ಕುಂದಾಪುರ:ತನ್ನ ಎರಡು ಸಾಕು ನಾಯಿಗಳ ಜತೆ ಕಾಡಿಗೆ ತೆರಳಿದ್ದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ನಾಯ್ಕ್ ಎನ್ನುವ ಯುವಕ ಸೆ.16 ರಂದು ಶನಿವಾರ ನಾಪತ್ತೆ ಆಗಿದ್ದರು.ಒಂದು ವಾರದ ಬಳಿಕ ತನ್ನ ಸಾಕು ನಾಯಿಯೊಂದಿಗೆ ಶನಿವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕುಂದಾಪುರ ತಾಲೂಕಿನ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ ಎನ್ನುವ ಯುವಕ ತನ್ನ ಎರಡು ಸಾಕು ನಾಯಿಗಳೊಂದಿಗೆ ಕಳೆದ ಶನಿವಾರದಂದು ಕಾಡಿಗೆ ತೆರಳಿದ್ದರೂ.ಸಂಜೆ ಆಗುತ್ತಲೆ ಒಂದು ಸಾಕು ನಾಯಿ ಮನೆಗೆ ಮರಳಿದ್ದರೂ ವಿವೇಕನಂದ ಮಾತ್ರ ಮನೆಗೆ ವಾಪಾಸು ಬಾರಲೆ ಇಲ್ಲಾ ಅವರ ಜತೆಯಲ್ಲಿದ್ದ ಇನ್ನೊಂದು ಸಾಕು ನಾಯಿ ಕೂಡ ನಾಪತ್ತೆ ಆಗಿತ್ತು.ಕತ್ತಲಾದರೂ ಮಗ ಮರಳಿ ಮನೆಗೆ ಬಾರದಿರುವ ಸನ್ನಿವೇಶದಿಂದ ಆತಂಕಿತರಾದ ಮನೆಯವರು ಸ್ಥಳೀಯರ ಸಹಕಾರದಿಂದ ಮನೆ ಪಕ್ಕದಲ್ಲಿರುವ ಕಾಡಿಗೆ ಹೋಗಿ ಬೆಳಗಿನ ಜಾವಾದ ತನಕ ಹುಡುಕಾಟ ನಡೆಸಿ,ಕಾಡನ್ನು ಜಾಲಾಡಿದ್ದರು ವಿವೇಕಾನಂದ ಪತ್ತೆ ಆಗಲೆ ಇಲ್ಲಾ,ಹುಡುಕಾಟದ ಬಳಿಕ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು.
ಗ್ರಾಮಸ್ಥರು,ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ನಕ್ಷಲ್ ನಿಗ್ರಹ ಪಡೆ,ಕಂದಾಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ವಿವೇಕನಂದರ ಪತ್ತೆಗಾಗಿ ಕಳೆದ ಒಂದು ವಾರದಿಂದ ದಟ್ಟವಾದ ಕಾಡಿನಲ್ಲಿ ತೀವೃವಾದ ಹುಡುಕಾಟವನ್ನು ಮಾಡಿದ್ದರು ಅವರ ಸುಳಿವು ಮಾತ್ರ ಪತ್ತೆ ಆಗಿರಲಿಲ್ಲ.
ಸೆ.23 ರಂದು ಶನಿವಾರ ಕಬ್ಬಿನಾಲೆ ಮನೆಯೊಂದರ ಸಮೀಪ ತನ್ನ ಸಾಕು ನಾಯಿಯೊಂದಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಮಗ ಪತ್ತೆಯಾಗಿರುವುದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಕಾಡಿಗೆ ತೆರಳಿದ್ದ ವಿವೇಕನಂದ ಅವರಿಗೆ ದಿಕ್ಕು ತಪ್ಪಿದ್ದರಿಂದ ಮರಳಿ ಮನೆಗೆ ಬಾರದೆ ಎಂಟು ದಿನಗಳಿಂದ ಕಾಡಿನಲ್ಲೆ ಅಲೆದಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಕಳೆದ ಎಂಟು ದಿನಗಳಿಂದಲೂ ಸಾಕು ನಾಯಿ ಅವರ ಜತೆ ಇದ್ದು,ಅವರನ್ನು ಹಿಂಬಾಲಿಸಿಕೊಂಡು ಬಂದಿರುವುದು ವಿಶೇಷವಾದ ಸಂಗತಿ.ಅನ್ನ ಆಹಾರವಿಲ್ಲದೆ ನಿತ್ರಣಗೊಂಡಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಟ್ಟ ಕಾಡಿನಲ್ಲಿ 8 ದಿನಗಳ ಕಾಲ ವನವಾಸ ಮಾಡಿದ ವಿವೇಕನಂದ ಅವರು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿರುವುದು ಸಂತಸದ ಸಂಗತಿ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…