ಕುಂದಾಪುರ

ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿ ಬಿಡುಗಡೆ,ಪತ್ರಿಭಾ ಪುರಸ್ಕಾರ ವಿತರಣೆ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಹೊಸಾಡು ಗ್ರಾಮದ ಅರಾಟೆ ಒಳನಾಡು ಶ್ರೀಸ್ವಾಮಿಲಿಂಗ ಮತ್ತು ಸಪರಿವಾರ ದೈವಗಳ ಮಹಿಮೆ ಕುರಿತು ಸದಾಶಿವ ಎನ್ ಮೊಗವೀರ ಅವರ ರಚನೆಯಲ್ಲಿ ಮೂಡಿ ಬಂದಿರುವ ನಾಗಬನದ ನಾಗಪ್ಪನ ಮಹಿಮೆ ಮಹಿಮೆ ಎಂಬ ವಿಶೇಷವಾದ ಧ್ವನಿ ಸುರುಳಿಯನ್ನು ದೈವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಮಂಗಳವಾರ ಬಿಡುಗಡೆ ಮಾಡಲಾಯಿತು.ಶ್ರೀ ಸ್ವಾಮಿಲಿಂಗ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈಭವ,ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

Advertisement

ಆನಂದ ಮೊಗವೀರ ಮಾತನಾಡಿ,ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಿರಿ ಸಿಂಗಾರ ಕೋಲ ಸೇವೆಯನ್ನು ಊರಿನವರ ಸಹಕಾರ ಮತ್ತು ದೈವವನ್ನು ನಂಬಿದ ಕುಟುಂಬಸ್ಥರ ಸಹಕಾರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಯುವ ಪ್ರತಿಭೆ ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಎಂಬ ಧ್ವನಿ ಸುರಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ.ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಹ ಭಾಗ್ಯವನ್ನು ದೇವರು ಅವರಿಗೆ ಕುರುಣಿಸಲಿ ಎಂದು ಹಾರೈಸಿದರು.

ನಾಗಬನದ ನಾಗಪ್ಪನ ಮಹಿಮೆ ಕುರಿತು ಸಂಗೀತವನ್ನು ರಚನೆ ಮಾಡಿರುವ ಸದಾಶಿವ ಮೊಗವೀರ ಮಾತನಾಡಿ,ಸ್ವಾಮಿಲಿಂಗ ಎನ್ನುವ ಹಾಡನ್ನು ಮೊದಲ ಬಾರಿಗೆ ರಚನೆ ಮಾಡಲಾಗಿದ್ದು ದೇವರ ಕೃಪೆಯಿಂದ ಎರಡನೇ ಬಾರಿಗೆ ಶೂಲದ ಹೈಗುಳಿ ಎನ್ನುವ ಸಂಗೀತವನ್ನು ರಚನೆ ಮಾಡಿದ್ದೇನೆ ಈ ಹಿಂದೆ ರಚಿಸಿರುವ ಎರಡು ಧ್ವನಿ ಸುರುಳಿಗಳು ಯಶಸ್ವಿಯಾಗಿ ಮೂಡಿ ಬಂದಿದೆ ಎಲ್ಲರ ಸಹಕಾರದಿಂದ ಮೂರನೇ ಧ್ವನಿ ಸುರುಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.

ಸದಾಶಿವ ಮೊಗವೀರ ಅವರು ರಚಿಸಿರುವ ನಾಗಬನದ ನಾಗಪ್ಪನ ಮಹಿಮೆ ಧ್ವನಿ ಸುರುಳಿಯನ್ನು ಮಂಜುನಾಥ್ ನಾಯ್ಕ್ ಅವರು ಬಿಡುಗಡೆಗೊಳಿಸಿದರು.ಸದಾಶಿವ ಮೊಗವೀರ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ 3ನೇ ಧ್ವನಿ ಸುರುಳಿಯಾಗಿದೆ.ಈ ಸಂದರ್ಭದಲ್ಲಿ ಸಂಗೀತ ರಚನೆಗೆ ಸಹಕರಿಸಿದ ಮಹೇಂದ್ರ ಗೌಡ,ಬಾಲು ಮಾಸ್ಟರ್ ಹಾಗೂ ಸದಾಶಿವ ಮೊಗವೀರ ಅವರನ್ನು ದೈವಸ್ಥಾನದ ಮೊಕ್ತೇಸರರಾದ ಕೃಷ್ಣ ಚೆಂದನ್ ಅವರು ಸನ್ಮಾನಿಸಿದರು.ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಾದ ವೈಷ್ಣವಿ,ಯಶೋಧರ,ನವ್ಯಶ್ರೀ ಹಾಗೂ ಸೈನಿಕ ಶ್ರೀನಾಥ್ ನಾಯ್ಕ್ ಅವರನ್ನು ಗೌರವಿಸಲಾಯಿತು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೃಷ್ಣ ಚೆಂದನ್ ಅಧ್ಯಕ್ಷತೆ ವಹಿಸಿದ್ದರು,ಈ ಸಮಯದಲ್ಲಿ ಗಣೇಶ ಚೆಂದನ್,ಆನಂದ ನಾಯ್ಕ್,ಭಾಸ್ಕರ ಎಂ ನಾಯ್ಕ್,ನರಸಿಂಹ ನಾಯ್ಕ್,ಸುರೇಶ ಪಾತ್ರಿ,ನಾಗರಾಜ ಪಾಣನರ,ಪ್ರಶಾಂತ ನಾಯ್ಕ್,ಗುರುರಾಜ್,ಶಿವರಾಜ್,ಯೋಗೀಶ್,ಜಗದೀಶ,ಮಂಜುನಾಥ ನಾಯ್ಕ್ ಉಪಸ್ಥಿತರಿದ್ದರು.

Advertisement
Advertisement

Share
Team Kundapur Times

Recent Posts

ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ ಹೃದಯಘಾತದಿಂದ ನಿಧನ

ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ…

3 days ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ತಂತ್ರಜ್ಞಾನ ಮಾಹಿತಿ ಕಾರ್ಯಗಾರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಡೈರೆಕ್ಟರ್ ಇಂಚಾರ್ಜ್,ಪಿಪಿಸಿ…

4 days ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಂದ ಕೈಮಗ್ಗ ಘಟಕಕ್ಕೆ ಕೈಗಾರಿಕಾ ಭೇಟಿ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೈಮಗ್ಗ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.ಉಡುಪಿ ಬ್ರಹ್ಮಗಿರಿ…

4 days ago

ಪರೀಕ್ಷೆಯಲ್ಲಿ ಅಂಕ ನೀಡುವಂತೆ ದೈವದ ಮೊರೆ ಹೋದ ವಿದ್ಯಾರ್ಥಿ

ಕುಂದಾಪುರ:ಪರೀಕ್ಷೆಯಲ್ಲಿ ತಾನು ಅಂದು ಕೊಂಡಷ್ಟು ಮಾಕ್ರ್ಸ್ ನೀಡುವಂತೆ ನಿವೇದಿಸಿ ವಿದ್ಯಾರ್ಥಿಯೊಬ್ಬ (ಳು) ಹೊಳ್ಮಗೆ ಹೋರ್ ಬೊಬ್ಬರ್ಯ ದೈವದ ಮೊರೆ ಹೋಗಿದ್ದು.ಚೀಟಿ…

2 weeks ago

ಉಡುಪಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಜನಾರ್ಧನ ಕೆ.ಎಂ ಆಯ್ಕೆ

ಕುಂದಾಪುರ:ಕರ್ನಾಟಕ ಪತ್ರಕರ್ತರ ಸಂಘ (ರಿ) ಪ್ರೆಸ್ ಕಾಲೊನಿ,ಬೆಳಗಾವಿ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿ ಅವರು ರಾಜ್ಯಾಧ್ಯಕ್ಷರಾದ ಎಂ.ಬಿ.ಶಿವಪೂಜಿ ಅವರ…

3 weeks ago

ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂರ್ಜುಲಿ ಹಾಗೂ ಪರಿವಾರ ದೈವಗಳ ವಾರ್ಷಿಕ ಗೆಂಡಸೇವೆ

(ಪಂಜುರ್ಲಿ) ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ…

4 weeks ago