ಕುಂದಾಪುರ:ತನ್ನ ಎರಡು ಸಾಕು ನಾಯಿಗಳ ಜತೆ ಕಾಡಿಗೆ ತೆರಳಿದ್ದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ನಾಯ್ಕ್ ಎನ್ನುವ ಯುವಕ ಸೆ.16 ರಂದು ಶನಿವಾರ ನಾಪತ್ತೆ ಆಗಿದ್ದರು.ಒಂದು ವಾರದ ಬಳಿಕ ತನ್ನ ಸಾಕು ನಾಯಿಯೊಂದಿಗೆ ಶನಿವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕುಂದಾಪುರ ತಾಲೂಕಿನ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ ಎನ್ನುವ ಯುವಕ ತನ್ನ ಎರಡು ಸಾಕು ನಾಯಿಗಳೊಂದಿಗೆ ಕಳೆದ ಶನಿವಾರದಂದು ಕಾಡಿಗೆ ತೆರಳಿದ್ದರೂ.ಸಂಜೆ ಆಗುತ್ತಲೆ ಒಂದು ಸಾಕು ನಾಯಿ ಮನೆಗೆ ಮರಳಿದ್ದರೂ ವಿವೇಕನಂದ ಮಾತ್ರ ಮನೆಗೆ ವಾಪಾಸು ಬಾರಲೆ ಇಲ್ಲಾ ಅವರ ಜತೆಯಲ್ಲಿದ್ದ ಇನ್ನೊಂದು ಸಾಕು ನಾಯಿ ಕೂಡ ನಾಪತ್ತೆ ಆಗಿತ್ತು.ಕತ್ತಲಾದರೂ ಮಗ ಮರಳಿ ಮನೆಗೆ ಬಾರದಿರುವ ಸನ್ನಿವೇಶದಿಂದ ಆತಂಕಿತರಾದ ಮನೆಯವರು ಸ್ಥಳೀಯರ ಸಹಕಾರದಿಂದ ಮನೆ ಪಕ್ಕದಲ್ಲಿರುವ ಕಾಡಿಗೆ ಹೋಗಿ ಬೆಳಗಿನ ಜಾವಾದ ತನಕ ಹುಡುಕಾಟ ನಡೆಸಿ,ಕಾಡನ್ನು ಜಾಲಾಡಿದ್ದರು ವಿವೇಕಾನಂದ ಪತ್ತೆ ಆಗಲೆ ಇಲ್ಲಾ,ಹುಡುಕಾಟದ ಬಳಿಕ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು.
ಗ್ರಾಮಸ್ಥರು,ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ನಕ್ಷಲ್ ನಿಗ್ರಹ ಪಡೆ,ಕಂದಾಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ವಿವೇಕನಂದರ ಪತ್ತೆಗಾಗಿ ಕಳೆದ ಒಂದು ವಾರದಿಂದ ದಟ್ಟವಾದ ಕಾಡಿನಲ್ಲಿ ತೀವೃವಾದ ಹುಡುಕಾಟವನ್ನು ಮಾಡಿದ್ದರು ಅವರ ಸುಳಿವು ಮಾತ್ರ ಪತ್ತೆ ಆಗಿರಲಿಲ್ಲ.
ಸೆ.23 ರಂದು ಶನಿವಾರ ಕಬ್ಬಿನಾಲೆ ಮನೆಯೊಂದರ ಸಮೀಪ ತನ್ನ ಸಾಕು ನಾಯಿಯೊಂದಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಮಗ ಪತ್ತೆಯಾಗಿರುವುದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಕಾಡಿಗೆ ತೆರಳಿದ್ದ ವಿವೇಕನಂದ ಅವರಿಗೆ ದಿಕ್ಕು ತಪ್ಪಿದ್ದರಿಂದ ಮರಳಿ ಮನೆಗೆ ಬಾರದೆ ಎಂಟು ದಿನಗಳಿಂದ ಕಾಡಿನಲ್ಲೆ ಅಲೆದಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಕಳೆದ ಎಂಟು ದಿನಗಳಿಂದಲೂ ಸಾಕು ನಾಯಿ ಅವರ ಜತೆ ಇದ್ದು,ಅವರನ್ನು ಹಿಂಬಾಲಿಸಿಕೊಂಡು ಬಂದಿರುವುದು ವಿಶೇಷವಾದ ಸಂಗತಿ.ಅನ್ನ ಆಹಾರವಿಲ್ಲದೆ ನಿತ್ರಣಗೊಂಡಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಟ್ಟ ಕಾಡಿನಲ್ಲಿ 8 ದಿನಗಳ ಕಾಲ ವನವಾಸ ಮಾಡಿದ ವಿವೇಕನಂದ ಅವರು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿರುವುದು ಸಂತಸದ ಸಂಗತಿ.
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀಶಂಕರಾಚಾರ್ಯ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ "ಐಕ್ಯಂ" 2025 ಅದ್ದೂರಿಯಿಂದ ನಡೆಯಿತು.ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ…
ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು…
ಉಡುಪಿ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ವಿದ್ಯಾರ್ಥಿಗಳಿಂದ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ ನಡೆಯಿತು.ವಿದ್ಯಾರ್ಥಿಗಳು ಹೆಜ್ಞೆ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ಜರುಗಿತು.ಹಿರಿಯ ದೈಹಿಕ ನಿರ್ದೇಶಕ ಯುನೈಟೆಡ್ ಉಡುಪಿ…
ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ…