ಕಾರು ಡಿಕ್ಕಿ ಹೊಡೆದು,ದ್ವಿಚಕ್ರ ವಾಹನ ಸವಾರ ಸಾವು

Share

Advertisement
Advertisement

ಕುಂದಾಪುರ:ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರಾದ ನರಸಿಂಹ ಶೆಟ್ಟಿ (75) ಮೃತ ಪಟ್ಟಿದ್ದಾರೆ.
ಕೋಟೇಶ್ವರ ಹಾಲಾಡಿ ಮುಖ್ಯ ರಸ್ತೆಯಲ್ಲಿ ಏಕಾಏಕಿ ಆಗಿ ಕಾರಿಗೆ ದ್ವಿಚಕ್ರವಾಹನ ಹಠಾತ್ ಆಗಿ ಅಡ್ಡ ಬಂದ ಪರಿಣಾಮ ಇವೊಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು,ನಿಯಂತ್ರಣ ಕಳೆದುಕೊಂಡಿದ್ದ ಕಾರು ರಸ್ತೆ ಪಕ್ಕದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರವಾಹನ ಸವಾರರಾದ ನರಸಿಂಹ ಶೆಟ್ಟಿ ಅವರು ಮೃತರಾಗಿದ್ದಾರೆ.ಕಾರಿನ ಮುಂಭಾಗ ಜಖಂಗೊಂಡಿದ್ದು ಕಾರು ಚಾಲಕ ಪಾರಾಗಿದ್ದಾರೆ.ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಈ ಸಂಬಂಧ ತನಿಖೆ ಮುಂದುವರೆದಿದೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page