ಕುಂದಾಪುರ

ತೊಂಬಟ್ಟು:ಕಾಡಿನಲ್ಲಿ ಕಣ್ಮರೆಯಾಗಿದ್ದ ಯುವಕ ಪತ್ತೆ,ಕುಟುಂಬಸ್ಥರಲ್ಲಿ ಸಂಭ್ರಮ

Share

ಕುಂದಾಪುರ:ತನ್ನ ಎರಡು ಸಾಕು ನಾಯಿಗಳ ಜತೆ ಕಾಡಿಗೆ ತೆರಳಿದ್ದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ನಾಯ್ಕ್ ಎನ್ನುವ ಯುವಕ ಸೆ.16 ರಂದು ಶನಿವಾರ ನಾಪತ್ತೆ ಆಗಿದ್ದರು.ಒಂದು ವಾರದ ಬಳಿಕ ತನ್ನ ಸಾಕು ನಾಯಿಯೊಂದಿಗೆ ಶನಿವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕುಂದಾಪುರ ತಾಲೂಕಿನ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ ಎನ್ನುವ ಯುವಕ ತನ್ನ ಎರಡು ಸಾಕು ನಾಯಿಗಳೊಂದಿಗೆ ಕಳೆದ ಶನಿವಾರದಂದು ಕಾಡಿಗೆ ತೆರಳಿದ್ದರೂ.ಸಂಜೆ ಆಗುತ್ತಲೆ ಒಂದು ಸಾಕು ನಾಯಿ ಮನೆಗೆ ಮರಳಿದ್ದರೂ ವಿವೇಕನಂದ ಮಾತ್ರ ಮನೆಗೆ ವಾಪಾಸು ಬಾರಲೆ ಇಲ್ಲಾ ಅವರ ಜತೆಯಲ್ಲಿದ್ದ ಇನ್ನೊಂದು ಸಾಕು ನಾಯಿ ಕೂಡ ನಾಪತ್ತೆ ಆಗಿತ್ತು.ಕತ್ತಲಾದರೂ ಮಗ ಮರಳಿ ಮನೆಗೆ ಬಾರದಿರುವ ಸನ್ನಿವೇಶದಿಂದ ಆತಂಕಿತರಾದ ಮನೆಯವರು ಸ್ಥಳೀಯರ ಸಹಕಾರದಿಂದ ಮನೆ ಪಕ್ಕದಲ್ಲಿರುವ ಕಾಡಿಗೆ ಹೋಗಿ ಬೆಳಗಿನ ಜಾವಾದ ತನಕ ಹುಡುಕಾಟ ನಡೆಸಿ,ಕಾಡನ್ನು ಜಾಲಾಡಿದ್ದರು ವಿವೇಕಾನಂದ ಪತ್ತೆ ಆಗಲೆ ಇಲ್ಲಾ,ಹುಡುಕಾಟದ ಬಳಿಕ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು.
ಗ್ರಾಮಸ್ಥರು,ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ನಕ್ಷಲ್ ನಿಗ್ರಹ ಪಡೆ,ಕಂದಾಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ವಿವೇಕನಂದರ ಪತ್ತೆಗಾಗಿ ಕಳೆದ ಒಂದು ವಾರದಿಂದ ದಟ್ಟವಾದ ಕಾಡಿನಲ್ಲಿ ತೀವೃವಾದ ಹುಡುಕಾಟವನ್ನು ಮಾಡಿದ್ದರು ಅವರ ಸುಳಿವು ಮಾತ್ರ ಪತ್ತೆ ಆಗಿರಲಿಲ್ಲ.
ಸೆ.23 ರಂದು ಶನಿವಾರ ಕಬ್ಬಿನಾಲೆ ಮನೆಯೊಂದರ ಸಮೀಪ ತನ್ನ ಸಾಕು ನಾಯಿಯೊಂದಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಮಗ ಪತ್ತೆಯಾಗಿರುವುದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಕಾಡಿಗೆ ತೆರಳಿದ್ದ ವಿವೇಕನಂದ ಅವರಿಗೆ ದಿಕ್ಕು ತಪ್ಪಿದ್ದರಿಂದ ಮರಳಿ ಮನೆಗೆ ಬಾರದೆ ಎಂಟು ದಿನಗಳಿಂದ ಕಾಡಿನಲ್ಲೆ ಅಲೆದಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಕಳೆದ ಎಂಟು ದಿನಗಳಿಂದಲೂ ಸಾಕು ನಾಯಿ ಅವರ ಜತೆ ಇದ್ದು,ಅವರನ್ನು ಹಿಂಬಾಲಿಸಿಕೊಂಡು ಬಂದಿರುವುದು ವಿಶೇಷವಾದ ಸಂಗತಿ.ಅನ್ನ ಆಹಾರವಿಲ್ಲದೆ ನಿತ್ರಣಗೊಂಡಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಟ್ಟ ಕಾಡಿನಲ್ಲಿ 8 ದಿನಗಳ ಕಾಲ ವನವಾಸ ಮಾಡಿದ ವಿವೇಕನಂದ ಅವರು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿರುವುದು ಸಂತಸದ ಸಂಗತಿ.

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 days ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

4 days ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 weeks ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

4 weeks ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 month ago