ಮರವಂತೆ:ಸ್ಚಚ್ಛಾ ಭಾರತ ಅಭಿಯಾನ ವಿಶ್ವವ್ಯಾಪಿಯಾಗಿ ಪಸರಿಸಿದೆ

Share

ಕುಂದಾಪುರ:ಪ್ರಧಾನ ಮಂತ್ರಿಗಳ ಮಹಾತ್ವಾಕಾಂಕ್ಷಿ ಯೋಜನೆ ಸ್ಚಚ್ಛಾ ಭಾರತ ಅಭಿಯಾನ ಇಂದು ವಿಶ್ವವ್ಯಾಪಿಯಾಗಿ ಪಸರಿಸಿದೆ ಸ್ವಚ್ಛತೆ ಎನ್ನುವುದು ಕಾನೂನಿ ನಿಂದ ಬರುವಂತಹದ್ದು ಅಲ್ಲಾ ಅರಿವು ನಿಂದ ಆಗುವಂತದ್ದು ತ್ಯಾಜ್ಯ ಮುಕ್ತ ಪರಿಸರವನ್ನು ನಿರ್ಮಾಣ ಮಾಡಲು ಎಲ್ಲರೂ ಪಣ ತೊಡಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್,ಕುಂದಾಪುರ ಮತ್ತು ಬೈಂದೂರು ತಾಲೂಕು ಪಂಚಾಯತ್ ಹಾಗೂ ಹೊಸಾಡು,ತ್ರಾಸಿ,ಗುಜ್ಜಾಡಿ,ಮರವಂತೆ ಪಂಚಾಯತ್ ಸಹಭಾಗಿತ್ವದಲ್ಲಿ ಭಾನುವಾರ ತ್ರಾಸಿ-ಮರವಂತೆ ಬೀಚ್‍ನಲ್ಲಿ ನಡೆದ ಸ್ವಚ್ಛತಾ ಹೀ ಸೇವಾ,ಸ್ವಚ್ಛತೇಯೆ ಸೇವೆ ಎಂಬ ವಿಶೇಷ ಆಂದೋಲನದ ಪ್ರಯುಕ್ತ ಆಯೋಜಿಸಿದ ಸ್ವಚ್ಛತಾ ಅಭಿಯಾನ ಮತ್ತು ಮಾನವ ಸರಪಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತ್ರಾಸಿ ಪಂಚಾಯತ್ ಅದ್ಯಕ್ಷ ಮಿಥುನ್ ದೇವಾಡಿಗ,ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ,ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ,ಹೊಸಾಡು ಪಂಚಾಯಿತಿ ಆಡಳಿತಾಧಿಕಾರಿ ರಘುರಾಮ ಶೆಟ್ಟಿ,ಕುಂದಾಪುರ ಇಒ ಶಶಿಧರ ಕೆ.ಜಿ,ಬೈಂದೂರು ಇಒ ಭಾರತಿ,ಸುಮುಖ ಸುರೇಶ ಶೆಟ್ಟಿ ಉಪ್ಪುಂದ,ಪಂಚಾಯತ್ ಸದಸ್ಯರು,ಬಿ.ಬಿ.ಹೆಗ್ಡೆ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು,ಎಸ್‍ಎಲ್‍ಆರ್‍ಎಂ ಘಟಕ,ಎಂಆರ್‍ಎಫ್ ಘಟಕದ ಸಿಬ್ಬಂದಿಗಳು,ಆಶಾ ಮತ್ತು ಅಂಗನವಾಡಿ,ಆರೋಗ್ಯ ಕಾರ್ಯಕರ್ತೆಯರು,ಸಂಜೀವಿನಿ ಸಂಘದ ಸದಸ್ಯರು,ತ್ರಾಸಿ ಮರವಂತೆ ಕ್ಲಿನ್ ಪ್ರಾಜೆಕ್ಟ್ ಸದಸ್ಯರು,ಸ್ಥಳೀಯರು,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದು.ತ್ರಾಸಿ ಪಂಚಾಯ್ ಪಿಡಿಒ ಶೋಭಾ ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page