ಕುಂದಾಪುರ

ಪಡುಕೋಣೆ:ನಾಟಿ ವೈದ್ಯ ಮಾಕ್ಷಿಮ್ ಒಲಿವೆರಾ ಗಿಡಮೂಲಿಕೆ ಔಷಧ ನೀಡಿಕೆ

Share

ಕುಂದಾಪುರ:ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೋಣೆ ನಿವಾಸಿ ಮಾಕ್ಷಿಮ್ ಒಲಿವೆರಾ ಅವರು ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುವುದರ ಮುಖೇನ ಸಾವಿರಾರು ಜನರನ್ನು ರೋಗ ಮುಕ್ತಗೊಳಿಸುವುದರ ಮೂಲಕ ವಿಶಿಷ್ಟವಾದ ಸಾಧನೆಗೆ ಪಾತ್ರರಾಗಿದ್ದಾರೆ ಅವರ ಸಮಾಜಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ನಾಟಿ ಔಷಧವನ್ನು ಕೊಡುತ್ತಿರುವ ತಮ್ಮ ತಂದೆಯೊಂದಿಗೆ ಕೂಡಿಕೊಂಡು ಮಾಕ್ಷಿಮ್ ಒಲಿವೆರಾ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಪ್ರಕೃತಿಯಲ್ಲಿ ಸಿಗುವ ಔಷಧ ಗಿಡಗಳ ಮಾಹಿತಿಯನ್ನು ಪಡೆದುಕೊಂಡು ಕ್ರಮೇಣ ತಂದೆಯ ಕಾಲದ ನಂತರ ಸ್ವತಂತ್ರವಾಗಿ ನಾಟಿ ಔಷಧವನ್ನು ನೀಡುತ್ತಾ ಬಂದಿರುತ್ತಾರೆ.
ಋಷಿಮುನಿಗಳು,ವೇದ ಪಂಡಿತರ ಕಾಲದಲ್ಲಿದ್ದ ನಾಟಿ ಔಷಧ ಪದ್ಧತಿಗೆ ಶತ ಶತಮಾನಗಳಷ್ಟು ಇತಿಹಾಸವಿದೆ ಭಾರತದ ಔಷಧ ಮೂಲವೆ ನಾಟಿ ಔಷಧ ಎಂದರೆ ತಪ್ಪಾಗಲಾರದು.ಆಧುನಿಕ ಚಿಕಿತ್ಸಾ ಪದ್ಧತಿಯ ಕಾಲದಲ್ಲಿಯೂ ನಾಟಿ ಔಷಧಕ್ಕೆ ಬಹಳಷ್ಟು ಮಾನ್ಯತೆ ಇದೆ.ನಾಟಿ ಔಷಧದ ಚಿಕಿತ್ಸೆಯನ್ನು ಪಡೆದುಕೊಳ್ಳಲು ವಿದೇಶಿಗರು ಭಾರತದ ಹಳ್ಳಿಗಳತ್ತಾ ಧಾವಿಸಿ ಬರುತ್ತಿರುವುದು ಒಂದು ದೊಡ್ಡ ನಿದರ್ಶನವಾಗಿದೆ.

ಕನಿಷ್ಠ ದರದಲ್ಲಿ ರೋಗ ಗುಣಪಡಿಸುವಿಕೆ:ನಾಟಿ ವೈದ್ಯರಾದ ಮಾಕ್ಷಿಮ್ ಒಲಿವೆರಾ ಅವರು ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾಧಿ,6 ರೀತಿಯ ಜಾಂಡೀಸ್ ಕಾಯಿಲೆಗಳು,ಗರ್ಭಕೋಶದ ಸಮಸ್ಯೆ ಹಾಗೂ ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡುತ್ತಾರೆ.ಸಕ್ಕರೆ ಕಾಯಿಲೆಯಂತ ರೋಗಕ್ಕೂ ಮಾಕ್ಷಿಮ್ ಒಲಿವೆರಾ ನೀಡುವ ಔಷಧ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ ಎಂದು ಔಷಧವನ್ನು ಪಡೆದುಕೊಂಡವರು ಹೇಳುತ್ತಾರೆ.ಸಾಮಾಜಿಕ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವ ಅವರು ರೋಗಿಗಳಿಂದ ನಿರ್ಧಿಷ್ಟವಾಗಿ ಹಣವನ್ನು ಕೇಳಿ ಪಡೆಯುವುದೆ ಇಲ್ಲ ಸ್ವ ಇಚ್ಚೆಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ ಅವರ ಕೈಗುಣದಿಂದ ಸಾವಿರಾರು ರೋಗಿಗಳು ನಾನಾ ಕಾಯಿಲೆಯಿಂದ ಗುಣ ಮುಖರಾಗಿದ್ದಾರೆ.ಮಾಕ್ಷಿಮ್ ಒಲಿವೆರಾ ಅವರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾ ರಾಜ್ಯದಿಂದಲೂ ಜನರು ಬರುತ್ತಾರೆ.
ನಾಟಿ ಔಷಧ ಪದ್ಧತಿ ತಂದೆಯವರ ಕಾಲದಿಂದ ಬಂದ ಬಳುವಳಿ ಆಗಿದೆ.ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುತ್ತಿದ್ದೇನೆ.ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾದಿ ಸೇರಿದಂತೆ ಹಲವರಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡಲಾಗುತ್ತಿದ್ದು.ಊರ,ಪರಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾದಿಂದಲೂ ಬರುತ್ತಾರೆ ಎಂದು ಮಾಕ್ಷಿಮ್ ಒಲಿವೆರಾ ಹೇಳುತ್ತಾರೆ.
ಮಾಕ್ಷಿಮ್ ಒಲಿವೆರಾ ಅವರ ದೂರವಾಣಿ ಸಂಖ್ಯೆ -9535293305

@ಲೇಖನ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement

Share
Team Kundapur Times

Recent Posts

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

3 weeks ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

3 weeks ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

2 months ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

3 months ago