ಶಂಕರನಾಗ್ ರಿಕ್ಷಾ ನಿಲ್ದಾಣ ಉದ್ಘಾಟನೆ

Share


ಕುಂದಾಪುರ:ಗರ್ಭೀಣಿ ಸ್ತ್ರೀಯರನ್ನು,ಅನಾರೋಗ್ಯ ಪೀಡಿತರನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಆಟೋ ಚಾಲಕರು ಆಪ್ತರಕ್ಷಕರಿದ್ದಂತೆ.ಸೌಲಭ್ಯಗಳು ಎಷ್ಟೆ ಮುಂದುವರೆದಿದ್ದರೂ ಜನರಿಗೆ ನೇರವಾಗಿ,ತ್ವರಿತವಾಗಿ ಮತ್ತು ರೀಯಾತಿ ದರದಲ್ಲಿ ಸಿಗುವುದು ಆಟೋ ರಿಕ್ಷಾ ಸೇವೆ ಆಗಿದೆ.ಹಗಲು ರಾತ್ರಿ ಎನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವ ರಿಕ್ಷಾ ಚಾಲಕ ಮತ್ತು ಮಾಲೀಕರ ಸೇವೆ ಶ್ಲಾಘನೀಯವಾದದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಶಂಕರನಾಗ್ ರಿಕ್ಷಾ ನಿಲ್ದಾಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಂಕರನಾಗ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಚಂದ್ರ ಹಕ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು.ಹೊಸಾಡು ಪಂಚಾಯತ್ ಪಿಡಿಒ ಪಾರ್ವತಿ,ಗಂಗೊಳ್ಳಿ ಠಾಣೆಯ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್,ಶಂಕರನಾಗ್ ರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಕಿರಣ್ ಡಿಸಿಲ್ವಾ,ಕಾರ್ಯದರ್ಶಿ ಶಶ್ವರಾಜ್,ಜೊತೆ ಕಾರ್ಯದರ್ಶಿ ಗುರುಕಿರಣ್ ಶೆಟ್ಟಿ,ಮಾಜಿ ಅಧ್ಯಕ್ಷ ಯೋಗೀಶ್ ಅರಾಟೆ ಹಾಗೂ ಸರ್ವ ಸದಸ್ಯರು,ಸಂಜೀವಿನಿ ಸಂಘದ ಸದಸ್ಯರು,ಸ್ಥಳೀಯರು ಉಪಸ್ಥಿತರಿದ್ದರು.ರಮೇಶ್ ಆಚಾರ್ಯ ಅರಾಟೆ ಸ್ವಾಗತಿಸಿ,ವಂದಿಸಿದರು.ಶAಕರನಾಗ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

(ಮುಳ್ಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಶಂಕರನಾಗ್ ರಿಕ್ಷಾ ನಿಲ್ದಾಣವನ್ನು,
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಉದ್ಘಾಟಿಸಿದರು)

Advertisement

Share

Leave a comment

Your email address will not be published. Required fields are marked *

You cannot copy content of this page