ಕುಂದಾಪುರ

ಸಮಗ್ರ ಕೃಷಿಯಲ್ಲಿ ರಾಮಯ್ಯ ಶೆಟ್ಟಿ ಕಾಲ್ತೋಡು ಅವರ ವಿಶಿಷ್ಟ ಸಾಧನೆ

Share

ಬೈಂದೂರು:ಕಾಲ್ತೋಡು ಗ್ರಾಮದ ನಿವಾಸಿ 58 ವರ್ಷ ಪ್ರಾಯದ ರಾಮಯ್ಯ ಶೆಟ್ಟಿ ಅವರ ವ್ಯಕ್ತಿತ್ವ ಪಾದರಸದಷ್ಟೆ ಚುರುಕು ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಲೆ ಇರುತ್ತಾರೆ,ಕೃಷಿಯಲ್ಲಿ ಅಗಾಧವಾದ ಅನುಭವ ಹೊಂದಿರುವ ರಾಮಯ್ಯ ಶೆಟ್ಟಿ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.ತನ್ನ 16 ನೇ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಧುಮುಕಿದ ಅವರು ಹಿಂದೆ ಮುಂದೆ ನೋಡಲೆ ಇಲ್ಲ ತನ್ನ ವಯಸ್ಸಿನ ದಿನಗಳನ್ನು ಕೃಷಿ ಕಾಯಕದೊಂದಿಗೆ ಕಳೆದ ಕಾಯಕಯೋಗಿ ಎಂದೆ ಹೇಳಬಹುದು.ತನ್ನ 11 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿಯನ್ನು ಆರಂಭಿಸಿದ ಅವರು ಭತ್ತ,ಅಡಿಕೆ,ಗೇರು,ಕಾಳುಮೆಣಸು,ತರಕಾರಿ,ಕಾಪಿ,ಬಾಳೆಯನ್ನು ಬೆಳೆಯುತ್ತಾರೆ,ಸಾವಯವ ಗೊಬ್ಬರವನ್ನು ಬಳಸಿಕೊಂಡು ಕೃಷಿಯನ್ನು ಮಾಡುತ್ತಾ ಇದ್ದಾರೆ.


ಪ್ರಾಯೋಗಿಕವಾಗಿ 100 ಕಾಫಿ ಗಿಡಗಳನ್ನು ತನ್ನ ಕೃಷಿ ಭೂಮಿಯಲ್ಲಿ ನೆಟ್ಟು ಮುನ್ನುಡಿ ಬರೆದಿದ್ದಾರೆ ಕರಾವಳಿ ತೀರದ ವಾತಾವರಣಕ್ಕೆ ಕಾಫಿ ಗಿಡ ಒಗ್ಗಿ ಕೊಳ್ಳಬಹುದ್ದೇನ್ನುವ ಹಿನ್ನೆಲೆಯಲ್ಲಿ ತನ್ನ ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಫಿ ಬೆಳೆಯನ್ನು ಅಳವಡಿಸಿಕೊಂಡಿದ್ದಾರೆ.ಕೃಷಿ ಭೂಮಿಗೆ ನೀರು ಹಾಯಿಸಲು ಎರಡು ಬಾವಿಗಳಿವೆ ನೀರಿನ ಕೊರತೆ ನಮಗೆ ಇಲ್ಲ ಎಂದು ಅವರು ಹೇಳುತ್ತಾರೆ.ಮಳೆ ಆರಂಭಗೊಳ್ಳುವ ಮೊದಲು ಅಂದರೆ ಜೂನ್ ತಿಂಗಳ ಮೊದಲ ವಾರದಲ್ಲಿ ಅಡಿಕೆ ಗಿಡಗಳಿಗೆ ಮೆಲಾಥಿನ್ ಔಷಧ ಸಿಂಪರಡಣೆ ಮಾಡಿದರೆ ಅಡಿಕೆಗೆ ತಗಲುವ ರೋಗವನ್ನು ಹತೋಟಿಗೆ ತರಬಹುದು ಎನ್ನುವುದು ಅವರ ಅನುಭವದ ಮಾತು.


ಅಡಿಕೆ ಹಾಳೆ,ತೆಂಗಿನ ಮರದ ಗರಿಯನ್ನು ಬಳಸಿಕೊಂಡು ಯಂತ್ರದಿಂದ ಪುಡಿಮಾಡಿ ಸಗಣಿಗೊಬ್ಬರವನ್ನು ಉಪಯೋಗಿಸಿಕೊಂಡು ಸಾವಯವ ಗೊಬ್ಬರವನ್ನು ತಾವೆ ತಯಾರಿಸಿಕೊಳ್ಳುತ್ತಾರೆ,ಸುಡಮಣ್ಣು ಮತ್ತು ಕೋಳಿ ಗೊಬ್ಬರವನ್ನು ಸಹ ಬಳಕೆ ಮಾಡಿಕೊಳ್ಳುತ್ತಾರೆ.
ಕೃಷಿ ಎಂದರೆ ಅದರ ಜೊತೆಯಲ್ಲೆ ಇರಬೇಕು ಉತ್ಸಾಹದಿಂದ ಕೆಲಸವನ್ನು ನಾವೇ ಮಾಡಬೇಕು ಕೃಷಿ ಲಾಭದಾಯಕವಾಗಿದೆ ಖರ್ಚೆಲ್ಲಾ ಕಳೆದು ವರ್ಷಕ್ಕೆ 4 ಲಕ್ಷ ರೂ ಆದಾಯ ಬರುತ್ತಿದೆ ಮುಂದಿನ ದಿನಗಳಲ್ಲಿ ದ್ವಿಗುಣವಾಗಲಿದೆ ಎಂದು ಅವರೆ ಹೇಳುತ್ತಾರೆ ಭೂಮಿಯನ್ನು ಹಡವು ಗೇಡಬಾರದು ಕೃಷಿಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡಿದರೆ ನಷ್ಟದ ಮಾತಿಲ್ಲ ಎನ್ನುವುದು ರಾಮಯ್ಯ ಶೆಟ್ಟರ ಅಭಿಪ್ರಾಯವಾಗಿದೆ.ಹೈನುಗಾರಿಕೆಯಲ್ಲಿ ತೊಡಗಿಕೊಂಡ ರಾಮಯ್ಯ ಶೆಟ್ಟರ ಬಳಿ 15 ದೇಶಿ ಹಸುಗಳಿವೆ.
ಕೋಳಿ ಸಾಕಾಣಿಕೆ-ಕೋಳಿ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡ ಅವರು ಕೋಳಿ ಫಾರಂ ಅನ್ನು ನಿರ್ವಹಿಸುತ್ತಾ ಇದ್ದಾರೆ 4500 ಫಾರಂ ಕೋಳಿಗಳು ಅವರ ಫಾರಂನಲ್ಲಿ ಇದೆ.


ನಾಟಿ ವೈದ್ಯ ರಾಮಯ್ಯ ಶೆಟ್ಟಿ-ಕಿಡ್ನಿ ಸ್ಟೋನ್,ಪಿತ್ತಕೋಶ ಸ್ಟೋನ್,ಉರಿಮೂತ್ರ,ಮೂತ್ರ ಸರಿಯಾಗಿ ಆಗದಿರುವುದಕ್ಕೆ,ತಾಳಂಗಳಕ್ಕೆ ಗಿಡಮೂಲಿಕೆ ಔಷಧವನ್ನು ರಾಮಯ್ಯ ಶೆಟ್ಟಿ ಅವರು ನೀಡುತ್ತಾರೆ.
ಕಿಡ್ನಿ ಮತ್ತು ಪಿತ್ತಕೋಶದಲ್ಲಿ ಆಗುವ ಕಲ್ಲಿಗೆ,ಉರಿ ಮೂತ್ರಕ್ಕೆ ನಾಟಿ ಔಷಧವನ್ನು ಸಹ ರಾಮಯ್ಯ ಶೆಟ್ಟರು ನೀಡುತ್ತಾರೆ ಅವರ
ಸಂಪರ್ಕ ಮೊಬೈಲ್ ಸಂಖ್ಯೆ-9663263545

Advertisement

Share
Team Kundapur Times

Recent Posts

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

3 weeks ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

3 weeks ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

2 months ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

2 months ago