ಕುಂದಾಪುರ

ಅಣಬೆ ಕೃಷಿಯಲ್ಲಿ ಯಶಸ್ವಿ ಸಾಧನೆ

Share

ಕುಂದಾಪುರ:ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವನ್ನು ಹೊಂದಿರುವ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಕುದ್ರುಕೋಡು ನಿವಾಸಿ ಲಂಬೋದರ ಶೆಟ್ಟಿ ಮತ್ತು ರಾಘು ಪೂಜಾರಿ ಅವರು ಅಣಬೆ ಕೃಷಿಯಲ್ಲಿ ಸ್ಫೂರ್ತಿದಾಯಕವಾಗಿ ಹೆಜ್ಜೆಯನ್ನು ಇಡುವುದರ ಮುಖೇನ ಯಶಸ್ವಿಯಾಗಿದ್ದಾರೆ.
ಉದ್ಯೋಗಕ್ಕಾಗಿ ದೂರ ದೂರದ ಊರಿಗೆ ತೆರಳದೆ ತಮ್ಮ ಊರಿನಲ್ಲಿ ಇದ್ದು ಕೊಂಡು ಏನಾದರೂ ಸಾಧಿಸಬೇಕು ಎನ್ನುವ ಹಂಬಲವನ್ನು ಹೊಂದಿರುವ ಯುವಕರಿಬ್ಬರು ವಿನೂತನ ಮಾದರಿಯಲ್ಲಿ “ಆರ್ಯ ಮಶ್ರೂಮ್ ಪ್ಲಾಂಟ್” ಅನ್ನು ಮಾಡಿದ್ದಾರೆ,ಇವರ ಫಾರ್ಮ್‍ನಲ್ಲಿ ಉತ್ಕøಷ್ಟ ಗುಣಮಟ್ಟದ ಅಣಬೆಗಳು ದೊರೆಯುತ್ತದೆ.ರಿಯಾತಿ ದರದಲ್ಲಿ ಮಾರಾಟವನ್ನು ಮಾಡಲಾಗುತ್ತಿದ್ದು ಅಣಬೆ ಪ್ರೀಯರು ಇವರ ಫಾರ್ಮ್ ಹೌಸ್‍ಗೆ ಹೋಗಿ ನೆರವಾಗಿ ಖರೀದಿಸಬಹುದು.ಉಪ್ಪಿನ ಕಾಯಿ,ಅಣಬೆ ಪೌಢರ್ ಸಹಿತ ನಾನಾ ರೀತಿಯ ಖಾದ್ಯಗಳಲ್ಲಿ ಬಳಕೆ ಮಾಡುತ್ತಾರೆ.ಔಷಧೀಯ ಗುಣಗಳನ್ನು ಹೊಂದಿರುವ ಅಣಬೆ ಪೌಷ್ಟಿಕಯುಕ್ತ ಆಹಾರ ಕೂಡ ಹೌದು.ಸುಮಾರು ಐದು ಸಾವಿರ ಯೂನಿಟ್ ಅಣಬೆ ಇವರ ಫಾರ್ಮ್ ಹೌಸ್‍ನಲ್ಲಿ ಬೆಳೆಯುತ್ತಿದೆ.
ಆರ್ಯ ಮಶ್ರೂಮ್ ಪ್ಲಾಂಟ್ ಕೃಷಿಕರಾದ ಲಂಬೋದರ ಶೆಟ್ಟಿ ಅವರು ಮಾತನಾಡಿ,ಬಹಳಷ್ಟು ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಅಣಬೆ ಕೃಷಿಯನ್ನು ಮಾಡಲಾಗಿದ್ದು,ಕೃಷಿ ಜೊತೆಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಗುರಿಯಾಗಿದೆ.ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.
ಆರ್ಯ ಮಶ್ರೂಮ್ ಪ್ಲಾಂಟ್‍ನ ಇನ್ನೊರ್ವ ಕೃಷಿಕರಾದ ರಾಘವ ಪೂಜಾರಿ ಮಾತನಾಡಿ,ಉದ್ಯೋಗದ ದೃಷ್ಟಿಯಿಂದ ಮತ್ತು ಕೃಷಿ ಮೇಲಿನ ಆಸಕ್ತಿಯಿಂದಾಗಿ ವಿನೂತನ ಮಾದರಿಯಲ್ಲಿ ಅಣಬೆ ಕೃಷಿಯನ್ನು ಮಾಡಲಾಗಿದೆ.ತಾವೆಲ್ಲರೂ ನಮಗೆ ಬೆಂಬಲವನ್ನು ನೀಡಬೇಕೆಂದರು.
ನಾಗೇಂದ್ರ ದೇವಾಡಿಗ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ವಿನೂತನ ಮಾದರಿಯಲ್ಲಿ ಅಣಬೆ ಕೃಷಿಯನ್ನು ಮಾಡಲಾಗಿದ್ದು.ಉತ್ತಮ ರೀತಿಯಲ್ಲಿ ನಿರ್ವಹಣೆಯನ್ನು ಕೂಡ ಮಾಡಲಾಗುತ್ತಿದೆ.ಅಣಬೆಗೆ ಜಾಗತಿಕವಾಗಿ ಮಣ್ಣನೆ ಇರುವುದರಿಂದ ಮಾರುಕಟ್ಟೆಯಲ್ಲಿ ಕೂಡ ಒಳ್ಳೆ ಬೇಡಿಕೆ ಇದೆ ಎಂದರು.

Advertisement

Share
Team Kundapur Times

Recent Posts

ಕಾಪು:ಗೂಡ್ಸ್ ಟೆಂಪೋ ಪಲ್ಟಿ ನಾಲ್ವರು ಸಾವು

ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…

3 days ago

ಶಿಕ್ಷಕ ಸುರೇಂದ್ರಗೆ ಮಕ್ಕಳ ಮಿತ್ರ ಪ್ರಶಸ್ತಿ

ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…

2 weeks ago

ತ್ರಾಸಿ:ನಿಂತ್ತಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…

4 weeks ago

ಮರವಂತೆ ಸಮುದ್ರ ಕಿನಾರೆ ಸ್ವಚ್ಚತೆ

ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…

1 month ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…

1 month ago

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ವಿನಿಶ್ ಕುಮಾರ್,ಅನ್ವಿಶ್ ಕುಮಾರ್ ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…

1 month ago