ಏಪ್ರಿಲ್.11 ರಂದು ಶ್ರೀಶಾರದಾ ಸದ್ವಿದ್ಯಾ ವಸಂತ ಶಿಬಿರ ಉದ್ಘಾಟನೆ

Share

ಕುಂದಾಪುರ:ವಸಂತ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಏಪ್ರಿಲ್ 11 ರ ಗುರುವಾರದಂದು ಮಧ್ಯಾಹ್ನ 2.30ಕ್ಕೆ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ನಡೆಯಲಿದೆ.
ಹಾಲಾಡಿ ಪಂಚಾಂಗಕರ್ತರು ವಿದ್ವಾನ್ ವಾಸುದೇವ ಜೋಯಿಸರು ತಟ್ಟುವಟ್ಟು,ನಾಗಯಕ್ಷೀ ಪಾತ್ರಿಗಳು ಮತ್ತು ಆಡಳಿತ ಧರ್ಮದರ್ಶಿಗಳು ಶ್ರೀರಾಜರಾಜೇಶ್ವರಿ ದೇವಸ್ಥಾನ ಪಡುಕೋಣೆ ರಾಜೇಶ್ ಹೆಬ್ಬಾರ್,ಮಾಜಿ ಧರ್ಮದರ್ಶಿಗಳು ಶ್ರೀಕ್ಷೇತ್ರ ಕೊಲ್ಲೂರು ರಾಜೇಶ್ ಕಾರಂತ್ ಉಪ್ಪಿನಕುದ್ರು,ನಿವೃತ್ತ ಮಹಾಪ್ರಬಂಧಕರು ಕರ್ನಾಟಕ ಬ್ಯಾಂಕ್ ಯರ್ಲಪಾಡಿ ನಾಗರಾಜ ರಾವ್ ಬಾಯರಿ,ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಕಳಿ ಆಲೂರು ಡಾ.ರಾಜೇಶ್ ಬಾಯರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸನ್ಮಾನ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ವಿತರಣೆ:-ವೇದ.ಮೂರ್ತಿ ಸೀತಾರಾಮ ಅಡಿಗ ಬೈಂದೂರು,ವೇದ ಮೂರ್ತಿ ನಾಗೇಶ್ ಭಟ್ಟ್ ದೇವಲ್ಕುಂದ,ವಿಶ್ರಾಂತ ಅಧ್ಯಾಪಕರು ಮದವ ಮಂಜರು ಅರೆಹೊಳೆ ಅವರನ್ನು ವಸಂತ ಶಿಬಿರದಲ್ಲಿ ಸನ್ಮಾನಿಸಲಾಗುತ್ತದೆ.ವೇದ ಮೂರ್ತಿ ನಾಗೇಂದ್ರ ಹೆಬ್ಬಾರ್ ಬವಲಾಡಿ ರಂಗೋಲಿ ಚಿತ್ರಕಾರರು,ಪ್ರಾಣಿ ಪಕ್ಷಿಕಗಳ ಸಂರಕ್ಷಕರು ಉರಗ ತಜ್ಞರಾದ ಸುಧೀಂದ್ರ ಐತಾಳ್,ಕವಿಗಳಾದ ಮಂಜುನಾಥ ಮರವಂತೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ಹಾಗೂ ನಾಗ ಪಾತ್ರಿಗಳು ವೇದ ಮೂರ್ತಿ ಲೋಕೇಶ್ ಅಡಿಗ ತಿಳಿಸಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page