ಜಲ ಜೀವನ್ ನೀರಿನ ಪೈಪ್ ಲೈನ್ ಅವಾಂತರ

Share

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಪಕ್ಕದಲ್ಲಿ ಹಾದು ಹೋಗಿರುವ ಜಲ ಜೀವನ್ ಮಿಷನ್ ನೀರಿನ ಪೈಪ್ ಲೈನ್‍ನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇದ್ದಿದ್ದರಿಂದ ಹೊಂಡದಲ್ಲಿ ವಾಹನಗಳು ಸಿಲುಕಿ ಕೊಂಡು ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಂಗಡಿ ಮುಂಗಟ್ಟುಗಳ ಎದುರುಗಡೆ ನೀರಿನ ಪೈಪ್ ಲೈನ್ ಹೊಂಡವನ್ನು ತೆಗೆದಿದ್ದು ಸಮಪರ್ಕವಾದ ರೀತಿಯಲ್ಲಿ ಹೊಂಡಕ್ಕೆ ಮಣ್ಣನ್ನು ಹಾಕದೆ ಹಾಗೆ ಬಿಡಲಾಗಿದೆ.ಮಳೆ ನೀರು ಹೊಂಡದಲ್ಲಿ ತುಂಬಿಕೊಂಡಿದ್ದು ಹೊಂಡದಲ್ಲಿನ ಮಣ್ಣು ಮೃದುವಾಗಿದ್ದರಿಂದ ರಸ್ತೆ ಬದಿ ಅಂಚಿಗೆ ಬರುವ ವಾಹನಗಳು ಹೊಂಡದಲ್ಲಿ ಸಿಲುಕಿಕೊಳ್ಳುತ್ತಿದೆ.ವ್ಯಾಪಾರಸ್ಥರಿಗೂ ತೊಂದರೆ ಆಗುತ್ತಿದೆ.ಸಮರ್ಪಕವಾದ ರೀತಿಯಲ್ಲಿ ಜಲ ಜೀವನ್ ಮಿಷನ್ ನೀರಿನ ಪೈಪ್ ಲೈನ್ ಹೊಂಡವನ್ನು ನಿರ್ವಹಣೆ ಮಾಡುವಂತೆ ವರ್ತಕರು ಆಗ್ರಹಿಸಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page