ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ಕೂಡ್ಲಿಹಿತ್ಲು ಎಂಬಲ್ಲಿ ಯಕ್ಷಪ್ರೇಮಿ ರಶ್ಮಿತಾ ಸಂಜಯ್ ಮೊವಾಡಿ ಅವರ ಪ್ರಾಯೋಜಕತ್ವದಲ್ಲಿ ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಗುರುವಾರ ನಡೆಯಿತು.
ಸಿಗಂದೂರು ಮೇಳದವರಿಂದ ಮತದಾನ ಜಾಗೃತಿ ಕುರಿತು ವಿಶೇಷ ನಾಟ್ಯ ಪ್ರದರ್ಶನವನ್ನು ಮಾಡಲಾಯಿತು.ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಲಾಯಿತು.
ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಆಯೋಜಕರಾದ ರಶ್ಮಿತಾ ಸಂಜಯ್ ಮೊವಾಡಿ ಅವರು ಸಾಧಕ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಎನ್ನುವುದು ಬಹಳ ದಿನಗಳ ಕಾಲದ ಕನಸಾಗಿದೆ.ಯುವ ಪೀಳಿಗೆಗೆ ಉತ್ತಮವಾದ ಸಂದೇಶವನ್ನು ನೀಡಬೇಕು ಎನ್ನುವ ದೃಷ್ಟಿಯಲ್ಲಿ ಇವೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.
ರಾಘವೇಂದ್ರ ಮೆಂಡನ್ ಕೋಣ್ಕಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆದಿದೆ.ಕಲಾವಿದರನ್ನು ಸನ್ಮಾನಿಸಿ,ಅಶಕ್ತ ಕುಟುಂಬಕ್ಕೆ ನೆರವನ್ನು ನೀಡುವುದರ ಮೂಲಕ ಮಾದರಿ ಕಾರ್ಯಕ್ರಮವನ್ನು ಆಯೋಜಿಸಿರುವ ರಶ್ಮಿತಾ ಸಂಜಯ್ ಮೊವಾಡಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಆಗಬೇಕು ಎಂದು ಹೇಳಿದರು.
ಆರ್.ಜೆ ಇಂದ್ರ ಮಾತನಾಡಿ,ಯಕ್ಷೋತ್ಸ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು ಊರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಉಂಟಾಗಿದೆ.ಇದೊಂದು ಮಾದರಿ ಯಕ್ಷಗಾನ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು ಎಂದರು.
ಉದಯಕುಮಾರ್ ಹಟ್ಟಿಯಂಗಡಿ,ಪ್ರವೀಣ ಕುಮಾರ್ ಶೆಟ್ಟಿ ಕಡಿಕೆ,ರಾಘವೇಂದ್ರ ಮೆಂಡನ್,ಭಾಸ್ಕರ ಸಿ ಕುಂದರ್,ನಾಗರಾಜ,ಸಂದೀಪ್ ಬಸ್ರೂರು,ವಿಜಯ ಜಿ ಮೆಂಡನ್,ರಶ್ಮಿತಾ ಸಂಜಯ್ ಕೂಡ್ಗಿಹಿತ್ಲು ಉಪಸ್ಥಿತರಿದ್ದರು.
ಸಾಲಿಗ್ರಾಮ ಮೇಳದ ಶ್ರೇಷ್ಠ ಕಲಾವಿದರಾದ ಶಶಿಕಾಂತ್ ಶೆಟ್ಟಿ ಕಾರ್ಕಳ,ಮಾರಣಕಟ್ಟೆ ಮೇಳದ ನಂದೀಶ್ ಮೊಗವೀರ ಜನ್ನಾಡಿ ಮತ್ತು ಭಾಗವತರಾದ ಗಜೇಂದ್ರ ಆಜ್ರಿ,ಸಿಗಂದೂರು ಮೇಳದ ಆನಂದ ಅಂಕೋಲಾ ಮತ್ತು ನರಸಿಂಹ ಚಿಟ್ಟಾಣಿ,ಮೇಳದ ಸಿಬ್ಬಂದಿ ಗಜಾನನ ಮರಾಠಿ ಹಾಗೂ ಬೆಂಗಳೂರು ಉದ್ಯಮಿ ವರುಣ್ ಅವರನ್ನು ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಅಂಗವಾಗಿ ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು.
ವಿಶೇಷ ಚೇತನ ಶ್ರೀರಕ್ಷಾ ಅವರಿಗೆ ಧನಸಹಾಯವನ್ನು ವಿತರಿಸಲಾಯಿತು.
ಆರ್.ಜೆ ಇಂದ್ರ ಸ್ವಾಗತಿಸಿ,ವಂದಿಸಿದರು.ಸಿಗಂದೂರು ಮೇಳದವರಿಂದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.ಯಕ್ಷೋತ್ಸವ ಕಾರ್ಯಕ್ರಮದಲ್ಲಿ ರಶ್ಮಿತಾ ಸಂಜಯ್ ಮೊವಾಡಿ ದಂಪತಿಗಳನ್ನು ಸಿಗಂದೂರು ಮೇಳದ ವತಿಯಿಂದ ಗೌರವಿಸಲಾಯಿತು.
ವರದಿ:-ರಾಕೇಶ್
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ-9916284048
ಕುಂದಾಪುರ:ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದರಾದ ಐರ್ಬೈಲು ಆನಂದ ಶೆಟ್ಟಿ ಅವರ ಮಗಳು ಸೀಮಾ ಶೆಟ್ಟಿ ಎಂಬುವರು ಏ.೨೩ ರ ಬುಧವಾರ…
ಕುಂದಾಪುರ:ಆಗುAಬೆ ಕಡೆ ಯಿಂದ ತೀರ್ಥ ಹಳ್ಳಿಗೆ ಸಾಗುತ್ತಿದ್ದ ಬಸ್ ತೀರ್ಥಹಳ್ಳಿ ಎಂಬಲ್ಲಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ…
ಕುಂದಾಪುರ:ನಮ್ಮ ದೇಶದಲ್ಲಿ ಆಹಾರ ಹಣದುಬ್ಬರ ಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳ ಜೊತೆಗೆ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗಿದೆ.ಆಲಸ್ಯಕರ ಜೀವನ…
ಕುಂದಾಪುರ:ಸಿಸಿಟಿವಿ ಮತ್ತು ಮಾನಿಟರಿಂಗ್ ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಹೆಸರನ್ನು ಗಳಿಸಿರುವ ದಿಗಂತ ಶೆಟ್ಟಿ ಮತ್ತು ದಿಕ್ಷೀತ್ ಶೆಟ್ಟಿ ಮಾಲಿಕತ್ವದಲ್ಲಿ ಫಿಯರ್ಲೆಸ್…
ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಡೈರೆಕ್ಟರ್ ಇಂಚಾರ್ಜ್,ಪಿಪಿಸಿ…