ಯೋಗೀಶ್‍ಗಾಗಿ ಸಮುದ್ರದಲ್ಲಿ ತೀವ್ರವಾದ ಹುಡುಕಾಟ

Share

Advertisement
Advertisement

ಕುಂದಾಪುರ:ತುಮಕೂರು ಜಿಲ್ಲೆಯ ತಿಪಟೂರು ನಿವಾಸಿಯಾದ ಯೋಗೀಶ್ ( 22) ಎನ್ನುವ ಯುವಕ ತನ್ನ ಸ್ನೇಹಿತನೊಂದಿಗೆ ಕುಂದಾಪುರ ತಾಲೂಕಿನ ಬಿಜಾಡಿ ಸಮುದ್ರ ಕಿನಾರೆ ಬಳಿ ಜೂನ್.19 ರಂದು ವಿಹಾರ ನಡೆಸುತ್ತಿದ್ದ ಸಮಯದಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.ಯೋಗೀಶ್ ಅವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಮೂಲಕ ಸಮುದ್ರದಲ್ಲಿ ಹುಡುಕಾಟ ಮುಂದುವರೆಸಲಾಗಿದೆ.
ಗಂಗೊಳ್ಳಿ ಕಡಲ ತೀರದಿಂದ ಸುಮಾರು ಎಂಟು ಮಾರು ದೂರದಲ್ಲಿ ಸಮುದ್ರದಲ್ಲಿ ಶವ ತೇಲುತ್ತಿರುವುದರ ಬಗ್ಗೆ ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಮೇರೆಗೆ ಬೋಟ್ ಮೂಲಕ ಶುಕ್ರವಾರ ವಿಶೇಷ ಕಾರ್ಯಾಚರಣೆ ಮೂಲಕ ಹುಡುಕಾಟ ನಡೆಸಲಾಗಿದೆ.ಆದರೆ ತಿಪಟೂರಿನ ಯೋಗೀಶ್ ಇನ್ನೂ ಪತ್ತೆ ಆಗಿಲ್ಲ.
ಕಾರ್ಯಾಚರಣೆಯಲ್ಲಿ ಕುಂದಾಪುರ ಸಿಪಿಐ ನಂದಕುಮಾರ ಮತ್ತು ಪಿಎಸ್‍ಐ ಪ್ರಸಾದ್,ಬೈಂದೂರು ಸಿಪಿಐ ಸವಿತ್ರತೇಜ,ಗಂಗೊಳ್ಳಿ ಪಿಎಸ್‍ಐ ಬಸವರಾಜ್ ಕಣಶೆಟ್ಟಿ ಹಾಗೂ ಅಶೋಕ ಪೂಜಾರಿ ಬಿಜಾಡಿ ಭಾಗವಹಿಸಿದ್ದರು.ಮುಳುಗುತಜ್ಞ ದಿನೇಶ್ ಖಾರ್ವಿ ಲೈಟ್‍ಹೌಸ್ ಗಂಗೊಳ್ಳಿ ಮತ್ತು ಕರಾವಳಿ ಪೆÇಲೀಸ್ ಪಡೆ ಸಿಬ್ಬಂದಿಗಳು ಬೋಟ್ ಮೂಲಕ ಸಮುದ್ರದಲ್ಲಿ ಕಾರ್ಯಚರಣೆ ನಡೆಸಿದ್ದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page