ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳ ಚರಂಡಿ ಬಗ್ಗೆ ಚರ್ಚೆ
ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ವಿಷಯದ ಬಗ್ಗೆ ಕುಂದಾಪುರ ಕ್ಷೇತ್ರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ನೇತೃತ್ವದಲ್ಲಿ ಕಾಮಗಾರಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು.ಕರ್ನಾಟಕ ಸರ್ಕಾರ ನೀರು ಸರಬರಾಜು ಮತ್ತು ಒಳಚರಂಡಿ ನೈರ್ಮಲ್ಯ ಮಂಡಳಿಯ ಇಂಜಿನಿಯರ್ ಚಂದ್ರಶೇಖರ್ ,ರಕ್ಷಿತ್ ಕುಮಾರ್,ಪುರಸಭೆ ಮುಖ್ಯ ಅಧಿಕಾರಿ,ಪುರಸಭಾ ಇಂಜಿನಿಯರ್ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































