ಅಶಕ್ತ ಕುಟುಂಬಗಳಿಗೆ ಕಿಟ್,ಧನಸಾಹಯ ವಿತರಣೆ

Share

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು 5.ಸೆಂಟ್ಸ್ ಕಾಲೋನಿಯಲ್ಲಿ ಒಂಟಿಯಾಗಿ ಬದುಕುತ್ತಿರುವ ಅನಾಥ ಅಜ್ಜಿ ಚೆಂದು ಪೂಜಾರ್ತಿ (75) ಹಾಗೂ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರು ಕೊಡೇರಿ ನಿವಾಸಿ ಅನಾರೋಗ್ಯದಿಂದ ಬದುಕನ್ನು ಸಾಗಿಸುತ್ತಿರುವ ಅಶಕ್ತ ಅಜ್ಜಿ ಚೆನ್ನಮ ಖಾರ್ವಿ (85) ಅವರಿಗೆ ಆಹಾರದ ಸಾಮಾಗ್ರಿ ಕಿಟ್,ಉತ್ತಮ ದರ್ಜೆಯ ಬೆಡ್ ಶೀಟ್ ಹಾಗೂ ಧನಸಹಾಯವನ್ನು ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರಾದ ಸಮಾಜ ಸೇವಕ ಸಾಯಿನಾಥ್ ಶೆಟ್ ಕುಂದಾಪುರ,ಸೂಪರ್ ಗ್ರೇಡ್ ಗುತ್ತಿಗೆದಾರ ಕೆ.ಆರ್ ನಾಯಕ್,ವಿಜಯ ಅಮಿನ್,ಜಗದೀಶ ದೇವಾಡಿಗ ಹಾಗೂ ಸ್ಥಳೀಯರಾದ ಶೇಖರ್ ಮೆಂಡನ್ ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page