ಗಂಗೊಳ್ಳಿ ಪಂಚಾಯಿತಿ ಅಧಿಕಾರ ಸ್ವೀಕಾರ ವೇಳೆ ಮೌಲಿಯಿಂದ ಪ್ರಾರ್ಥನೆ ಆರೋಪ,ಹಿಂದು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಕುಂದಾಪುರ:ಅಧಿಕಾರ ಸ್ವೀಕಾರದ ವೇಳೆ ಪಂಚಾಯಿತಿ ಕಟ್ಟಡದ ಒಳಗಡೆ ಅನಧಿಕೃತವಾಗಿ ನಮಾಜ್ ಮಾಡಿರುವುದು ಅತ್ಯಂತ ಕಳವಳಕಾರಿ ಸಂಗತಿ ಆಗಿದ್ದು.ಅಧಿಕಾರಕ್ಕಾಗಿ ಸಮಾಜದ ಸ್ವಾಸ್ತ್ಯವನ್ನು ಕೇಡಿಸುವಂತ ಕಾರ್ಯಗಳಿಗೆ ಮುಂದಾಗಿರುವುದು ಸರಿ ಅಲ್ಲಾ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧಿಕಾರ ಸ್ವೀಕಾರ ವೇಳೆಯಲ್ಲಿ ಮುಸ್ಲಿಂ ಸಮುದಾಯದ ಮೌಲಿಯಿಂದ ಪಂಚಾಯಿತಿ ಒಳಗಡೆ ಪ್ರಾರ್ಥನೆ ಮಾಡಿರುವುದನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ಗಂಗೊಳ್ಳಿ ವತಿಯಿಂದ ಶುಕ್ರವಾರ ಗಂಗೊಳ್ಳಿ ಪಂಚಾಯಿತಿ ಎದುರುಗಡೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೈಂದೂರು ಬಿಜೆಪಿ ಮಂಡಳ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ,ಮಾಜಿ ತಾ.ಪಂ ಸದಸ್ಯ ಸುರೇಂದ್ರ ಖಾರ್ವಿ,ರವಿ ಹೊಸಪೇಟೆ,ನಾಗರಾಜ ಖಾರ್ವಿ ದಾಕುಹಿತ್ಲು,ಚಂದ್ರ ಖಾರ್ವಿ ಲೈಟ್ಹೌಸ್,ಗುರು ದಾಕುಹಿತ್ಲು,ವಾಸುದೇವ ಗಂಗೊಳ್ಳಿ,ಸದಾಶಿವ ಕಂಚುಗೋಡು,ಉಮಾನಾಥ ದೇವಾಡಿಗ ಉಪಸ್ಥಿತರಿದ್ದರು.ಹೆಚ್ಚಿನ ತನಿಖೆ ನಡೆಸುವಂತೆ ಗಂಗೊಳ್ಳಿ ಪಂಚಾಯಿತಿ ಪಿಡಿಒ ಹಾಗೂ ಕುಂದಾಪುರ ತಹಶೀಲ್ದಾರ್ಗೆ ಮನವಿಯನ್ನು ನೀಡಲಾಯಿತು.