ನದಿಯಲ್ಲಿ ಮುಳುಗಿದ ಚಿನ್ನದ ಸರ ಹಸ್ತಾಂತರ

Share

Advertisement
Advertisement
Advertisement

ಕುಂದಾಪುರ:ನದಿ ನೀರಿನಲ್ಲಿ ಮುಳುಗಿದ ಸುಮಾರು ಒಂಭತ್ತು ಪವನ್ ತೂಕವನ್ನು ಹೊಂದಿರುವ ಬೆಲೆ ಬಾಳುವ ಚಿನ್ನದ ಸರವನ್ನು ಮುಳುಗುಜತ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಅವರು ಸಂಬಂಧಿಸಿದ ವ್ಯಕ್ತಿಗಳಿಗೆ ಹುಡುಕಿ ಕೊಡುವುದರ ಮುಖೇನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶನಿವಾರ ಕಂಡ್ಲೂರು ಸೇತುವೆ ಬಳಿ ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನ್ನಪ್ಪಿರುವ ಕಂದಾವರ ಗ್ರಾಮ ಹೇರಿಕೆರೆ ನಚ್ಚೂರು ನಿವಾಸಿ ಕೃಷ್ಣ ಪೂಜಾರಿ ಅವರ ಕುತ್ತಿಗೆಯಲ್ಲಿದ್ದ ಸುಮಾರು ಒಂಭತ್ತು ಪವನ್ ತೂಕವನ್ನು ಹೊಂದಿರುವ ಚಿನ್ನದ ಸರ ಅವರ ದೇಹದಿಂದ ಬೇರ್ಪಟ್ಟು ನದಿ ನೀರಿನಲ್ಲಿ ಮುಳುಗಿತ್ತು.ಮೃತ ವ್ಯಕ್ತಿ ಸಂಬಂಧಿಕರ ಆಪೇಕ್ಷೆ ಮೇರೆಗೆ ಮುಳುಗುತಜ್ಞ ದಿನೇಶ್ ಖಾರ್ವಿ ಅವರು ನದಿಯಲ್ಲಿ ಮುಳುಗಿದ ಚಿನ್ನದ ಸರವನ್ನು ಹುಡುಕಿ ಕೊಟ್ಟಿದ್ದಾರೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page