ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

Share

Advertisement
Advertisement
Advertisement

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35) ಎಂಬಾತನನ್ನು ಮುಳ್ಳಿಕಟ್ಟೆ-ಗಂಗೊಳ್ಳಿ ಮುಖ್ಯ ರಸ್ತೆ ಹೊಸಾಡು ಗ್ರಾಮದ ಗುಹೇಶ್ವರ ದೇವಸ್ಥಾನಕ್ಕೆ ಸಂಪರ್ಕಕಲ್ಪಿಸುವ ಕ್ರಾಸ್ ರಸ್ತೆಯಲ್ಲಿ ಗಂಗೊಳ್ಳಿ ಠಾಣೆ ಪೆÇಲೀಸರು ಬಂಧಿಸಿ ಕಾನೂನುಕ್ರಮ ಜರುಗಿಸಿದ್ದಾರೆ.
ಬಂಧಿತ ಆರೋಪಿತ ನಿಂದ 7500.ರೂ ಮೌಲ್ಯದ 25 ಕೆ.ಜಿ ದನದ ಮಾಂಸ,ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯಕ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು.ಸಿಬ್ಬಂದಿಗಳಾದ ಶಾಂತರಾಮ್ ಶೆಟ್ಟಿ,ಕೃಷ್ಣ,ರಾಘವೇಂದ್ರ ಪೂಜಾರಿ,ರಾಜು ನಾಯ್ಕ್,ಚೇತನ್ ಪೂಜಾರಿ,ಸಂದೀಪ ಕುರಾಣಿ ಭಾಗವಹಿಸಿದ್ದರು.ಜೂನ್.18 ರಂದು ಕೆ.ಇ.ಬಿ ಕಚೇರಿ ಎದುರು ದನ ಕರುಗಳನ್ನು ಕಾರಿಗೆ ತುಂಬಿ ಕಳವಿಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಈತ ಭಾಗಿಯಾಗಿರುವುದು ವಿಚಾರಣೆಯಲ್ಲಿ ಬಂದಿದೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page