಘಟನೆ

Share

ಕಾರವಾರ:ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾರವಾರ ಮತ್ತು ಗೋವಾಕ್ಕೆ ಸಂಪರ್ಕಿಸುವ ಸುಮಾರು 40 ವರ್ಷಕ್ಕೂ ಹಳೆಯದಾದ ಕಾಳಿ ಸೇತುವೆ ಮಂಗಳವಾರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.ದೇಶಾದ್ಯಂತ ಸೇತುವೆ ಮುರಿದು ಬೀಳುವ ದುರ್ಘಟನೆ ಮುಂದುವರೆದಿದ್ದು ಜನರು ಆತಂಕಿತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಯಾವುದೆ ರೀತಿಯ ಮುನ್ಸೂಚನೆ ಸಿಗದೆ ಇರುವ ರೀತಿಯಲ್ಲಿ ನದಿಗೆ ರಾತ್ರೋರಾತ್ರಿ ಉರುಳಿ ಬಿದ್ದಿದೆ.ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ ಟ್ರಕ್ ನದಿಗೆ ಬಿದ್ದಿದೆ.ಟ್ರಕ್ ಚಲಾಯಿಸುತ್ತಿದ್ದ ತಮಿಳುನಾಡು ಮೂಲದ ಚಾಲಕ ಬಾಲ್ ಮುರುಗನ್ (37) ಟ್ರಕ್ ಮುಂಭಾಗದ ಗಾಜನ್ನು ಒಡೆದು ಲಾರಿ ಕ್ಯಾಬಿನ್ ಮೇಲೆ ಕುಳಿತು ರಕ್ಷಣೆ ಮಾಡುವಂತೆ ಕೂಗಿ ಕೊಂಡಿದ್ದರು.ಬೀಟ್ ಪೊಲೀಸ್ ಕಾರ್ಯಚರಣೆ ಮಾಡುತ್ತಿದ್ದ ಪೊಲೀಸರು ಲಾರಿ ಚಾಲಕನನ್ನು ರಕ್ಷಿಸಿದ್ದಾರೆ.ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.ರಾತ್ರಿ ಸಮಯದಲ್ಲಿ ದುರ್ಘಟನೆ ನಡೆದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಐಆರ್‍ಬಿ ಕಂಪನಿ ಒಂದು ಹೊಸ ಸೇತುವೆಯನ್ನು ಮಾತ್ರ ನಿರ್ಮಿಸಿದ್ದು.ಇನ್ನೊಂದು ಮಾರ್ಗದಲ್ಲಿ ಹಳೆ ಸೇತುವೆಯನ್ನೆ ಬಳಕೆ ಮಾಡಿಕೊಂಡಿತ್ತು.ಸೇತುವೆಯ ಗುಣಮಟ್ಟವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸದೆ ಕಾರಣದಿಂದಾಗಿ ಇವೊಂದು ಘಟನೆ ನಡೆದಿದೆ ಎಂದು ಜನರು ದೂರಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page