ಮೀನುಗಾರರಿಗೆ ಸುರಕ್ಷತೆಯನ್ನು ಕೊಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ

Share

ಕುಂದಾಪುರ:ಅಗ್ನಿ ಅನಾಹುತದಿಂದ ಬೋಟ್ ಮತ್ತು ಬಲೆಗಳು ನಾಶವಾಗಿದ್ದರಿಂದ ಹೊಟ್ಟೆ ಪಾಡಿಗಾಗಿ ದುಡಿಯುತ್ತಿರುವ ನೂರಾರು ಮೀನುಗಾರಿಕಾ ಕುಟುಂಬಗಳು ಬೀದಿಗೆ ಬಂದಿದೆ.ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೀನುಗಾರರಿಗೆ ಆದತಂಹ ಸಂಕಷ್ಟದ ಬಗ್ಗೆ ಶಾಸಕರ ಜತೆ ಸೇರಿ ಮನವಿಯನ್ನು ಸಲ್ಲಿಸಲಾಗಿದೆ.ಜಿಲ್ಲಾಧಿಕಾರಿಗಳ ಜತೆಗೂ ಮಾತನಾಡಲಾಗಿದ್ದು ಸೂಕ್ತ ಪರಿಹಾರವನ್ನು ನೀಡುವ ದೃಷ್ಟಿಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.ಜೀವನದ ಹಂಗನ್ನು ಮರೆತು ಸಮುದ್ರದ ಮಧ್ಯೆ ಬದುಕಿಗಾಗಿ ಹೋರಾಟ ಮಾಡುತ್ತಿರುವ ಮೀನುಗಾರರಿಗೆ ಸುರಕ್ಷತೆಯನ್ನು ಕೊಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕುಂದಾಪುರ ತಾಲೂಕಿನ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ವಾರ್ಪ್ ಬಂದರಿನಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅನಾಹುತದ ಘಟನೆಯ ಸ್ಥಳಕ್ಕೆ ಗುರುವಾರ ಭೇಟಿ ನೀಡಿ,ಪರಿಶೀಲನೆ ನಡೆಸಿದ ಅವರು ಮೀನುಗಾರರ ಜತೆ ಮಾತನಾಡಿದರು.
ಈ ರೀತಿ ಆಘಾತಗಳು ಮುಂದೆ ಮರುಕಳಿಸದಂತೆ ಜಾಗೃತಗೊಳ್ಳುವ ದೃಷ್ಟಿಯಿಂದ ಕರಾವಳಿ ತೀರದ ಮೀನುಗಾರಿಕಾ ಪ್ರದೇಶಗಳಲ್ಲಿ ಪಂಪ್ ಹೌಸ್ ನಂತಹ ವಿಶೇಷವಾದ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು.ಮೀನುಗಾರರ ಹಿತದೃಷ್ಟಿಯಿಂದ ರಾಜ್ಯ ಸರಕಾರವು ಕೂಡ ಬಂದರು ಇಲಾಖೆ ಮುಖಾಂತರ ವಿಶೇಷವಾದ ರೀತಿಯಲ್ಲಿ ಗಮನವನ್ನು ನೀಡಬೇಕಾಗಿದೆ ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ,ಗಂಗೊಳ್ಳಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್,ಸದಾನಂದ ಉಪ್ಪಿನಕುದ್ರು,ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ,ಸುರೇಶ ಶೆಟ್ಟಿ ಉಪ್ಪÅಂದ,ಸದಾಶಿವ ಖಾರ್ವಿ,ರಮೇಶ್ ಕುಂದರ್,ಸುರೇಂದ್ರ ಖಾರ್ವಿ,ಗಂಗೊಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಖಾರ್ವಿ ಲೈಟ್‍ಹೌಸ್,ಹರೀಶ್ ಮೇಸ್ತ,ದಿವಾಕರಶೆಟ್ಟಿ,ಮೀನುಗಾರರು,ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page