ಕುಂದಾಪುರ ಶಾಸಕರ ನೂತನ ಕಛೇರಿ ಉದ್ಘಾಟನೆ

Share

Advertisement
Advertisement


ಕುಂದಾಪುರ:ಕುಂದಾಪುರ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ಧಾರ್ಮಿಕ ಮುಖಂಡರಾದ ಅಪ್ಪಣ್ಣ ಹೆಗ್ಡೆ ಅವರು ಶಾಸಕರ ನೂತನ ಕಛೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು.ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಬಿಜಿಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಕಾಡೂರು ಸುರೇಶ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ,ಸುರೇಶ್ ಶೆಟ್ಟಿ ಗೊಪಾಡಿ,ಬಾರ್ಕೂರು ಶಾಂತರಾಮ ಶೆಟ್ಟಿ,ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.ಜನ ಸಾಮಾನ್ಯರಿಗೆ ನೆರವು ಆಗುವ ದೃಷ್ಟಿಯಿಂದ ಶಾಸಕರ ಕಛೇರಿಯನ್ನು ತೆರೆಯಲಾಗಿದ್ದು,ಸಾರ್ವಜನಿಕರ ಸೇವೆಗೆ ಶಾಸಕರ ಕಛೇರಿ ಲಭ್ಯವಿರುತ್ತದೆ.ಶಾಸಕರ ಆಪ್ತ ಸಾಹಯಕರಿಬ್ಬರು ಕಛೇರಿಯಲ್ಲಿದ್ದು ಜನ ಸಾಮಾನ್ಯರ ಅಹವಾಲುಗಳಿಗೆ ಸ್ಪಂದನೆ ಮಾಡಲಿದ್ದಾರೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page