ಸೇನಾಪುರ:ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

Share

ಕುಂದಾಪುರ:ತಾಲೂಕಿನ ಸೇನಾಪುರ ಕೊಂಕಣ ರೈಲು ನಿಲ್ದಾಣದಲ್ಲಿ ಎಲ್ಲಾ ಮಾದರಿಯ ಎಕ್ಸ್ ಪ್ರೆಸ್ ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ರೈಲು ಹೋರಾಟ ಸಮಿತಿ ಸೇನಾಪುರ ಹಾಗೂ ವತಿಯಿಂದ ನಾಡ ಗ್ರಾಮ ಪಂಚಾಯತ್ ಬಳಿಯಿಂದ ಸೇನಾಪುರ ರೈಲು ನಿಲ್ದಾಣದ ಒರಗೆ ಬೃಹತ್ ಕಾಲ್ನಡಿಗೆ ಜಾಥಾ ಮಂಗಳವಾರ ನಡೆಯಿತು.ಹಲವಾರು ಸಂಘಟನೆಯ ಸದಸ್ಯರು,ಗ್ರಾಮಸ್ಥರು,ಸಾರ್ವಜನಿಕರು ಗುಜ್ಜಾಡಿ,ನಾಡ,ಆಲೂರು,ಹಕ್ಲಾಡಿ,ಹೊಸಾಡು,ತ್ರಾಸಿ ಸೇರಿದಂತೆ ಹಲವಾರು ಪಂಚಾಯಿತಿಗಳ ಅಧ್ಯಕ್ಷರು ಮತ್ತು ಸದಸ್ಯರು,ಹೋರಾಟ ಸಮಿತಿ ಮುಖಂಡರುಗಳು,ರೈತರು,ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಿದ್ದರು.
ಪತ್ರಿಭಟನೆ ಸಭೆ ಬಳಿಕ ರೈಲ್ವೆ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.ಪೆÇಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.

Advertisement

Share

Leave a comment

Your email address will not be published. Required fields are marked *

You cannot copy content of this page