ಹೊಸಾಡು:ಸಹಕಾರಿ ಸಪ್ತಾಹ,ಸನ್ಮಾನ ಕಾರ್ಯಕ್ರಮ

Share

Advertisement
Advertisement

ಕುಂದಾಪುರ:70ನೇ ಸಹಕಾರಿ ಸಪ್ತಾಹದ ಅಂಗವಾಗಿ ಶ್ರೀಗಣೇಶ್ ಕ್ರೆಡಿಟ್ ಸೊಸೈಟಿ ಹೊಸಾಡು-ಮುಳ್ಳಿಕಟ್ಟೆ ವತಿಯಿಂದ ಸಹಕಾರಿ ಸಪ್ತಾಹ ಹಾಗೂ ಸನ್ಮಾನ ಕಾರ್ಯಕ್ರಮ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷ ರವೀಶ್ ಹೊಳ್ಳ,ಸಂಘದ ನಿರ್ದೇಶಕರಾದ ಚಂದ್ರ ನಾಯ್ಕ,ಮಂಜುನಾಥ,ಗೋಪಾಲಕೃಷ್ಣ ಐತಾಳ್,ಶಾಂತರಾಮ ಭಟ್,ಸುಮಾವತಿ,ಸರಸ್ವತಿ,ಗೋಪಾಲ ಆಚಾರ್ಯ,ರಾಘವೇಂದ್ರ ಶೆಟ್ಟಿ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ನಿವೃತ್ತ ಸಹಕಾರಿ ಉದ್ಯೋಗಿ ಗೋಪಾಲ ಪಿಂಚಿಕಾನ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಂಘದ ಸಲಹೆಗಾರ ವಿಶ್ವಂಭರ ಐತಾಳ್ ಸ್ವಾಗತಿಸಿದರು.ಲೆಕ್ಕಿಗ ಶ್ರೀಕರ ಐತಾಳ್ ಸಹಕರಿಸಿದರು.ಸಿಇಒ ಅಶ್ವಿನಿ ವಂದಿಸಿದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page