ವೀರೇಂದ್ರ ಸೆಹ್ವಾಗ್ ಬೈಂದೂರು ಶಾಸಕರ ಆಹ್ವಾನ

Share

Advertisement
Advertisement

ಕುಂದಾಪುರ:ಖ್ಯಾತ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಉಡುಪಿ ಜಿಲ್ಲೆಯ ತ್ರಾಸಿ ಬೀಚ್ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ಬೀಚ್ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದರು.ಇದನ್ನು ಗಮಿಸಿದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿಶ್ವ ವಿಖ್ಯಾತ ತ್ರಾಸಿ-ಮರವಂತೆ ಬೀಚ್‍ಗೆ ಆಗಮಿಸುವಂತೆ ವೀರೇಂದ್ರ ಸೆಹ್ವಾಗ್ ಅವರಿಗೆ ತಮ್ಮ ಎಕ್ಸ್ ಖಾತೆಯಲ್ಲಿ ವೆಲ್‍ಕಲ್‍ಂ ಸೆಹ್ವಾಗ್ ಎಂದು ಟ್ಯಾಗ್ ಮಾಡುವ ಮೂಲಕ ಆಹ್ವಾನವನ್ನು ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಕ್ಷ ದ್ವೀಪಕ್ಕೆ ಭೇಟಿ ನೀಡಿರುವುದನ್ನು ಅಣುಕಿಸಿದ ಮಾಲ್ಡೀವ್ಸ್ ಸರಕಾರದ ವಿರುದ್ಧ ಸಿಟ್ಟಿಗೆದ್ದಿದ್ದ ಭಾರತೀಯರು ಅಲ್ಲಿನ ಬೀಚ್ ಪ್ರವಾಸೋದ್ಯಮವನ್ನು ತಿರಸ್ಕರಿಸಿಸುವಂತೆ ಕರೆ ನೀಡಿದ್ದರು.ಭಾರತೀಯ ಸೆಲೆಬ್ರೆಟಿಗಳು ದೇಶಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಮಾಜಿಕ ಜಾಲಾತಾಣಗಳಲ್ಲಿ ವಿಶೇಷವಾದ ಅಭಿಯಾನವನ್ನು ಆರಂಭಿಸಿದ್ದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page