ಕುಂದಾಪುರ:ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಹೊಸಾಡು ಗ್ರಾಮದ ಅರಾಟೆ ಒಳನಾಡು ಶ್ರೀಸ್ವಾಮಿಲಿಂಗ ಮತ್ತು ಸಪರಿವಾರ ದೈವಗಳ ಮಹಿಮೆ ಕುರಿತು ಸದಾಶಿವ ಎನ್ ಮೊಗವೀರ ಅವರ ರಚನೆಯಲ್ಲಿ ಮೂಡಿ ಬಂದಿರುವ ನಾಗಬನದ ನಾಗಪ್ಪನ ಮಹಿಮೆ ಮಹಿಮೆ ಎಂಬ ವಿಶೇಷವಾದ ಧ್ವನಿ ಸುರುಳಿಯನ್ನು ದೈವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಮಂಗಳವಾರ ಬಿಡುಗಡೆ ಮಾಡಲಾಯಿತು.ಶ್ರೀ ಸ್ವಾಮಿಲಿಂಗ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈಭವ,ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಆನಂದ ಮೊಗವೀರ ಮಾತನಾಡಿ,ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಿರಿ ಸಿಂಗಾರ ಕೋಲ ಸೇವೆಯನ್ನು ಊರಿನವರ ಸಹಕಾರ ಮತ್ತು ದೈವವನ್ನು ನಂಬಿದ ಕುಟುಂಬಸ್ಥರ ಸಹಕಾರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಯುವ ಪ್ರತಿಭೆ ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಎಂಬ ಧ್ವನಿ ಸುರಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ.ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಹ ಭಾಗ್ಯವನ್ನು ದೇವರು ಅವರಿಗೆ ಕುರುಣಿಸಲಿ ಎಂದು ಹಾರೈಸಿದರು.
ನಾಗಬನದ ನಾಗಪ್ಪನ ಮಹಿಮೆ ಕುರಿತು ಸಂಗೀತವನ್ನು ರಚನೆ ಮಾಡಿರುವ ಸದಾಶಿವ ಮೊಗವೀರ ಮಾತನಾಡಿ,ಸ್ವಾಮಿಲಿಂಗ ಎನ್ನುವ ಹಾಡನ್ನು ಮೊದಲ ಬಾರಿಗೆ ರಚನೆ ಮಾಡಲಾಗಿದ್ದು ದೇವರ ಕೃಪೆಯಿಂದ ಎರಡನೇ ಬಾರಿಗೆ ಶೂಲದ ಹೈಗುಳಿ ಎನ್ನುವ ಸಂಗೀತವನ್ನು ರಚನೆ ಮಾಡಿದ್ದೇನೆ ಈ ಹಿಂದೆ ರಚಿಸಿರುವ ಎರಡು ಧ್ವನಿ ಸುರುಳಿಗಳು ಯಶಸ್ವಿಯಾಗಿ ಮೂಡಿ ಬಂದಿದೆ ಎಲ್ಲರ ಸಹಕಾರದಿಂದ ಮೂರನೇ ಧ್ವನಿ ಸುರುಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿಯನ್ನು ಮಂಜುನಾಥ್ ನಾಯ್ಕ್ ಅವರು ಬಿಡುಗಡೆಗೊಳಿಸಿದರು.ಸದಾಶಿವ ಮೊಗವೀರ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ 3ನೇ ಧ್ವನಿ ಸುರುಳಿಯಾಗಿದೆ.ಈ ಸಂದರ್ಭದಲ್ಲಿ ಸಂಗೀತ ರಚನೆಗೆ ಸಹಕರಿಸಿದ ಮಹೇಂದ್ರ ಗೌಡ,ಬಾಲು ಮಾಸ್ಟರ್ ಹಾಗೂ ಸದಾಶಿವ ಮೊಗವೀರ ಅವರನ್ನು ದೈವಸ್ಥಾನದ ಮೊಕ್ತೇಸರರಾದ ಕೃಷ್ಣ ಚೆಂದನ್ ಅವರು ಸನ್ಮಾನಿಸಿದರು.ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಾದ ವೈಷ್ಣವಿ,ಯಶೋಧರ,ನವ್ಯಶ್ರೀ ಹಾಗೂ ಸೈನಿಕ ಶ್ರೀನಾಥ್ ನಾಯ್ಕ್ ಅವರನ್ನು ಗೌರವಿಸಲಾಯಿತು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೃಷ್ಣ ಚೆಂದನ್ ಅಧ್ಯಕ್ಷತೆ ವಹಿಸಿದ್ದರು,ಈ ಸಮಯದಲ್ಲಿ ಗಣೇಶ ಚೆಂದನ್,ಆನಂದ ನಾಯ್ಕ್,ಭಾಸ್ಕರ ಎಂ ನಾಯ್ಕ್,ನರಸಿಂಹ ನಾಯ್ಕ್,ಸುರೇಶ ಪಾತ್ರಿ,ನಾಗರಾಜ ಪಾಣನರ,ಪ್ರಶಾಂತ ನಾಯ್ಕ್,ಗುರುರಾಜ್,ಶಿವರಾಜ್,ಯೋಗೀಶ್,ಜಗದೀಶ,ಮಂಜುನಾಥ ನಾಯ್ಕ್ ಉಪಸ್ಥಿತರಿದ್ದರು.
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀಶಂಕರಾಚಾರ್ಯ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ "ಐಕ್ಯಂ" 2025 ಅದ್ದೂರಿಯಿಂದ ನಡೆಯಿತು.ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ…
ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು…
ಉಡುಪಿ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ವಿದ್ಯಾರ್ಥಿಗಳಿಂದ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ ನಡೆಯಿತು.ವಿದ್ಯಾರ್ಥಿಗಳು ಹೆಜ್ಞೆ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ಜರುಗಿತು.ಹಿರಿಯ ದೈಹಿಕ ನಿರ್ದೇಶಕ ಯುನೈಟೆಡ್ ಉಡುಪಿ…
ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ…