ಕುಂದಾಪುರ:ಹಕ್ಲಾಡಿ ಗ್ರಾಮದ ತೋಪ್ಲು ಎಂಬಲ್ಲಿ ಚಕ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಶಿಥಿಲಾವಸ್ಥೆಯಲ್ಲಿರುವ ಹಲಗೆಗಳನ್ನು ಅಳವಡಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.
ಚಕ್ರ ನದಿ ತೀರದ ಗ್ರಾಮಗಳಾದ ಹಕ್ಲಾಡಿ,ಬಾರಂದಾಡಿ,ಬಗ್ವಾಡಿ,
ಕಟ್ ಬೇಲ್ತೂರು,ತುಳಸಿ,ತೋಪ್ಲು,ವಂಡ್ಸೆ ಗ್ರಾಮದ ಜನರಿಗೆ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 17 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಡಿ 13ಕೋಟಿ.ರೂ ವೆಚ್ಚದಲ್ಲಿ ಹಕ್ಲಾಡಿ ಗ್ರಾಮದ ತೋಪ್ಲು ಎಂಬಲ್ಲಿ ಚಕ್ರ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.ಅಣೆಕಟ್ಟಿನ ನಿರ್ವಹಣೆಗೆಂದೇ ವರ್ಷಕ್ಕೆ ಸರಿ ಸುಮಾರು 7.ಲಕ್ಷ.ಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ.ಅಣೆಕಟ್ಟಿನ ನಿರ್ವಹಣೆಯನ್ನು ಹಲವಾರು ವರ್ಷಗಳಿಂದಲೂ ಸರಿಯಾಗಿ ನಿರ್ವಹಿಸದೆ ಇದ್ದಿದ್ದರಿಂದ ಕಿಂಡಿ ಅಣೆಕಟ್ಟಿಗೆ ಅಳವಡಿಸುವ ಹಲಗೆಗಳು ದುಸ್ಥಿತಿಗೆ ತಲುಪಿದೆ.ಅಣೆಕಟ್ಟಿನ ಒಡಲಲ್ಲಿ ಹೂಳು ಮಣ್ಣು ತುಂಬಿಕೊಂಡಿದೆ.ಮಣ್ಣಿನ ರಾಶಿಗಳು ಅಲಲ್ಲಿ ಗುಡ್ಡೆಯಾಗಿ ಕೃತಕ ದ್ವೀಪ ಸೃಷ್ಟಿಯಾಗಿದೆ.ಸಣ್ಣ ನೀರಾವರಿ ಇಲಾಖೆ ಬೇಜಾವಾಬ್ದಾರಿ ತನದಿಂದ ಬಹುಪಯೋಗಿ ಯಾಗಿರುವ ಅಣೆಕಟ್ಟಿನ ಉಪಯೋಗ ಜನರಿಗೆ ತಲುಪದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಉಪ್ಪು ನೀರಿನ ತಡೆಗೆಂದೆ ಕಿಂಡಿಗಳಿಗೆ ಹಲಗೆಗಳನ್ನು ಅಳವಡಿಸಬೇಕಾಗಿರುವುದ
ರಿಂದ.ಹದಗೆಟ್ಟು ಹೋಗಿದ್ದ ಶಿಥಿಲಾವಸ್ಥೆಯಲ್ಲಿರುವ ಹಲಗೆಗಳನ್ನು ಅಳವಡಿಕೆ ಮಾಡಬಾರದೇನ್ನುವುದು ಗ್ರಾಮಸ್ಥರ ಆಗ್ರಹ.ದುಸ್ಥಿತಿಯಲ್ಲಿದ್ದ ಹಲಗೆಗಳನ್ನು ಅಳವಡಿಸುವುದರಿಂದ ಉಪ್ಪು ನೀರು ಒಳ ನುಗ್ಗಿ ಬರುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎನ್ನುವುದು ಗ್ರಾಮಸ್ಥರ ವಾದವಾಗಿದೆ.ತೋಪ್ಲು ಕಿಂಡಿ ಅಣೆಕಟ್ಟಿಗೆ ವೈಜ್ಞಾನಿಕ ರೀತಿಯಲ್ಲಿ ಕೂಡಿದ ಹಲಗೆಗಳನ್ನು ಅಳವಡಿಸಬೇಕ್ಕುನ್ನುವುದು ಗ್ರಾಮಸ್ಥರ ಬೇಡಿಕೆ.ಅವಧಿಗೆ ಮುನ್ನವೆ ಅಣೆಕಟ್ಟಿನ ಕಿಂಡಿಗಳಿಗೆ ಹಲಗೆಗಳನ್ನು ಹಾಕದೆ ಇದ್ದಿದ್ದರಿಂದ ಇಳಿತ,ಭರತದ ಮುಖೇನ ಈಗಾಗಲೇ ಹಿನ್ನಿರಿನ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದೆ.ಅಣೆಕಟ್ಟಿಗೆ ಹಲಗೆಗಳನ್ನು ಹಾಕಿ ನೀರನ್ನು ತಡೆ ಹಿಡಿಯುವುದರಿಂದ ಉಪ್ಪು ನೀರು ತುಂಬಿಕೊಂಡು ಬಾವಿ ನೀರು ಉಪ್ಪಾಗಲಿದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…