ಕುಂದಾಪುರ

ಏಕಥ-2024,ಪ್ರಾಂತೀಯ ಸಮ್ಮೇಳನ ಪ್ರಾಂತ್ಯ-5

Share

ಕುಂದಾಪುರ:ಲಯನ್ಸ್ ಇಂಟರ್ ನ್ಯಾಷನಲ್ ಲಯನ್ ಡಿಸ್ಟ್ರಿಕ್ಟ್ 317 ಸಿ ವತಿಯಿಂದ ಏಕಥ-2024 ಪ್ರಾಂತೀಯ ಸಮ್ಮೇಳನ ಪ್ರಾಂತ್ಯ-5 ಕಾರ್ಯಕ್ರಮ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ (ಗ್ರೇಸ್ ತೆಕ್ಕಟ್ಟೆಯಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.

ಲಯನ್ಸ್.ರಮಾ ಬೋಳಾರ್ (ಎಂಜಿಎಫ್) ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶೈಕ್ಷಣಿಕ,ಸಾಮಾಜಿಕ ಸೇವಾ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇನ್ನಷ್ಷು ಸೇವಾ ಕಾರ್ಯಗಳನ್ನು ಮಾಡಲಾಗುವುದೆಂದು ಶುಭಹಾರೈಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು, ಕಿಡ್ನಿ ಪೀಡಿತ ರೋಗಿಗಳಿಗೆ ಧನಸಹಾಯ ನೀಡಲಾಯಿತು . ವಿದ್ಯಾನಿಧಿ ಹಾಗೂ ವಿದ್ಯಾ ಪೋಷಕ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ವಿತರಿಸಲಾಯತು. ಕಾಳವರ ವರದರಾಜ ಶೆಟ್ಟಿಯವರುಕೊಡ ಮಾಡಲಿರುವ ನಾಲ್ಕು ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಬ್ಯಾನರ್ ಪ್ರೆಸೆಂಟೇಷನ್ ನಲ್ಲಿ ಭಾಗವಹಿಸಿದ ಹತ್ತು ಕ್ಲಬ್ ನಲ್ಲಿ ಮೊದಲ, ದ್ವಿತೀಯ, ತೃತೀಯ ಸ್ಥಾನ ಪಡೆದ ಕ್ಲಬ್ ಗೆ ಬಹುಮಾನ ನೀಡಲಾಯಿತು.

ರೀಜನ್ ಚೇರ್ ಪರ್ಸನ್ ,ರೀಜನ್ 5 ಪ್ರಾಂತೀಯ ಅಧ್ಯಕ್ಷರಾದ ಲ.ಏಕನಾಥ ಬೋಳಾರ್ (ಎಂಜಿಎಫ್) ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಅಶಕ್ತ ಮತ್ತು ಬಡವರ ಮೇಲಿನ ಕಾಳಜಿ ಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದ್ದು,ಆರೋಗ್ಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರಕ್ಕೂ ಸಹಕಾರವನ್ನು ನೀಡುತ್ತಾ ಬರಲಾಗುತ್ತಿದೆ.ನಾವು ದುಡಿದ ಹಣದಲ್ಲಿ ಸಮಾಜ ಸೇವೆಗೆ ಒಂದಿಷ್ಟು ಹಣ ಮೀಸಲಿಟ್ಟು ವಿನಿಯೋಗ ಮಾಡಿದಾಗ ಮಾತ್ರ ದುಡಿಮೆಯ ಪ್ರಾಪ್ತಿ ನಮಗೆ ದೊರಕುತ್ತದೆ ಎಂದರು.

ಅಂತರಾಷ್ಟ್ರೀಯ ತರಬೇತುದಾರ , ಮೈಸೂರಿನ ಪರಿವರ್ತನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿರುವ ಚೇತನ್ ರಾಮ್ ಆರ್.ಎ, ಪ್ರೇರಣಾತ್ಮಕ ದಿಕ್ಸೂಚಿ ಭಾಷಣ ಗೈದರು.

ಈ ಸಂದರ್ಭದಲ್ಲಿ ಬಿ ಐ ಎ ಮೈಸೂರು ಪ್ರಾಂತ್ಯದ ಚೇರ್ಮನ್ ಆಗಿರುವ ಲ.ನಾಗರಾಜ್ ವಿ ಬಾಯಿರಿ ಲಯನ್ಸ್ನ ಆದರ್ಶವನ್ನು ತೆರೆದಿಟ್ಟರು.ಪ್ರಾಂತೀಯ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರು ಲ.ಬಿ ಅರುಣ್ ಕುಮಾರ್ ಹೆಗ್ಡೆ, ಚೇರ್ಮನ್ ಲ.ರಮಾನಂದ . ಕೆ ಕಾರ್ಯದರ್ಶಿ ಪ್ರಕಾಶ್ ಬೆಟ್ಟಿನ್ , ಖಜಾಂಚಿ ಲ.ದಿನಕರ ಶೆಟ್ಟಿ, ರೀಜನ್ ಸೆಕ್ರೆಟರಿ ಭೋಜರಾಜ ಶೆಟ್ಟಿ, ಅತಿಥೇಯ ಕ್ಲಬ್ಬಿನ ಅಧ್ಯಕ್ಷರಾಗಿರುವ ಲ.ರಾಘವೇಂದ್ರ ಬಸ್ರೂರು,ಜೋನ್ ಚೇರ್ ಪರ್ಸನ್ ಜೋನ್ 1 ಲ.ನವೀನ್ ಕುಮಾರ್ ಶೆಟ್ಟಿ,ಜೋನ್ ಚೇರ್ ಪರ್ಸನ್ ಜೋನ್ 2 ಲ.ಜಗದೀಶ್ ಶೆಟ್ಟಿ ಎಲ್ಲಾ ಪ್ರಾಂತ್ಯದ ಅಧ್ಯಕ್ಷರು , ಹಾಗೂ ಲಯನ್ಸ್ ಕ್ಲಬ್ ಕೋಟೇಶ್ವರ ಸದಸ್ಯರು,ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿಯ ಚೇರ್ಮನ್ ಇಂಜಿನಿಯರ್ ರಮಾನಂದ ಕೆ ಸ್ವಾಗತಿಸಿ, ,ಲ ವಿಶ್ವನಾಥ ಶೆಟ್ಟಿ ಉಪ್ಪುಂದ ಲ ಜಯಶೀಲಾ ಕಾಮತ್ , ನಿರೂಪಿಸಿದರು ಸಮಿತಿ ಕಾರ್ಯದರ್ಶಿ ಪ್ರಕಾಶ್ ಬೆಟ್ಟಿನ್ ವಂದಿಸಿದರು .ವಿವಿಧ ಲಯನ್ಸ್ ವತಿಯಿಂದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

3 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago