ಕಡಲಿನ ತೆರೆಯಲ್ಲಿ ಸಿಲುಕಿದ ಕಡಲಾಮೆ ರಕ್ಷಣೆ
ಕುಂದಾಪುರ:ಕೈ,ಕಾಲು ಮುರಿತಕ್ಕೆ ಒಳಗಾಗಿ ಮರವಂತೆ ಬೀಚ್ ಬಳಿ ಕಡಲಿನ ತೆರೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಬಿಳಿ ಮೈ ಬಣ್ಣವನ್ನು ಹೊಂದಿರುವ ಬೃಹತ್ ಗಾತ್ರದ ಕಡಲಾಮೆಯನ್ನು ಜೀವ ರಕ್ಷಕ ತಂಡದ ಸದಸ್ಯರು ಕಡಲಿಗೆ ಇಳಿದು ರಕ್ಷಣೆ ಮಾಡಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.ಮುಳುಗು ತಜ್ಞ ದಿನೇಶ್ ಖಾರ್ವಿ,ವೆಂಕಟೇಶ ಖಾರ್ವಿ,ಸಚಿನ್ ಖಾರ್ವಿ,ವಿಶ್ವನಾಥ ಖಾರ್ವಿ,ಸಚಿನ್,ಸಂತೋಷ ಖಾರ್ವಿ,ಶರತ್ ಖಾರ್ವಿ,ಆದರ್ಶ ಖಾರ್ವಿ,ಧನುಷ್ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದರು.































































































































































































































































































































































































































































































































































































































































































































































































































































































































































































































































































































































































































































































































































































































































































