ಕುಂದಾಪುರ

ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೆಚ್ಚಿಸುವಂತೆ ಆಗ್ರಹ

Share

ಕುಂದಾಪುರ:ಸಬ್ಸಿಡಿ ರೂಪದಲ್ಲಿ ನೀಡುತ್ತಿರುವ ವೈಟ್ ಸೀಮೆಎಣ್ಣೆ ದುಬಾರಿಯಾಗಿದ್ದು ಮೀನುಗಾರರಿಗೆ ಹೊರೆಯಾಗಿ ಪರಿಣಮಿಸಿದೆ.ಮೀನುಗಾರರ ಮೇಲಿನ ಹಿತಾಶಕ್ತಿಯಿಂದ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕ್ಕುನ್ನುವುದು ಕರಾವಳಿ ಭಾಗದ ಮೀನುಗಾರರ ಆಗ್ರಹ.
ಯಾವುದೆ ರೀತಿ ಸೂಚನೆಯನ್ನು ನೀಡದ ಕೇಂದ್ರ ಸರಕಾರ ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಇತ್ತೀಚೆಗೆ ತೆಗೆದು ಹಾಕಿದೆ.ಅತ್ಯಂತ ದಹನ ಶೀಲತೆಯನ್ನು ಹೊಂದಿರುವ ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ತೆಗೆದು ಹಾಕಿರುವುದರಿಂದ ಬ್ಲೂ ಸೀಮೆಎಣ್ಣೆಯನ್ನು ಮಾರುಕಟ್ಟೆ ದರದಲ್ಲೆ ಖರೀದಿಸಬೇಕು.ಸಬ್ಸಿಡಿ ರೂಪದಲ್ಲಿ ವಿತರಿಸುತ್ತಿರುವ ವೈಟ್ ಸೀಮೆ ಎಣ್ಣೆ ಬ್ಲೂ ಸೀಮೆಎಣ್ಣೆ ಗಿಂತ 10.ರೂ ದುಬಾರಿ.
ಖನಿಜ ತೈಲದಿಂದ ಪಡೆಯಲಾಗುವ ಸೀಮೆ ಎಣ್ಣೆಯನ್ನು (ಹೈಡ್ರೊಕಾರ್ಬನ್ ದ್ರವ) ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕೈಗಾರಿಕೆ ಜೊತೆಗೆ ಮನೆಗಳಲ್ಲಿ ಅಡುಗೆ ಮತ್ತು ದೀಪದ ಇಂಧನವಾಗಿ ಮಾತ್ರವಲ್ಲದೆ ಮೋಟರ್‍ಗಳ ಚಲನೆಗೆ ಪ್ರಮುಖ ಇಂಧನವನ್ನಾಗಿ ಬಳಸಲಾಗುತ್ತದೆ.ಗ್ರಹ ಬಳಕೆಗಾಗಿ ಹಾಗೂ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ರೇಷನ್ ಪದ್ಧತಿಯಲ್ಲಿ ಭಾರತ ಸರಕಾರ ಈ ಹಿಂದೆ ಸಬ್ಸಿಡಿ ರೂಪದಲ್ಲಿ ಬ್ಲೂ ಸೀಮೆಎಣ್ಣೆಯನ್ನು ಪೂರೈಕೆ ಮಾಡುತ್ತಿತ್ತು.
ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೆಚ್ಚಳಕ್ಕೆ ಆಗ್ರಹ:ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ತೆಗೆದು ಹಾಕಿದ್ದರಿಂದ ಪ್ರಸ್ತುತ ರಾಜ್ಯ ಸರಕಾರ ಸಬ್ಸಿಡಿ ರೂಪದಲ್ಲಿ ವೈಟ್ ಸೀಮೆಎಣ್ಣೆಯನ್ನು ನೀಡುತ್ತಿದೆ.ಬ್ಲೂ ಸೀಮೆಎಣ್ಣೆ ಕ್ಕಿಂತ ವೈಟ್ ಸೀಮೆಎಣ್ಣೆ ದುಬಾರಿಯಾಗಿರುವುದರಿಂದ ಮೀನುಗಾರರಿಗೆ ಹೊರೆಯಾಗಿದೆ.ಅನಿವಾರ್ಯ ಕಾರಣದಿಂದ ಲೀಟರ್ ಮೇಲೆ ಹೆಚ್ಚುವರಿಯಾರಿ 10.ರೂ ನೀಡಿ ಕೊಂಡುಕೊಳ್ಳಬೇಕು.ಮೀನಿನ ಇಳುವರಿ ಕುಂಠಿತ,ಪ್ರತಿಕೂಲ ಹಾವಾಮಾನದಿಂದ ಕಂಗೆಟ್ಟಿರುವ ಮೀನುಗಾರರು ತೈಲ ದರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.ಪ್ರಸ್ತುತ ನೀಡುತ್ತಿರುವ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಕನಿಷ್ಠ 10.ರೂ ಏರಿಕೆ ಮಾಡುವಂತೆ ಮೀನುಗಾರರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.ಹಿಂದೆ ರೇಷನ್ ವ್ಯವಸ್ಥೆಯಡಿಯಲ್ಲಿ ನೀಡುತ್ತಿದ್ದ ಬ್ಲೂ ಸೀಮೆಎಣ್ಣೆ ಕಡಿಮೆ ದರದಲ್ಲಿ ಮೀನುಗಾರರಿಗೆ ದೊರಕುತ್ತಿತ್ತು.
ಮೋಟರ್ ಇಂಜಿನ್ ಖರೀದಿಸಲು ಸಬ್ಸಿಡಿ ಹಣ ಘೋಷಣೆ:ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆದು ಹಾಕಿದ ಬಳಿಕ ಕೇಂದ್ರ ಸರಕಾರ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಬಳಕೆ ಮಾಡುವಂತೆ ಉತ್ತೇಜಿಸಿ ವಿಶೇಷವಾದ ಯೋಜನೆಗಳನ್ನು ಘೋಷಿಸಿದೆ.ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್‍ಅನ್ನು ಖರೀದಿಸುವ ಫಲಾನುಭವಿ ಮೀನುಗಾರರಿಗೆ ಸರಕಾರ ಘೋಷಣೆ ಮಾಡಿರುವಂತೆ 50,000.ರೂ ಸಬ್ಟಿಡಿ ಹಣ ದೊರಕಲಿದೆ.ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೀನುಗಾರರು ಅರ್ಜಿಯನ್ನು ಹಾಕಬೇಕು.
ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಬಳಕೆ ಮೇಲೆ ನಿರಾಶಕ್ತಿ:ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಓಡಿಸಲು ಸರಿ ಸುಮಾರು 1 ಲೀಟರ್ ಪೆಟ್ರೋಲ್‍ಗೆ 300 ಮೀಲಿ ತೈಲ ಮಿಶ್ರಣ ಮಾಡಬೇಕು.ಲೀಟರ್ ಒಂದರ ಮೇಲಿನ ವೆಚ್ಚ ಅಂದಾಜು 162.ರೂ ತಗಲುತ್ತದೆ ಎಂದು ಮೀನುಗಾರರು ಹೇಳುತ್ತಾರೆ.ಪೆಟ್ರೋಲ್‍ಗೆ ಯಾವುದೇ ರೀತಿಯ ಸಬ್ಸಿಡಿ ಸರಕಾರ ನೀಡದೆ ಇರುವುದರಿಂದ ಇದು ಮೀನುಗಾರರಿಗೆ ಹೊರೆ ಆಗಲಿದೆ.ಇಂಜಿನ್ ಖರೀದಿಗೆ ಸರಕಾರ 50,000.ರೂ ಹಣ ನೀಡಿದ್ದರು.ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಖರೀದಿಗೆ ಮೀನುಗಾರರು ನಿರಾಶಕ್ತಿ ತೋರಿಸುತ್ತಿದ್ದಾರೆ.ಸೀಮೆಎಣ್ಣೆ ಮತ್ತು ಪೆಟ್ರೋಲ್ ದರ ಅಜಗಜಾಂತರ ವ್ಯತ್ಯಾಸವಿರುವುದೆ ಕಾರಣವಾಗಿದೆ.

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 days ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 days ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 weeks ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

4 weeks ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 month ago