ಕುಂದಾಪುರ

ಸಮಗ್ರ ಕೃಷಿಯಲ್ಲಿ ರಾಮಯ್ಯ ಶೆಟ್ಟಿ ಕಾಲ್ತೋಡು ಅವರ ವಿಶಿಷ್ಟ ಸಾಧನೆ

Share

ಬೈಂದೂರು:ಕಾಲ್ತೋಡು ಗ್ರಾಮದ ನಿವಾಸಿ 58 ವರ್ಷ ಪ್ರಾಯದ ರಾಮಯ್ಯ ಶೆಟ್ಟಿ ಅವರ ವ್ಯಕ್ತಿತ್ವ ಪಾದರಸದಷ್ಟೆ ಚುರುಕು ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಲೆ ಇರುತ್ತಾರೆ,ಕೃಷಿಯಲ್ಲಿ ಅಗಾಧವಾದ ಅನುಭವ ಹೊಂದಿರುವ ರಾಮಯ್ಯ ಶೆಟ್ಟಿ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.ತನ್ನ 16 ನೇ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಧುಮುಕಿದ ಅವರು ಹಿಂದೆ ಮುಂದೆ ನೋಡಲೆ ಇಲ್ಲ ತನ್ನ ವಯಸ್ಸಿನ ದಿನಗಳನ್ನು ಕೃಷಿ ಕಾಯಕದೊಂದಿಗೆ ಕಳೆದ ಕಾಯಕಯೋಗಿ ಎಂದೆ ಹೇಳಬಹುದು.ತನ್ನ 11 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿಯನ್ನು ಆರಂಭಿಸಿದ ಅವರು ಭತ್ತ,ಅಡಿಕೆ,ಗೇರು,ಕಾಳುಮೆಣಸು,ತರಕಾರಿ,ಕಾಪಿ,ಬಾಳೆಯನ್ನು ಬೆಳೆಯುತ್ತಾರೆ,ಸಾವಯವ ಗೊಬ್ಬರವನ್ನು ಬಳಸಿಕೊಂಡು ಕೃಷಿಯನ್ನು ಮಾಡುತ್ತಾ ಇದ್ದಾರೆ.


ಪ್ರಾಯೋಗಿಕವಾಗಿ 100 ಕಾಫಿ ಗಿಡಗಳನ್ನು ತನ್ನ ಕೃಷಿ ಭೂಮಿಯಲ್ಲಿ ನೆಟ್ಟು ಮುನ್ನುಡಿ ಬರೆದಿದ್ದಾರೆ ಕರಾವಳಿ ತೀರದ ವಾತಾವರಣಕ್ಕೆ ಕಾಫಿ ಗಿಡ ಒಗ್ಗಿ ಕೊಳ್ಳಬಹುದ್ದೇನ್ನುವ ಹಿನ್ನೆಲೆಯಲ್ಲಿ ತನ್ನ ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಫಿ ಬೆಳೆಯನ್ನು ಅಳವಡಿಸಿಕೊಂಡಿದ್ದಾರೆ.ಕೃಷಿ ಭೂಮಿಗೆ ನೀರು ಹಾಯಿಸಲು ಎರಡು ಬಾವಿಗಳಿವೆ ನೀರಿನ ಕೊರತೆ ನಮಗೆ ಇಲ್ಲ ಎಂದು ಅವರು ಹೇಳುತ್ತಾರೆ.ಮಳೆ ಆರಂಭಗೊಳ್ಳುವ ಮೊದಲು ಅಂದರೆ ಜೂನ್ ತಿಂಗಳ ಮೊದಲ ವಾರದಲ್ಲಿ ಅಡಿಕೆ ಗಿಡಗಳಿಗೆ ಮೆಲಾಥಿನ್ ಔಷಧ ಸಿಂಪರಡಣೆ ಮಾಡಿದರೆ ಅಡಿಕೆಗೆ ತಗಲುವ ರೋಗವನ್ನು ಹತೋಟಿಗೆ ತರಬಹುದು ಎನ್ನುವುದು ಅವರ ಅನುಭವದ ಮಾತು.


ಅಡಿಕೆ ಹಾಳೆ,ತೆಂಗಿನ ಮರದ ಗರಿಯನ್ನು ಬಳಸಿಕೊಂಡು ಯಂತ್ರದಿಂದ ಪುಡಿಮಾಡಿ ಸಗಣಿಗೊಬ್ಬರವನ್ನು ಉಪಯೋಗಿಸಿಕೊಂಡು ಸಾವಯವ ಗೊಬ್ಬರವನ್ನು ತಾವೆ ತಯಾರಿಸಿಕೊಳ್ಳುತ್ತಾರೆ,ಸುಡಮಣ್ಣು ಮತ್ತು ಕೋಳಿ ಗೊಬ್ಬರವನ್ನು ಸಹ ಬಳಕೆ ಮಾಡಿಕೊಳ್ಳುತ್ತಾರೆ.
ಕೃಷಿ ಎಂದರೆ ಅದರ ಜೊತೆಯಲ್ಲೆ ಇರಬೇಕು ಉತ್ಸಾಹದಿಂದ ಕೆಲಸವನ್ನು ನಾವೇ ಮಾಡಬೇಕು ಕೃಷಿ ಲಾಭದಾಯಕವಾಗಿದೆ ಖರ್ಚೆಲ್ಲಾ ಕಳೆದು ವರ್ಷಕ್ಕೆ 4 ಲಕ್ಷ ರೂ ಆದಾಯ ಬರುತ್ತಿದೆ ಮುಂದಿನ ದಿನಗಳಲ್ಲಿ ದ್ವಿಗುಣವಾಗಲಿದೆ ಎಂದು ಅವರೆ ಹೇಳುತ್ತಾರೆ ಭೂಮಿಯನ್ನು ಹಡವು ಗೇಡಬಾರದು ಕೃಷಿಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡಿದರೆ ನಷ್ಟದ ಮಾತಿಲ್ಲ ಎನ್ನುವುದು ರಾಮಯ್ಯ ಶೆಟ್ಟರ ಅಭಿಪ್ರಾಯವಾಗಿದೆ.ಹೈನುಗಾರಿಕೆಯಲ್ಲಿ ತೊಡಗಿಕೊಂಡ ರಾಮಯ್ಯ ಶೆಟ್ಟರ ಬಳಿ 15 ದೇಶಿ ಹಸುಗಳಿವೆ.
ಕೋಳಿ ಸಾಕಾಣಿಕೆ-ಕೋಳಿ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡ ಅವರು ಕೋಳಿ ಫಾರಂ ಅನ್ನು ನಿರ್ವಹಿಸುತ್ತಾ ಇದ್ದಾರೆ 4500 ಫಾರಂ ಕೋಳಿಗಳು ಅವರ ಫಾರಂನಲ್ಲಿ ಇದೆ.


ನಾಟಿ ವೈದ್ಯ ರಾಮಯ್ಯ ಶೆಟ್ಟಿ-ಕಿಡ್ನಿ ಸ್ಟೋನ್,ಪಿತ್ತಕೋಶ ಸ್ಟೋನ್,ಉರಿಮೂತ್ರ,ಮೂತ್ರ ಸರಿಯಾಗಿ ಆಗದಿರುವುದಕ್ಕೆ,ತಾಳಂಗಳಕ್ಕೆ ಗಿಡಮೂಲಿಕೆ ಔಷಧವನ್ನು ರಾಮಯ್ಯ ಶೆಟ್ಟಿ ಅವರು ನೀಡುತ್ತಾರೆ.
ಕಿಡ್ನಿ ಮತ್ತು ಪಿತ್ತಕೋಶದಲ್ಲಿ ಆಗುವ ಕಲ್ಲಿಗೆ,ಉರಿ ಮೂತ್ರಕ್ಕೆ ನಾಟಿ ಔಷಧವನ್ನು ಸಹ ರಾಮಯ್ಯ ಶೆಟ್ಟರು ನೀಡುತ್ತಾರೆ ಅವರ
ಸಂಪರ್ಕ ಮೊಬೈಲ್ ಸಂಖ್ಯೆ-9663263545

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

3 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago