ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಶ್ರೀಮನಹ್ಮಾ ಬ್ರಹ್ಮರಥೋತ್ಸವ


ಕುಂದಾಪುರ:ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಬೈಂದೂರು ತಾಲೂಕಿನ ಪ್ರಸಿದ್ಧ ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಶ್ರೀಮನಹ್ಮಾ ಬ್ರಹ್ಮರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಹಬ್ಬದ ಪ್ರಯುಕ್ತ ವಿಶೇಷ ಕಟ್ಟೆ ಪೂಜೆ ಹಾಗೂ ಪ್ರತಿ ಮನೆಯಲ್ಲಿ ದೀಪಾಲಂಕಾರ ರಂಗೋಲಿ ಹಾಕಿ ದೇವರನ್ನು ಬರಮಾಡಿಕೊಳ್ಳುತ್ತಾರೆ.ಕಟ್ಟಿ ಪೂಜೆ ಇಲ್ಲಿನ ವಿಶೇಷ ಆಕರ್ಷಣೆ ಬಿಂದುವಾಗಿದೆ.
ಶ್ರೀ ಲಕ್ಷ್ಮೀ ಜನಾರ್ದನ ದೇವರ ರಥೋತ್ಸವ ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ಅಲಂಕಾರ ಪೂಜೆ,ಹಣ್ಣುಕಾಯಿ,ವಿಶೇಷ ಪೂಜೆ ಸಮರ್ಪಣೆ,ಮಂಗಳಾರತಿ ಸೇವೆ,ತುಲಭಾ,ಪಂಚಕಜ್ಜಾಯ ನೈವೇದ್ಯ,ಚೂರ್ಣೋತ್ಸವ, ಮತ್ತು ಅನ್ನ ಸಂತರ್ಪಣೆ ಸೇವೆ ನಡೆಯಿತು.ರಾಜಾರಾಮ ಸೋಮಾಯಾಜೀ ಮತ್ತು ಊರಿನ ಪುರೋಹಿತರು ಜೊತೆಗೂಡಿ ಧಾರ್ಮಿಕ ಕ್ರಾಯಕ್ರಮಗಳನ್ನು ನಡೆಸಿಕೊಟ್ಟರು.ಹರಕೆ ರೂಪದಲ್ಲಿ ಕರ್ಪೂರವನ್ನು ದೇವರಿಗೆ ಸಲ್ಲಿಸುವುದು ಇಲ್ಲಿನ ವಿಶೇಷತೆ ಆಗಿದೆ.
ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕರ್ಪೂರ ಸೇವೆ ನಡೆಯುವ ದೇವಸ್ಥಾನವಾಗಿದೆ.ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿ ಅಧ್ಯಕ್ಷರು,ಕಾರ್ಯದರ್ಶಿ,ಸರ್ವ ಸದಸ್ಯರು,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.