ಗಂಗೊಳ್ಳಿ:ಭಟ್ಕಳ ತಾಲೂಕಿನ ವ್ಯಾಪ್ತಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಅಪಘಾತಕ್ಕೆ ಈಡಾಗಿದ್ದ ಮಾಲ್ತೀದೇವಿ-2 ಎನ್ನುವ ಬೋಟ್ ಗಂಗೊಳ್ಳಿ ಸಮುದ್ರ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಮಂಗಳವಾರ ಛದ್ರಗೊಂಡಿದೆ.ಬೋಟ್ನ ಪ್ರಮುಖ ಭಾಗಗಳು ಸಮುದ್ರ ಪಾಲಾಗಿದೆ.
ಮೇ.16 ರಂದು ಮಲ್ಪೆಯಿಂದ ಭಟ್ಕಳ ಭಾಗಗಕ್ಕೆ ಮೀನುಗಾರಿಕೆಗೆ ತೆರಳಿದ್ದ ಮಾಲ್ತೀ ದೇವಿ-2 ಎನ್ನುವ ಬೋಟ್ಗೆ ಮೇ.17 ರಂದು ಬೆಳಗಿನ ಜಾವಾ 5 ಗಂಟೆ ಸುಮಾರಿಗೆ ಅದೆ ಜಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದುರ್ಗಾ ಎನ್ನುವ ಬೋಟ್ ಡಿಕ್ಕಿ ಹೊಡೆದಿದೆ.ಅಪಘಾತಕ್ಕೆ ಈಡಾಗಿದ್ದ ಬೋಟ್ನ್ನು ಪಾಂಚಜನ್ಯ ಹಾಗೂ ದುರ್ಗಾ ಎನ್ನುವ ಬೋಟ್ನ ಸಹಾಯದಿಂದ ಕಚೇರಿಗೆ ಕಟ್ಟಲೆಂದು ಗಂಗೊಳ್ಳಿ ಸಮೀಪ ಕರೆಗೆ ತರುವಾಗ ಗಂಗೊಳ್ಳಿ ಅಳಿವೆ ಯಿಂದ ಸುಮಾರು 10 ಮಾರು ದೂರದಲ್ಲಿ ಮಾಲ್ತೀ ದೇವಿ-2 ಬೋಟ್ನ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿ ಹೋಗಿತ್ತು.ವಿಶೇಷ ಕಾರ್ಯಾಚರಣೆ ಮೂಲಕ ಬೋಟ್ನ್ನು ಸುರಕ್ಷಿತವಾಗಿ ದಡಕ್ಕೆ ತರಬೇಕ್ಕೆನ್ನುವ ಪ್ರಯತ್ನ ವಿಫಲವಾಗಿದ್ದು.ಹವಾಮಾನ ವೈಪರಿತ್ಯದಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಅಧಿಕವಾಗಿದ್ದ ಕಾರಣ.ಅಲೆಗಳ ಹೊಡೆತಕ್ಕೆ ಬೋಟ್ ಛದ್ರಗೊಂಡಿದೆ.
ಡಿಸೇಲ್ ಟ್ಯಾಂಕ್ ಸಮುದ್ರ ಪಾಲು:ದುರಂತದಲ್ಲಿ ಬೋಟ್ನಲ್ಲಿದ್ದ 2,500 ಲೀಟರ್ ತುಂಬಿದ್ದ ಡಿಸೇಲ್ ಟ್ಯಾಂಕ್ ಸಮುದ್ರ ಪಾಲಾಗಿದೆ.ಸಮದ್ರದಲ್ಲಿ ಡಿಸೇಲ್ ಸೋರಿಕೆ ಆಗುವ ಭೀತಿ ಎದುರಾಗಿದೆ.ಬೋಟ್ ದುರಂತದಲ್ಲಿ ಮಾಲೀಕರಿಗೆ 20 ಲಕ್ಷ.ಕ್ಕೂ ಅಧಿಕ ನಷ್ಟ ಉಂಟಾಗಿದೆ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…