ಕುಂದಾಪುರ

ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿ ಬಿಡುಗಡೆ,ಪತ್ರಿಭಾ ಪುರಸ್ಕಾರ ವಿತರಣೆ

Share

ಕುಂದಾಪುರ:ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಹೊಸಾಡು ಗ್ರಾಮದ ಅರಾಟೆ ಒಳನಾಡು ಶ್ರೀಸ್ವಾಮಿಲಿಂಗ ಮತ್ತು ಸಪರಿವಾರ ದೈವಗಳ ಮಹಿಮೆ ಕುರಿತು ಸದಾಶಿವ ಎನ್ ಮೊಗವೀರ ಅವರ ರಚನೆಯಲ್ಲಿ ಮೂಡಿ ಬಂದಿರುವ ನಾಗಬನದ ನಾಗಪ್ಪನ ಮಹಿಮೆ ಮಹಿಮೆ ಎಂಬ ವಿಶೇಷವಾದ ಧ್ವನಿ ಸುರುಳಿಯನ್ನು ದೈವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಮಂಗಳವಾರ ಬಿಡುಗಡೆ ಮಾಡಲಾಯಿತು.ಶ್ರೀ ಸ್ವಾಮಿಲಿಂಗ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈಭವ,ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಆನಂದ ಮೊಗವೀರ ಮಾತನಾಡಿ,ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಿರಿ ಸಿಂಗಾರ ಕೋಲ ಸೇವೆಯನ್ನು ಊರಿನವರ ಸಹಕಾರ ಮತ್ತು ದೈವವನ್ನು ನಂಬಿದ ಕುಟುಂಬಸ್ಥರ ಸಹಕಾರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಯುವ ಪ್ರತಿಭೆ ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಎಂಬ ಧ್ವನಿ ಸುರಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ.ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಹ ಭಾಗ್ಯವನ್ನು ದೇವರು ಅವರಿಗೆ ಕುರುಣಿಸಲಿ ಎಂದು ಹಾರೈಸಿದರು.

ನಾಗಬನದ ನಾಗಪ್ಪನ ಮಹಿಮೆ ಕುರಿತು ಸಂಗೀತವನ್ನು ರಚನೆ ಮಾಡಿರುವ ಸದಾಶಿವ ಮೊಗವೀರ ಮಾತನಾಡಿ,ಸ್ವಾಮಿಲಿಂಗ ಎನ್ನುವ ಹಾಡನ್ನು ಮೊದಲ ಬಾರಿಗೆ ರಚನೆ ಮಾಡಲಾಗಿದ್ದು ದೇವರ ಕೃಪೆಯಿಂದ ಎರಡನೇ ಬಾರಿಗೆ ಶೂಲದ ಹೈಗುಳಿ ಎನ್ನುವ ಸಂಗೀತವನ್ನು ರಚನೆ ಮಾಡಿದ್ದೇನೆ ಈ ಹಿಂದೆ ರಚಿಸಿರುವ ಎರಡು ಧ್ವನಿ ಸುರುಳಿಗಳು ಯಶಸ್ವಿಯಾಗಿ ಮೂಡಿ ಬಂದಿದೆ ಎಲ್ಲರ ಸಹಕಾರದಿಂದ ಮೂರನೇ ಧ್ವನಿ ಸುರುಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.

ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿಯನ್ನು ಮಂಜುನಾಥ್ ನಾಯ್ಕ್ ಅವರು ಬಿಡುಗಡೆಗೊಳಿಸಿದರು.ಸದಾಶಿವ ಮೊಗವೀರ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ 3ನೇ ಧ್ವನಿ ಸುರುಳಿಯಾಗಿದೆ.ಈ ಸಂದರ್ಭದಲ್ಲಿ ಸಂಗೀತ ರಚನೆಗೆ ಸಹಕರಿಸಿದ ಮಹೇಂದ್ರ ಗೌಡ,ಬಾಲು ಮಾಸ್ಟರ್ ಹಾಗೂ ಸದಾಶಿವ ಮೊಗವೀರ ಅವರನ್ನು ದೈವಸ್ಥಾನದ ಮೊಕ್ತೇಸರರಾದ ಕೃಷ್ಣ ಚೆಂದನ್ ಅವರು ಸನ್ಮಾನಿಸಿದರು.ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಾದ ವೈಷ್ಣವಿ,ಯಶೋಧರ,ನವ್ಯಶ್ರೀ ಹಾಗೂ ಸೈನಿಕ ಶ್ರೀನಾಥ್ ನಾಯ್ಕ್ ಅವರನ್ನು ಗೌರವಿಸಲಾಯಿತು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೃಷ್ಣ ಚೆಂದನ್ ಅಧ್ಯಕ್ಷತೆ ವಹಿಸಿದ್ದರು,ಈ ಸಮಯದಲ್ಲಿ ಗಣೇಶ ಚೆಂದನ್,ಆನಂದ ನಾಯ್ಕ್,ಭಾಸ್ಕರ ಎಂ ನಾಯ್ಕ್,ನರಸಿಂಹ ನಾಯ್ಕ್,ಸುರೇಶ ಪಾತ್ರಿ,ನಾಗರಾಜ ಪಾಣನರ,ಪ್ರಶಾಂತ ನಾಯ್ಕ್,ಗುರುರಾಜ್,ಶಿವರಾಜ್,ಯೋಗೀಶ್,ಜಗದೀಶ,ಮಂಜುನಾಥ ನಾಯ್ಕ್ ಉಪಸ್ಥಿತರಿದ್ದರು.

Advertisement

Share
Team Kundapur Times

Recent Posts

ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರಿಗೆ ನೆರವು ವಿತರಣೆ

oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…

6 days ago

ಅಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಹಕ್ಲಾಡಿ ಆಯ್ಕೆ

ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯ‌ರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…

1 month ago

ಕಾಪು:ಗೂಡ್ಸ್ ಟೆಂಪೋ ಪಲ್ಟಿ ನಾಲ್ವರು ಸಾವು

ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…

2 months ago

ಶಿಕ್ಷಕ ಸುರೇಂದ್ರಗೆ ಮಕ್ಕಳ ಮಿತ್ರ ಪ್ರಶಸ್ತಿ

ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…

2 months ago

ತ್ರಾಸಿ:ನಿಂತ್ತಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…

2 months ago

ಮರವಂತೆ ಸಮುದ್ರ ಕಿನಾರೆ ಸ್ವಚ್ಚತೆ

ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…

3 months ago