ಅಕ್ಟೋಬರ್ 20 ರಂದು ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024 ಕಾರ್ಯಕ್ರಮ

Share

Advertisement
Advertisement

ಬೈಂದೂರು:ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾ ವೇದಿಕೆ ವತಿಯಿಂದ ಅಕ್ಟೋಬರ್ 20 ರ ಭಾನುವಾರ ದಂದು ನಾಗೂರು ಒಡೆಯರಮಠ ಶೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಲಿದೆ.
ಸದ್ಭಾವನಾ ಲಹರಿ-2024 ಕಾರ್ಯಕ್ರಮದ ಅಂಗವಾಗಿ ಸಂತಸ,ಸಡಗರ,ಸನ್ಮಾನ,ಸ್ಪರ್ಧೆಗಳ ಹಬ್ಬ ಕಾರ್ಯಕ್ರಮ ಜರುಗಲಿದೆ.ದ್ರಾವಿಡ ಬ್ರಾಹ್ಮಣ ಪರಿಷತ್ ಮಹಿಳಾ ವೇದಿಕೆ ತಾಲೂಕು ಅದ್ಯಕ್ಷೆ ಸಂಧ್ಯಾ ಉಡುಪ ಅಧ್ಯಕ್ಷತೆ ವಹಿಸಲಿದ್ದಾರೆ.ಜಿಲ್ಲಾಧ್ಯಕ್ಷೆ ಕಾಂತಿರಾವ್ ಉದ್ಘಾಟನೆ ಮಾಡಲಿದ್ದಾರೆ.ಉಪನ್ಯಾಸಕ ಅಕ್ಷಯಾ ಗೋಖಲೆ ಕಾರ್ಕಳ ದಿಕ್ಷೂಚಿ ಭಾಷಣ ಮಾಡಲಿದ್ದಾರೆ.ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್,ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ,ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ,ಯುವ ವೇದಿಕೆ ಜಿಲ್ಲಾ ಮಹಾಸಭಾ ಅಧ್ಯಕ್ಷೆ ಪವಿತ್ರಾ ಆರ್ ಅಡಿಗ,ತಾಲೂಕು ಗೌರವಾಧ್ಯಕ್ಷ ಭಾವನ ಎಂ ಭಟ್ ಹರೇಗೋಡು,ಮಹಿಳಾ ವೇದಿಕೆ ಉಪ್ಪುಂದ ವಲಯ ಅಧ್ಯಕ್ಷೆ ವೀಣಾ ಹೆಬ್ಬಾರ್,ತಾಲೂಕು ಮಹಿಳಾ ಕಾರ್ಯದರ್ಶಿ ಜ್ಯೋತಿ ಐತಾಳ್,ಅನುಪಮಾ ಅಡಿಗ ಮೊಗೇರಿ,ಯುಕ್ತ ಹೊಳ್ಳ ಕುಂದಾಪುರ ಉಪಸ್ಥಿತರಿರಲಿದ್ದಾರೆ.ಹರಟೆ ಚರ್ಚಾಗೋಷ್ಠಿ ಜರುಗಲಿದೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page