ಕುಂದಾಪುರ

ಲಿಯಾ ಜೌಟ್‍ಲೆಟ್ ಕೋಟೇಶ್ವರದಲ್ಲಿ ಶುಭಾರಂಭ

Share

ಕುಂದಾಪುರ:ಭಾರತದಲ್ಲಿ ಮೊದಲ ಬಾರಿಗೆ ಇಸ್ರೇಲಿನ ಪ್ರಸಿದ್ಧ ಹೆಟ್ರಾ ಉತ್ಪನ್ನಗಳ ಲಿಯಾ ಔಟ್‍ಲೆಟ್ ನೂತನ ಮಳಿಗೆ ಶುಭಾರಂಭ ಕಾರ್ಯಕ್ರಮ ಕುಂದಾಪುರ ತಾಲೂಕಿನ ಕೋಟೇಶ್ವರದ ಬೈಪಾಸ್ ಸಮೀಪ ಇರುವ ಸನ್ವಿಜಯ್ ಪರ್ಲ್ ಕಟ್ಟಡದಲ್ಲಿ ಭಾನುವಾರ ನಡೆಯಿತು.
ಇಸ್ರೇಲ್ ದೇಶದಲ್ಲಿ ತಯಾರಿಸಲ್ಪಡುವ ಬಹು ಬೇಡಿಕೆ ಮತ್ತು ಉತ್ತಮ ಗುಣಮಟ್ಟದ ಸನೋ ಉತ್ಪನ್ನಗಳು ಕೋಟೇಶ್ವರದ ಲಿಯಾ ಜೌಟ್‍ಲೆಟ್ ಮಳಿಗೆಯಲ್ಲಿ ದೊರಕಲಿದೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡುವುದರ ಮುಖೇನ ನವ ಉದ್ಯಮವನ್ನು ಪ್ರೋತ್ಸಾಹಿಸ ಬೇಕಾಗಿದೆ.
ಉದ್ಯಮಿ ಅಭಿನಂಧನ್ ಶೆಟ್ಟಿ ಅವರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿ,ಇಸ್ರೇಲ್ ದೇಶದಲ್ಲಿ ನಿರ್ಮಿತಗೊಳ್ಳುವ ಗುಣಮಟ್ಟದ ಉತ್ಪನ್ನಗಳು ನಮ್ಮಲ್ಲಿ ದೊರೆಯುತ್ತಿರುವುದು ಬಹಳಷ್ಟು ಖುಸಿ ಕೊಡುವಂತಹ ವಿಚಾರವಾಗಿದೆ.ಬಹು ರಾಷ್ಟ್ರೀಯ ಕಂಪನಿಯ ಮಳಿಗೆ ಕೋಟೇಶ್ವರದಂತಹ ಪ್ರದೇಶದಲ್ಲಿ ಆರಂಭಗೊಂಡಿರುವುದರಿಂದ ಸ್ಥಳೀಯರಿಗೆ ಗ್ರಹ ಬಳಕೆಯ ಒಳ್ಳೆ ರೀತಿಯ ವಸ್ತುಗಳು ಸುಲಭ ರೀತಿಯಲ್ಲಿ ದೊರಕಲಿದೆ ಎಂದು ಹೇಳಿದರು.
ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಔಜ್ಲೆನ್ ರೆಬೆಲ್ಲೊ ಅವರು ಲಿಯಾ ಔಟ್‍ಲೆಟ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ,ನವ ಉದ್ಯಮ ಉತ್ತಮವಾದ ರೀತಿಯಲ್ಲಿ ನಡೆಯಲಿ ಎಂದು ಶುಭಹಾರೈಸಿದರು.
ಲಿಯಾ ಜೌಟ್‍ಲೆಟ್ ಎಂ.ಡಿ ಜಿ.ಕೆ ಅವಿನಾಶ ಮಾತನಾಡಿ,ಇಸ್ರೇಲ್ ದೇಶದಲ್ಲಿ ಜನಪ್ರಿಯಗೊಂಡಿರುವ ಸನೋ ಉತ್ಪನ್ನಗಳು ಕೋಟೇಶ್ವರದಲ್ಲಿ ಆರಂಭಗೊಂಡಿರುವ ಲಿಯಾ ಔಟ್‍ಲೆಟ್ ಮಳಿಗೆಯಲ್ಲಿ ದೊರಕಲಿದೆ. ಭಾರತದಲ್ಲಿ ಪ್ರಥಮವಾಗಿ ಇವೊಂದು ಮಳಿಗೆಯನ್ನು ಕೋಟೇಶ್ವರದಲ್ಲಿ ಆರಂಭಿಸಲಾಗಿದ್ದು.ಮುಂದಿನ ದಿನಗಳಲ್ಲಿ ರಾಜ್ಯ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇತಂತಹ ಮಳಿಗೆಯನ್ನು ಸ್ಥಾಪಿಸುವ ಆಲೋಚನೆಯನ್ನು ಹೊಂದಿದ್ದೇವೆ ಎಂದರು.ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಉದ್ಯಮಿ ದಿನೇಶ್ ಜೋಗಿ ಮಾತನಾಡಿ,ಲಿಯಾಔಟ್ ಲೆಟ್ ಮಳಿಗೆಯನ್ನು ಪ್ರಥಮ ಬಾರಿಗೆ ನಮ್ಮ ಊರಿನಲ್ಲಿ ಆರಂಭಿಸಲಾಗಿದೆ.ಮುಂದಿನ ದಿನಗಳಲ್ಲಿ ಅಮೆಜಾನ್ ಮತ್ತು ಪ್ಲಿಪ್‍ಕಾರ್ಟ್‍ನಲ್ಲಿ ಬಿಡುಗಡೆ ಮಾಡಲಾಗುದು ಎಂದು ಹೇಳಿದರು.ಸ್ಥಳೀಯರು ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡರು.
ಸಿಲ್ವಿಯಾ ಡಿಸೋಜ ಮಾತನಾಡಿ,ಉತ್ಪನ್ನಗಳನ್ನು ಸ್ವತಹ ಬಳಕೆ ಮಾಡಲಾಗಿದ್ದು.ಉತ್ತಮವಾಗಿದೆ,100 ಪರ್ಸೆಂಟ್ ಗ್ಯಾರಂಟಿ ಕೂಡ ನೀಡುತ್ತಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಉದ್ಯಮಿ ಹರೀಶ್ ಜೋಗಿ ಮಾತನಾಡಿ,ನವ ಉದ್ಯಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ವಿನ್ಸಿಟ್ಸ್ ಮಾತನಾಡಿ,ಉತ್ಪನ್ನಗಳ ಬಗ್ಗೆ ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೋಟೇಶ್ವರ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ,ಕುಂದಾಪುರ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ದೀಪಕ್ ಕುಮಾರ್,ಸಿಇಒ ಸುನೀಲ್,ಫೌಂಡರ್ ವಿಜಯ ಲೋಬೋ, ಉದ್ಯಮಿಗಳು,ಅತಿಥಿಗಳು,ಹಿತೈಷಿಗಳು ಉಪಸ್ಥಿತರಿದ್ದರು.

Advertisement

Share
Team Kundapur Times

Recent Posts

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

1 week ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

2 weeks ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

3 weeks ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

3 weeks ago

ಹೊಸಾಡು ಸೇನಾಪುರ ಗ್ರಾಮೋತ್ಸವ ಶಾಸಕ ಗಂಟಿಹೊಳೆ ಉದ್ಘಾಟನೆ

ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…

4 weeks ago

ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ವಾರ್ಷಿಕ ಮಹಾಸಭೆ:2.5 ಕೋಟಿ ರೂ ವ್ಯವಾಹಾರ:ಒಟ್ಟು 1.81 ಲಕ್ಷ ರೂ. ನಿವ್ವಳ ಲಾಭ

ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…

4 weeks ago