ಸೌಪರ್ಣಿಕಾ ನದಿ ತೀರ ಪ್ರದೇಶಕ್ಕೆ ಜಲದಿಗ್ಬಂದನ
ಕುಂದಾಪುರ:ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯತ್ತಿರುವ ಕುಂಭದ್ರೋಣ ಮಳೆಗೆ ಸೌಪರ್ಣಿಕಾ ನದಿ ತುಂಬಿ ಹರಿದ ಪರಿಣಾಮ ಅರೆಹೊಳೆ,ಬಡಾಕೆರೆ,ನಾವುಂದ ಸಾಲ್ಬಡ,ಮರವಂತೆ,ನಾವುಂದ ಕುರು ಹಾಗೂ ಕುರು ದ್ವೀಪ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ನೆರೆ ಕಾಣಿಸಿಕೊಂಡಿದ್ದು ನದಿ ಪಾತ್ರ ಪ್ರದೇಶ ಜಲಾವೃತಗೊಂಡಿದೆ.ಸಾವಿರಾರು ಹೆಕ್ಟರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.











































































































































































































































































































































































































































































































































































































































































































































































































































































































































































































































































































































































































































































































































































































































































