ಕುಂದಾಪುರ

ಶ್ರೀ ನೆತ್ರ ಹಾೈಗುಳಿ ಹಾಗೂ ಸಪರಿವಾರ ದೈವಸ್ಥಾನ ಹೊಳ್ಮಗೆ ವಾರ್ಷಿಕ ಹಬ್ಬ,ಗೆಂಡ ಸೇವೆ

Share

ಕುಂದಾಪುರ:ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ನೆತ್ರ ಹಾೈಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಗೆಂಡ ಸೇವೆ ಹಾಗೂ ಕೋಲ ಸೇವೆ,ಮಂಗಳಾರತಿ,ಹಣ್ಣುಕಾಯಿ ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.ದೈವವನ್ನು ನಂಬಿದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನವನ್ನು ಪಡೆದು ಹರಕೆಯನ್ನು ಸಲ್ಲಿಸಿದರು.ಶ್ರೀ ನೆತ್ರ ಹಾೈಗುಳಿ ಹಾಗೂ ಸಪರಿವಾರ ದೈವಗಳ ವಾರ್ಷಿಕ ಹಬ್ಬ ಪ್ರತಿ ವರ್ಷ ಮಾ.14 ರಂದು ಆಚರಣೆಗೊಳ್ಳುತ್ತದೆ.
ಕ್ಷೇತ್ರವನ್ನು ನಂಬಿದ ಕುಟುಂಬಿಕರಾದ ಮುಂಬೈ ಉದ್ಯಮಿ ಮಂಜು ಪೂಜಾರಿ ಅವರು ಮಾತನಾಡಿ,ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಇತ್ತಿಚೆಗೆ ಅಭಿವೃದ್ಧಿಗೊಳಿಸಲಾಗಿದೆ.ದೈವಸ್ಥಾನ ಸಂಪರ್ಕಕ್ಕೆ ರಸ್ತೆ ಸಮಸ್ಯೆ ಎನ್ನುವುದು ಬಹಳಷ್ಟು ವರ್ಷಗಳಿಂದ ಇದೆ.ಕಾಲು ದಾರಿಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕ್ಷೇತ್ರದ ಅಭಿವೃದ್ಧಿ ಮತ್ತು ಭಕ್ತಾದಿಗಳ ಹಿತ ದೃಷ್ಟಿಯಿಂದ ದೈವಸ್ಥಾನಕ್ಕೆ ಸಂಪರ್ಕ ರಸ್ತೆ ಆಗಬೇಕಾದ ಅಗತ್ಯತೆ ಇದೆ.ಇವೊಂದು ಕಾರ್ಯಕ್ಕೆ ಎಲ್ಲರೂ ಸ್ವಯಂಪ್ರೇರಿತರಾಗಿ ಕೈಜೋಡಿಸಿ ದೈವದ ಮನೆಗೆ ರಸ್ತೆಯನ್ನು ಕಲ್ಪಿಸಲು ಸಹಕರಿಸಬೇಕು ಎಂದು ಕೇಳಿಕೊಂಡರು.
ನೆತ್ರ ಹಾೈಗುಳಿ ದೈವಸ್ಥಾನದಲ್ಲಿ ಪೂರ್ವಜರ ಕಾಲದಿಂದಲೂ ಕೋಲ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿರುವ ಸೂರ ಪಾಣಾರ ಕುಟುಂಬದ ಸದಸ್ಯರಾದ ಸುನೀಲ್ ಪಾಣಾರ ಅವರು ಮಾತನಾಡಿ,ಹೋರ್ ಬೊಬ್ಬರ್ಯ ಮತ್ತು ಬಂಟರಗರಡಿ ಹಾಗೂ ನೆತ್ರ ಹಾೈಗುಳಿ ಸನ್ನಿಧಾನವೂ ಏಕ ರೂಪದಲ್ಲಿ ಇರುವಂತಹ ಸನ್ನಿಧಾನವಾಗಿದೆ.ಹೆಚ್ಚು ಕಮ್ಮಿ ಎನ್ನುವುದು ಏನು ಇಲ್ಲಾ.ಕಷ್ಟ ಎಂದು ಬೇಡಿ ಬಂದವರ ಇಷ್ಟಾರ್ಥವನ್ನು ಸಿದ್ಧಿಮಾಡುವಾಗ ನೆತ್ರ ಹಾೈಗುಳಿ ಕಾರಣಿಕ ಶಕ್ತಿ ಅಪಾರವಾದದ್ದು ಎಂದು ಹೇಳಿದರು.
ನೆತ್ರ ಹಾೈಗಳಿ ದೈವಸ್ಥಾನದ ಮುಕ್ತೇಸರರಾದ ಮಾಹಬಲ ಮೆಂಡನ್ ಮಾತನಾಡಿ,ನೆತ್ರ ಹಾೈಗಳಿ ದೈವಸ್ಥಾನದ ಆಗು ಹೋಗುಗಳು ಹೋರ್ ಬೊಬ್ಬರ್ಯ ದೈವಸ್ಥಾನದ ವತಿಯಿಂದಲೇ ನಡೆಯುತ್ತದೆ.ವರ್ಷಂಪ್ರತಿ ನಡೆಯುವ ಕೋಲ ಸೇವೆ ಗೆಂಡ ಸೇವೆ,ಹಾಲು ಹಬ್ಬ ಸೇವೆ ಹೋರ್ ಬೊಬ್ಬರ್ಯ ದೈವಸ್ಥಾನದ ವತಿಯಿಂದಲೆ ನಡೆಯುವಂತಹದ್ದು ಆಗಿದೆ.ಈ ಭಾಗದಲ್ಲಿರುವ ಮೂರು ದೈವಸ್ಥಾನಗಳ ಹಬ್ಬ ಒಂದೆ ದಿನ ನಡೆಯುವುದು ವಾಡಿಕೆ ಆಗಿದೆ ಎಂದು ಹೇಳಿದರು.ನೆತ್ರ ಹಾೈಗುಳಿ ನಂಬಿದ ಕುಟುಂಸ್ಥರಿಗೆ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ನೆತ್ರ ಹಾೈಗುಳಿ ದೈವಸ್ಥಾನದ ಪಾತ್ರಿಗಳಾದ ರಾಘವೇಂದ್ರ ಅವರು ಮಾತನಾಡಿ,ದೈವಸ್ಥಾನದಲ್ಲಿ ಬಾವಿ ಹಾಗೂ ಸ್ನಾನ ಗ್ರಹ ಆಗಬೇಕಾಗಿದೆ.ದೈವಸ್ಥಾನದ ಎದುರುಗಡೆ ಇಂಟರ್‍ಲಾಕ್ ಅಳವಡಿಕೆ ಕೂಡ ಬಾಕಿ ಇದೆ.ದೈವಸ್ಥಾನದ ಅಭಿವೃದ್ಧಿಗೆ ಭಕ್ತಾದಿಗಳು ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಜ್ಯೋತಿ ಮಂಜು ಪೂಜಾರಿ,ರಾಜೀವ ಪೂಜಾರಿ ಗುಜ್ಜಾಡಿ,ಪ್ರವೀಣ್ ಪೂಜಾರಿ ಹೊಳ್ಮಗೆ,ಅರ್ಚಕರಾದ ರಾಜ ಸಸಿಹಿತ್ಲು,ನಾಗು ಪೂಜಾರಿ,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.ದೈವಸ್ಥಾನದ ವಾರ್ಷಿಕ ಸೇವೆ ವಿಜೃಂಭಣೆಯಿಂದ ಜರುಗತು.

ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಬಿತ್ತರಿಸಲು ಸಂಪರ್ಕಿಸಿ:-9916284048

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

4 weeks ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

4 weeks ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

2 months ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

2 months ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

2 months ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

2 months ago