ಕುಂದಾಪುರ:ತನ್ನ ಎರಡು ಸಾಕು ನಾಯಿಗಳ ಜತೆ ಕಾಡಿಗೆ ತೆರಳಿದ್ದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ನಾಯ್ಕ್ ಎನ್ನುವ ಯುವಕ ಸೆ.16 ರಂದು ಶನಿವಾರ ನಾಪತ್ತೆ ಆಗಿದ್ದರು.ಒಂದು ವಾರದ ಬಳಿಕ ತನ್ನ ಸಾಕು ನಾಯಿಯೊಂದಿಗೆ ಶನಿವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕುಂದಾಪುರ ತಾಲೂಕಿನ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ ಎನ್ನುವ ಯುವಕ ತನ್ನ ಎರಡು ಸಾಕು ನಾಯಿಗಳೊಂದಿಗೆ ಕಳೆದ ಶನಿವಾರದಂದು ಕಾಡಿಗೆ ತೆರಳಿದ್ದರೂ.ಸಂಜೆ ಆಗುತ್ತಲೆ ಒಂದು ಸಾಕು ನಾಯಿ ಮನೆಗೆ ಮರಳಿದ್ದರೂ ವಿವೇಕನಂದ ಮಾತ್ರ ಮನೆಗೆ ವಾಪಾಸು ಬಾರಲೆ ಇಲ್ಲಾ ಅವರ ಜತೆಯಲ್ಲಿದ್ದ ಇನ್ನೊಂದು ಸಾಕು ನಾಯಿ ಕೂಡ ನಾಪತ್ತೆ ಆಗಿತ್ತು.ಕತ್ತಲಾದರೂ ಮಗ ಮರಳಿ ಮನೆಗೆ ಬಾರದಿರುವ ಸನ್ನಿವೇಶದಿಂದ ಆತಂಕಿತರಾದ ಮನೆಯವರು ಸ್ಥಳೀಯರ ಸಹಕಾರದಿಂದ ಮನೆ ಪಕ್ಕದಲ್ಲಿರುವ ಕಾಡಿಗೆ ಹೋಗಿ ಬೆಳಗಿನ ಜಾವಾದ ತನಕ ಹುಡುಕಾಟ ನಡೆಸಿ,ಕಾಡನ್ನು ಜಾಲಾಡಿದ್ದರು ವಿವೇಕಾನಂದ ಪತ್ತೆ ಆಗಲೆ ಇಲ್ಲಾ,ಹುಡುಕಾಟದ ಬಳಿಕ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು.
ಗ್ರಾಮಸ್ಥರು,ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ನಕ್ಷಲ್ ನಿಗ್ರಹ ಪಡೆ,ಕಂದಾಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ವಿವೇಕನಂದರ ಪತ್ತೆಗಾಗಿ ಕಳೆದ ಒಂದು ವಾರದಿಂದ ದಟ್ಟವಾದ ಕಾಡಿನಲ್ಲಿ ತೀವೃವಾದ ಹುಡುಕಾಟವನ್ನು ಮಾಡಿದ್ದರು ಅವರ ಸುಳಿವು ಮಾತ್ರ ಪತ್ತೆ ಆಗಿರಲಿಲ್ಲ.
ಸೆ.23 ರಂದು ಶನಿವಾರ ಕಬ್ಬಿನಾಲೆ ಮನೆಯೊಂದರ ಸಮೀಪ ತನ್ನ ಸಾಕು ನಾಯಿಯೊಂದಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಮಗ ಪತ್ತೆಯಾಗಿರುವುದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಕಾಡಿಗೆ ತೆರಳಿದ್ದ ವಿವೇಕನಂದ ಅವರಿಗೆ ದಿಕ್ಕು ತಪ್ಪಿದ್ದರಿಂದ ಮರಳಿ ಮನೆಗೆ ಬಾರದೆ ಎಂಟು ದಿನಗಳಿಂದ ಕಾಡಿನಲ್ಲೆ ಅಲೆದಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಕಳೆದ ಎಂಟು ದಿನಗಳಿಂದಲೂ ಸಾಕು ನಾಯಿ ಅವರ ಜತೆ ಇದ್ದು,ಅವರನ್ನು ಹಿಂಬಾಲಿಸಿಕೊಂಡು ಬಂದಿರುವುದು ವಿಶೇಷವಾದ ಸಂಗತಿ.ಅನ್ನ ಆಹಾರವಿಲ್ಲದೆ ನಿತ್ರಣಗೊಂಡಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಟ್ಟ ಕಾಡಿನಲ್ಲಿ 8 ದಿನಗಳ ಕಾಲ ವನವಾಸ ಮಾಡಿದ ವಿವೇಕನಂದ ಅವರು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿರುವುದು ಸಂತಸದ ಸಂಗತಿ.
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…