ಸುವರ್ಣ ಸಂಭ್ರಮ,ಸೀತಾರಾಮ ಕಲ್ಯಾಣೋತ್ಸವ ಪೂರ್ವಭಾವಿ ಸಭೆ

Share

Advertisement
Advertisement

ಕುಂದಾಪುರ:ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಸಂಭ್ರಮ ಹಾಗೂ ಸೀತಾರಾಮ ಕಲ್ಯಾಣೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ಮಂಗಳವಾರ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಕುರಿತು ವೇ.ಮೂರ್ತಿ ಚೆನ್ನಕೇಶವ ಗಾಯಿತ್ರಿ ಭಟ್ ಆನಗಳ್ಳಿ ಅವರ ನೇತೃತ್ವದಲ್ಲಿ ಜಾಗದ ಪರಿಶೀಲನೆ ಮಾಡಲಾಯಿತು.ಶ್ರೀರಾಮ ತಾರಕ ಜಪಾ ಹೋಮ ಮಾಡುವುದರ ಕುರಿತು ಹೋಮದ ಕುಂಡವನ್ನು ಅರ್ಚಕರ ಉಪಸ್ಥಿತಿಯಲ್ಲಿ ರಚಿಸಲಾಯಿತು.ಮಹಿಳಾ ಸಮಿತಿ ಯಿಂದ ಸಭೆ ಜರುಗಿತು.
ವೇ.ಮೂರ್ತಿ ಚೆನ್ನಕೇಶವ ಗಾಯಿತ್ರಿ ಭಟ್ ಆನಗಳ್ಳಿ ಅವರು ಧಾರ್ಮಿಕ ಸೂಚನೆಗಳನ್ನು ವಿವರಿಸಿ ಮಾತನಾಡಿ,ದೇವರ ಪೂಜೆ ಮಾಡುವುದರಿಂದ ಮನಸ್ಸು ನಿರ್ಮಲಗೊಳ್ಳುವುದರ ಜತೆಗೆ ನಮ್ಮೊಳಗೆ ಧಾರ್ಮಿಕ ಪ್ರಜ್ಞೆ ಜಾಗ್ರತಾಗೊಳ್ಳುವಂತೆ ಮಾಡುತ್ತದೆ.ತ್ಯಾಗದ ಮನೋಭಾವದಿಂದ ದೇವತಾ ಕಾರ್ಯದಲ್ಲಿ ತೊಡಗಿಕೊಂಡಾಗ ಮಾತ್ರ ಪುಣ್ಯದ ಫಲ ನಮಗೆ ದೊರಕುತ್ತದೆ ಎಂದು ಹೇಳಿದರು.

Advertisement

ರಾಘು ವಿ.ಕೆ ಧಾರ್ಮಿಕ ಕಾರ್ಯಕ್ರಮದ ಕುರಿತು ವಿವರಿಸಿ ಮಾತನಾಡಿ,ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಅಂಗವಾಗಿ ಎಪ್ರಿಲ್ 11 ರಿಂದ ಧಾರ್ಮಿಕ ಕಾರ್ಯಕ್ರಮವು ದೀಪಸ್ಥಾಪನೆಯೊಂದಿಗೆ ಆರಂಭಗೊಂಡು ಅಷ್ಟ ದಿನಗಳ ಪರ್ಯಾಂತ ನಡೆಯಲಿದೆ ಎಂದು ಹೇಳಿದರು.ಎಪ್ರಿಲ್ 15 ರಂದು ಸಾಗರೇಶ್ವರ ಪೂಜೆ ಅಂಬಿಗರ ಚೌಡಯ್ಯ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಲಿದೆ ಹಾಗೂ ಎಪ್ರಿಲ್ 18 ರಂದು ಐತಿಹಾಸಿಕ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಲಿದೆ ದೇವತಾ ಕಾರ್ಯದ ನಿಮಿತ್ತ ಹಮ್ಮಿಕೊಳ್ಳುವ ಮಹಾಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಕೇಳಿಕೊಂಡರು.
ಕಂಚುಗೋಡು ಶ್ರೀರಾಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು,ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚೌಕಿ 888 ಸಂತೋಷ್ ಖಾರ್ವಿ ಮತ್ತು ಗೌರವಾಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ,ಸಲಹೆಗಾರ ದೇವಿದಾಸ್,ಮಹಿಳಾ ಸಮಿತಿ ಅಧ್ಯಕ್ಷೆ ಯಶೋಧ ಖಾರ್ವಿ ಹಾಗೂ ಎಲ್ಲಾ ಸಮಿತಿಗಳ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page