ತೆಂಗಿನ ತೋಟಕ್ಕೆ ವಿಶೇಷ ರೋಗ ಭಾಧೆ,ಜಿಲ್ಲಾ ರೈತ ಸಂಘ ಭೇಟಿ

Share

Advertisement
Advertisement

ಕುಂದಾಪುರ:ವಿಶೇಷ ರೋಗ ಭಾಧೆಗೆ ತುತ್ತಾಗಿರುವ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡ ಕುದ್ರು ಮತ್ತು ಮುವತ್ತು ಮುಡಿ ಭಾಗದ ತೆಂಗಿನ ತೋಟಕ್ಕೆ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರುಗಳು ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಿಜ್ಞಾನಿಗಳು ಮತ್ತು ರೈತರೊಂದಿಗೆ ಮಾತುಕತೆ ನಡೆಸಿದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪ ಶೆಟ್ಟಿ,ತ್ರಾಸಿ ವಲಯ ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ,ಕಂಬದಕೋಣೆ ರೈತ ಸಂಘದ ಅಧ್ಯಕ್ಷ ಪ್ರತಾಪಶ್ಚಂದ್ರ ಶೆಟ್ಟಿ,ಕಿಶನ್ ಹೆಗ್ಡೆ ಮೊಳಹಳ್ಳಿ,ವಡಂಬಳ್ಳಿ ಜಯರಾಮ ಶೆಟ್ಟಿ,ವಂಡ್ಸೆ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ,ಬಾಬು ಹೆಗ್ಡೆ,ಸಂಜೀವ ಶೆಟ್ಟಿ,ಡಾ.ಅತುಲ್ ಕುಮಾರ್ ಶೆಟ್ಟಿ,ವಿಜ್ಞಾನಿ ಡಾ.ರೇವಣ್ಣ ರೇವಣ್ಣನವರ್,ತೋಟಗಾರಿಕೆ ಇಲಾಖೆ ಅಧಿಕಾರಿ ನಿಧೀಶ್ ಹಾಗೂ ರೈತ ಸಂಘದ ಪ್ರಮುಖ ಮುಖಂಡರುಗಳು ಮತ್ತು ಪ್ರತಿನಿಧಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಕನ್ನಡ ಕುದ್ರು ಮತ್ತು ಮುವತ್ತು ಮುಡಿ ಭಾಗದಲ್ಲಿ ಸಾವಿರಾರರು ತೆಂಗಿನ ಮರಗಳು ಗರಿ ತಿನ್ನುವ ಹುಳು ಬಾಧೆ ಕಾಯಿಲೆ ತುತ್ತಾಗಿದ್ದು ತೆಂಗು ಬೆಳೆಗಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page