ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ ಧನ ಸಹಾಯ ಹಸ್ತಾಂತರ

Share

Advertisement
Advertisement

ಕುಂದಾಪುರ:ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ವತಿಯಿಂದ ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ 10,00,101 ರೂ ಮೊತ್ತದ ಚೆಕ್‍ನ್ನು ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮಾತನಾಡಿ, ಮೀನುಗಾರರು ಈ ಹಿಂದೆ ದೇವಸ್ಥಾನಕ್ಕೆ ಉಪ್ಪುಂದ ರಥವನ್ನು ನೀಡಿದ್ದು ಶ್ರೀ ದೇವರಲ್ಲಿ ಮೀನುಗಾರಿಕಾ ಉದ್ಯೋಗದಲ್ಲಿ ಸಮೃದ್ಧಿಯನ್ನು ಕರುಣಿಸುವ ಸಲುವಾಗಿ ಪ್ರಾರ್ಥಿಸಿದಂತೆ ಬೆಳ್ಳಿ ರಥದ ನಿರ್ಮಾಣಕ್ಕೆ ಸಂಘದ ಮೀನುಗಾರರ ವತಿಯಿಂದ ಈ ಕೊಡುಗೆ ನೀಡಲಾಗಿದೆ ಎಂದು ಹೇಳಿದರು.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮತ್ತು ನೂತನ ಅಧ್ಯಕ್ಷ ಅಳ್ವೆಕೋಡಿ ನಾಗೇಶ ಖಾರ್ವಿ ಚೆಕ್‍ನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ನಾಯ್ಕ ಅವರಿಗೆ ಹಸ್ತಾಂತರಿಸಿದರು.ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದದ ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ,ಕೋಶಾಕಾರಿ ಅಣ್ಣಯ್ಯ ಖಾರ್ವಿ,ಕಾರ್ಯಕಾರಿ ಮಂಡಳಿ ರಾಮ ಖಾರ್ವಿ,ಭಾಸ್ಕರ ಖಾರ್ವಿ,ಸುಬ್ರಹ್ಮಣ್ಯ ಖಾರ್ವಿ ಮತ್ತಿತರರು ಉಪಸ್ಥಿರಿದ್ದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page