ಕೇವಲ 29 ರೂಪಾಯಿಗಳಿಗೆ ಭಾರತ ಅಕ್ಕಿ,ಮೋದಿ ಗ್ಯಾರಂಟಿ

Share

Advertisement
Advertisement

ಕುಂದಾಪುರ:ದೇಶದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಅಕ್ಕಿ ವಿತರಿಸುವ ನಿಟ್ಟಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊರತಂದಿರುವ ಭಾರತ್ ಅಕ್ಕಿ ವಿತರಣೆಗೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಉಪ್ಪುಂದ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ಚಾಲನೆ ನೀಡಿದರು.ಹಸಿವು ಮುಕ್ತ ಭಾರತ ಪರಿಕಲ್ಪನೆ ಇಟ್ಟುಕೊಂಡು, ದೇಶದ ಎಲ್ಲರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ತಲುಪಿಸಲು ಕೇವಲ 29 ರೂಪಾಯಿಳಿಗೆ ಭಾರತ್ ಬ್ರ್ಯಾಂಡ್‌ ಅಕ್ಕಿಯನ್ನು ಭಾರತ್‌ ರೈಸ್‌ ಹೆಸರಿನಲ್ಲಿ ವಿತರಿಸಲಾಗುತ್ತಿದೆ.ಇದು ನಿಜವಾದ ಮೋದಿಜಿ ಅವರ ಗ್ಯಾರಂಟಿ ಯೋಜನೆಯಾಗಿದೆ. ಯಾರೂ ಕೂಡ ಕಡಿಮೆ ಬೆಲೆಗೆ ಖರೀದಿಸಬಹುದಾದ ಅಕ್ಕಿ ಬಿಡುಗಡೆಗೊಳಿಸಿರುವುದು ಜನಸಾಮಾನ್ಯರಿಗೆ ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

Advertisement

ಭಾರತ ಬ್ರಾಂಡ್ ಅಕ್ಕಿ ವಿತರಣೆಗೆ ಯಾವುದೇ ರೀತಿಯ ಏಜೆಂಟರು,ಮಧ್ಯವರ್ತಿಗಳ ಹಾವಳಿಯಿಲ್ಲ.ನೇರವಾಗಿ ಮಳಿಗೆಗಳಲ್ಲಿ ಅಕ್ಕಿ ಖರೀದಿಸಬಹುದಾಗಿದೆ ಮತ್ತು ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ಕಿ ವಿತರಣೆಗೆ ಸಿದ್ಧತೆ ನಡೆಸಲಾಗಿದೆ.ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು 29 ರೂಪಾಯಿಗಳಿಗೆ ಅಕ್ಕಿ ಒದಗಿಸುವ ಮೂಲಕ ಬೆಲೆ ಏರಿಕೆಯ ಪ್ರಭಾವ ಕೂಡಾ ಜನಸಾಮಾನ್ಯರಿಗೆ ತಟ್ಟದಿರುವಂತೆ ಮೋದಿ ಸರ್ಕಾರ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page