ಹರಸಾಹಸ ಪಟ್ಟು ಟ್ರ್ಯಾಕ್ಟರ್ ಮೇಲಕ್ಕೆ ಎತ್ತಿದ ರೈತರು

Share


ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಬೈಲಿಗೆ ಗದ್ದೆ ಉಳುಮೆ ಮಾಡಲು ಬಂದ ಟ್ರ್ಯಾಕ್ಟರ್ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿದ್ದ ಹೊಂಡಕ್ಕೆ ಬಿದ್ದು ತೊಂದರೆಗೆ ಸಿಲುಕಿದ ಘಟನೆ ಗುರುವಾರ ನಡೆದಿದೆ.ಹರಸಾಹಸ ಪಟ್ಟು ರೈತರು ಟ್ರ್ಯಾಕ್ಟರ್‍ನ್ನು ಮೇಲಕ್ಕೆ ಎತ್ತಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಬೈಂದೂರು ತಾಲೂಕಿನಾದ್ಯಂತ ರಸ್ತೆ ಬದಿಯಲ್ಲಿ ಹೊಂಡ ತೆಗೆದು ನೀರಿನ ಪೈಪ್ ಅಳವಡಿಕೆ ಮಾಡಲಾಗಿದೆ.ನೀರಿನ ಪೈಪ್ ಅಳವಡಿಕೆ ಮಾಡಲು ಕೈಗೊಂಡಿದ್ದ ಹೊಂಡಗಳನ್ನು ಮಣ್ಣಿನಿಂದ ಮುಚ್ಚಿದ್ದರು ಮಳೆ ನೀರು ತುಂಬಿಕೊಂಡು ಹೊಂಡದೊಳಗಿನ ಮಣ್ಣು ಸಡಿಲಗೊಂಡಿದೆ.ರಸ್ತೆ ಬದಿಯಲ್ಲಿ ತೆಗೆದಿದ್ದ ಜಲ ಜೀವನ್ ಮಿಷನ್ ಹೊಂಡಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

Advertisement

Share

Leave a comment

Your email address will not be published. Required fields are marked *

You cannot copy content of this page