ಪ್ರಕೃತಿ ವಿಕೋಪದಿಂದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ವ್ಯಾಪಕ ಹಾನಿ
ಕುಂದಾಪುರ:ಭಾರಿ ಗಾಳಿಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮದ ಎಲಿಜಾ ಪಿರೇರಾ ಅವರ ಮನೆ ಮಾಡಿನ ಮೇಲೆ ಮರ ಬಿದ್ದ ಪರಿಣಾಮ ಮೆನೆಗೆ ಭಾಗಶಃ ಹಾನಿ ಆಗಿದೆ.ಅಂದಾಜು 25,000 ಕ್ಕೂ ಅಧಿಕ ನಷ್ಟ ಸಂಭವಿಸಿದೆ.ನಾಡ ಗ್ರಾಮದ ರಾಮ ಆಚಾರಿ ಎನ್ನುವವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಸುಮಾರು 10,000.ರೂ ನಷ್ಟ ಉಂಟಾಗಿದೆ.ಕಂದಾಯ ಅಧಿಕಾರಿ ಸಂದೀಪ್ ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಪ್ರಕೃತಿ ವಿಕೋಪದಿಂದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ವ್ಯಾಪಕ ಹಾನಿ ಉಂಟಾಗಿದೆ.