ಕುಂದಾಪುರ

ಮರವಂತೆ ಶಾಖೆ ಬ್ಯಾಂಕ್ ಮ್ಯಾನೇಜರ್ ರಾಹುಲ್ ಬಾಲಕೃಷ್ಣಗೆ ಶೃದ್ಧಾಂಜಲಿ ಸಲ್ಲಿಕೆ

Share

Advertisement
Advertisement

ಕುಂದಾಪುರ:ಬ್ಯಾಂಕ್‍ನಿಂದ ಗ್ರಾಹರಿಗೆ ಸಿಗಬೇಕಾದಂತಹ ಸೌಲಭ್ಯಗಳನ್ನು ಯಾವುದೇ ರೀತಿ ಮುಚ್ಚು ಮರೆ ಇಲ್ಲದೆ ತುಂಬು ಉತ್ಸುಕತೆಯಿಂದ ನೀಡುವುದರ ಮೂಲಕ ನಿಯಮಗಳನ್ನು ಸಡಿಲಿಕೆ ಮಾಡಿಕೊಂಡು ಉತ್ತಮವಾದ ಸೇವೆಯನ್ನು ಜನರಿಗೆ ನೀಡುತ್ತಿದ್ದ ಮರವಂತೆ ಕೆನರಾ ಬ್ಯಾಂಕ್ ಶಾಖೆ ಮ್ಯಾನೇಜರ್ ರಾಹುಲ್ ಬಾಲಕೃಷ್ಣ ಅವರ ಅಕಾಲಿಕ ಸಾವು ಮರವಂತೆ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತರಾದ ಎಸ್.ಜನಾರ್ದನ ಮರವಂತೆ ಹೇಳಿದರು.
ಕೆನರಾ ಬ್ಯಾಂಕ್ ಮರವಂತೆ ಶಾಖೆಯಲ್ಲಿ ಸೋಮವಾರ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅಕಾಲಿಕವಾಗಿ ನಿಧನರಾದ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ಅವರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಮರವಂತೆ ಗ್ರಾ.ಪಂ ಅಧ್ಯಕ್ಷ ಲೋಕೇಶ್ ಖಾರ್ವಿ,ಮಾಜಿ ಅಧ್ಯಕ್ಷರಾದ ರುಕ್ಮಿಣಿ ಮತ್ತು ಅನಿತಾ ಆರ್.ಕೆ,ಸತೀಶ ಪೂಜಾರಿ,ದಯಾನಂದ ಬಳೆಗಾರ್,ರವಿ ಮಡಿವಾಳ,ಸುಬ್ರಹ್ಮಣ್ಯ ಪಡುಕೋಣೆ,ಮರವಂತೆ ಹೈಸ್ಕೂಲ್ ಮುಖ್ಯೋಪಾಧ್ಯಾಯ ಸರ್ವತ್ತೋಮ ಭಟ್,ಶಾಖಾ ಮ್ಯಾನೇಜರ್ ಸುಧೀರ್ ನುಡಿನಮನ ಸಲ್ಲಿಸಿದರು.ಬ್ಯಾಂಕ್ ಸಿಬ್ಬಂದಿಗಳು,ಪಂಚಾಯತ್ ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್ ಮರವಂತೆ ಶಾಖೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ಅವರು ಶನಿವಾರ ಅರಾಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.

Advertisement
Advertisement
Advertisement

Share
Team Kundapur Times

Recent Posts

ತ್ರಾಸಿ:ಹೆದ್ದಾರಿಯಲ್ಲಿ ಕಾರಿಗೆ ಅಡ್ಡ ಬಂದ ಗೂಳಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುರುಡೇಶ್ವರ ದಿಂದ ಉಡುಪಿಗೆ ಸಾಗುತ್ತಿದ್ದ ಕಾರಿಗೆ ತ್ರಾಸಿ ಸಮೀಪ ಮೊವಾಡಿ ಕ್ರಾಸ್‍ನಲ್ಲಿ ಗೂಳಿಯೊದು ಅಡ್ಡ ಬಂದ…

13 hours ago

ಅಬ್ಬರಿಸಿದ ಮಳೆಗೆ ಉಕ್ಕೇರಿದ ಕಡಲು:ಜನರಲ್ಲಿ ಮೂಡಿದ ಆತಂಕ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕಡಲು ಉಕ್ಕೇರಿದ ಪರಿಣಾಮ ಕಂಚುಗೋಡು ಭಾಗದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದೆ.ಅಲೆಗಳ…

1 day ago

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನಿಂದ ಸಂಭ್ರಮದ ದಸರಾ ಆಚರಣೆ

ಕುಂದಾಪುರ:ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ,ಸುಜ್ಞಾನ ಪದವಿ ಪೂರ್ವ ಕಾಲೇಜು,ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ-ಮತ್ಯಾಡಿ, ಇಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ…

3 days ago

ಬಿ.ಎಚ್.ಪಿ ಮೀನುಗಾರಿಕಾ ಬೋಟ್ ಶುಭಾರಂಭ

ಕುಂದಾಪುರ:ಮೀನುಗಾರಿಕಾ ವೃತ್ತಿಯಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ಮತ್ಸೋದ್ಯಮಿಗಳಾದ ಉಪ್ಪುಂದ ನಾಗರಾಜ ಖಾರ್ವಿ ಮತ್ತು ಸುಬ್ರಹ್ಮಣ್ಯ ಖಾರ್ವಿ ಮಾಲೀಕತ್ವದ ಬಿ.ಎಚ್.ಪಿ…

4 days ago

ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಖಾಸಗಿ ಬಸ್‌:ಚಾಲಕ ಸ್ಥಳದಲ್ಲೇ ಸಾವು

ನೈಲಾಡಿ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ…

4 days ago

ಧರ್ಮ ಗಂಗೋತ್ರಿ ಭರತ ಶೆಟ್ಟಿ ಸಿ.ಸಿ.ಎಫ್ ಮೆಂಬರ್ ಆಗಿ ಆಯ್ಕೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ನಿವಾಸಿ ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರು ಭಾರತ ಸಂವಿಧಾನದ ಕಾರ್ಯವನ್ನುವಿಜಿಲೆಕ್ಸ್ ಅಪರಾಧ ನಿಯಂತ್ರಣ…

6 days ago