ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕೇರಿಕೊಡ್ಲು ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಹಾಕದಿರಲು ನಿರ್ಧರಿಸಿ ಚುನಾವಣ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡುವುದರ ಮುಖೇನ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರ
ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮದ ಕೇರಿಕೊಡ್ಲು ಭಾಗದ ನಿವಾಸಿಗಳಿಗೆ ಸುಸಜ್ಜಿತವಾದ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಹೊಂದುವುದು ಕನಸಿನ ಮಾತೆ ಎಂದು ಭಾಸವಾಗುತ್ತಿದೆ.ಕಳೆದ ಮುವತ್ತು ವರ್ಷಗಳಿಂದ ಸ್ಥಳೀಯರು ಸಲ್ಲಿಕೆ ಮಾಡುತ್ತಿರುವ ಅಹವಾಲಿಗೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಂದು ಬಾರಿಯೂ ಸ್ಪಂದನೆ ಮಾಡಿಲ್ಲ.ಮಳೆಗಾಲದಲ್ಲಿ ಕೇಸರಿನ ರಾಡಿಯಿಂದ ಕೂಡಿರುವ ರಸ್ತೆಯಲ್ಲಿ ಸಾಗುವುದೆ ಅಲ್ಲಿನ ಜನರಿಗೆ ದುಸ್ತರವಾಗಿದೆ.ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಕೇರಿಕೊಡ್ಲು ರಸ್ತೆಯನ್ನು ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು,ಅಧಿಕಾರಿಗಳು ಮುಂದಾಗದೆ ಇದ್ದರೆ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕೆಂಪು ಧೂಳಿನಿಂದ ಕೂಡಿದ್ದರೆ/ಮಳೆಗಾಲದಲ್ಲಿ ಕೇಸರು ರಾಡಿಯಿಂದ ಕೂಡಿರುತ್ತದೆ.
ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಅಳವಡಿಕೆ:ಕೇರಿಕೊಡ್ಲು ಪರಿಸರದಲ್ಲಿ 20ಕ್ಕೂ ಅಧಿಕ ಮನೆಗಳಿವೆ, ಅಂದಾಜು 120ಕ್ಕೂ ಅಧಿಕ ಮತಗಳಿವೆ.ಊರಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಬೇಸತ್ತ ಅಲ್ಲಿನ ನಾಗರಿಕರು ಚುನಾವಣೆಯನ್ನೆ ಬಹಿಷ್ಕರಿಸುವ ನಿರ್ಧಾರಕ್ಕೆ ಮುಂದಾಗಿದ್ದಾರೆ.ಅದರ ಭಾಗವಾಗಿ ಬ್ಯಾನರ್ ಅಳವಡಿಕೆಯನ್ನು ಕೂಡ ಮಾಡಿದ್ದಾರೆ.
ಮಣ್ಣಿನ ರಸ್ತೆಯಲ್ಲಿ ಸಂಕಟದ ಸಂಚಾರ:ಮೊವಾಡಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕೇರಿಕೊಡ್ಲು ಭಾಗದ ಮಣ್ಣಿನ ರಸ್ತೆ ಸುಮಾರು 1.30 ಕಿ.ಮೀ ದೂರವನ್ನು ಹೊಂದಿದೆ ಆ ಭಾಗದ ನಿವಾಸಿಗಳಿಗೆ ಇದೆ ಪ್ರಮುಖ ರಸ್ತೆ ಆಗಿದ್ದು ಒಂದು ಬಾರಿಯೂ ಅಭಿವೃದ್ಧಿ ಆಗಿಲ್ಲ.ಮಣ್ಣಿನಿಂದ ಕೂಡಿದ ಕೇರಿಕೊಡ್ಲು ರಸ್ತೆ ಬೇಸಿಗೆಯಲ್ಲಿ ಕೆಂಪು ಧೂಳಿನಿಂದ ಕೂಡಿದ್ದರೆ,ಮಳೆಗಾಲದಲ್ಲಿ ಕೇಸರು ರಾಡಿಯಿಂದ ಕೂಡಿರುತ್ತದೆ.ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕ್ಕೆನ್ನುವುದು ಗ್ರಾಮಸ್ಥರ ಆಗಹ್ರವಾಗಿದೆ.
ಹೊಸಾಡು ಗ್ರಾಮ ಒಂದರಲ್ಲೇ ಇದು ಎರಡನೇ ಪ್ರರಕರಣ:ಕಳೆದ ಒಂದು ವಾರದ ಒಳಗೆ ಹೊಸಾಡು ಗ್ರಾಮ ಪಂಚಾಯತ್ ಒಂದರಲ್ಲೆ ಚುನಾವಣೆ ಬಹಿಷ್ಕರಿಸುವ ಬ್ಯಾನರ್ ಅಳವಡಿಕೆ ಮಾಡಿರುವುದು ಇದು ಎರಡನೇ ಪ್ರಕರಣವಾಗಿದೆ.ಜ.21 ರ ಭಾನುವಾರ ದಂದು ಹೊಸಾಡು ಹುಣ್ಸೆಬೆಟ್ಟಿನ ಎಸ್.ಸಿ ಕಾಲೋನಿ ನಿವಾಸಿಗಳು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡಿದ್ದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…