ಕುಂದಾಪುರ

ಅಡಿಕೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡ-ಮಡ್ಲಗೇರಿ ಬಾಬು ಆಚಾರ್ಯ

Share

ಕುಂದಾಪುರ:ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿ ನಿವಾಸಿಯಾದ ಬಾಬು ಆಚಾರ್ಯ ಅವರು ಬಿ.ಕಾಂ ಪದವೀಧರನಾಗಿದ್ದರೂ ಅವರ ಒಲವು ಮಾತ್ರ ಕೃಷಿ ಕ್ಷೇತ್ರದತ್ತ ಸೆಳೆದಿದೆ.ಕಳೆದ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿರುವ ಅವರು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಕೊಟ್ಟಿಗೆ ಗೊಬ್ಬರ,ಜೀವಾಮೃತ,ಎರೆಹುಳ ಗೊಬ್ಬರವನ್ನು ಉಪಯೋಗಿಸಿಕೊಂಡು ವಿನೂತನ ರೀತಿಯಲ್ಲಿ ತೋಟಗಾರಿಕೆ ಕೃಷಿಯನ್ನು ಮಾಡುತ್ತಾ ಜೀವನೋಪಾಯ ಕಂಡುಕೊಂಡಿದ್ದಾರೆ.
ತಮ್ಮ 5 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ,ಕಾಳು ಮೆಣಸು ಮತ್ತು ತೆಂಗಿನ ಕೃಷಿ ಮಾಡಿಕೊಂಡು ಆದಾಯವನ್ನು ಗಳಿಸುವುದರ ಮುಖೇನ ಸ್ವಾಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.ಕೃಷಿ ತೋಟದ ರಚನೆ ಮಾಡುವವರಿಗೆ ಉಚಿತವಾಗಿ ಮಾಹಿತಿಯನ್ನು ನೀಡುವ ಅವರು ರೈತರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.

ಕೃಷಿ ಜತೆಗೆ ಮಣ್ಣಿನ ಫಲವತ್ತತೆ ಕಾಪಾಡಲು ಹೆಚ್ಚಿನ ಒತ್ತನ್ನು ನೀಡುತ್ತಿರುವ ಬಾಬು ಆಚಾರ್ಯ ಅವರು ರಾಸಾಯನಿಕ ಗೊಬ್ಬರವನ್ನು ಮಣ್ಣಿನ ಮೇಲೆ ಒಮ್ಮೆಯೂ ಪ್ರಯೋಗ ಮಾಡಿದ್ದೆ ಇಲ್ಲಾ.ಮಣ್ಣು ಇರುವ ವ್ಯವಸ್ಥೆ ಅಡಿಯಲ್ಲೆ ಕೃಷಿ ತೋಟವನ್ನು ಹೇಗೆ ರಚನೆ ಮಾಡಬಹುದು ಎನ್ನುವ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿರುವ ಅವರು ಕೃಷಿ ತೋಟವನ್ನು ಮಾಡುವವರಿಗೆ ಉಚಿತವಾಗಿ ಮಾಹಿತಿಯನ್ನು ನೀಡುತ್ತಾರೆ.ಪ್ರಕೃತಿ ಕಾಪಾಡುವುದರ ಜತೆಗೆ ರೈತರ ಜೀವನ ಮಟ್ಟ ಸುದಾರಿಸಬೇಕ್ಕೆನ್ನುವುದು ಅವರ ಬಯಕೆ.


ಗ್ರಾಮೀಣ ಭಾಗದ ಜನರಿಗೆ ಶಿಕ್ಷಣವೆ ಮರಿಚಿಕೆ ಎನ್ನುವ ಕಾಲಘಟ್ಟದಲ್ಲಿ ಬಿ.ಕಾಂ ಶಿಕ್ಷಣವನ್ನು ಪೂರೈಸಿರುವ ಬಾಬು ಆಚಾರ್ಯ ಅವರು ಸರಕಾರಿ ಕೆಲಸಗಳನ್ನು ಧಿಕ್ಕರಿಸಿ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ.ಪುತ್ತೂರು ಮತ್ತು ವಿಟ್ಲ ಭಾಗದಿಂದ ಒಣ ಅಡಿಕೆ ಬೀಜಗಳನ್ನು ತಂದು ಸ್ವತಹ ಗಿಡಗಳನ್ನು ತಯಾರು ಮಾಡುತ್ತಾರೆ.ವರ್ಷಕ್ಕೆ ಸರಿ ಸುಮಾರು 1.ಲಕ್ಷ.ಕ್ಕೂ ಅಧಿಕ ಅಡಿಕೆ ಗಿಡಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.ಊರು,ಪರ ಊರು ಸೇರಿದಂತೆ ಕೇರಳ ಇನ್ನಿತರ ರಾಜ್ಯಗಳಲ್ಲಿಯೂ ಬೇಡಿಕೆ ಇದೆ.ಮೋಹಿತ್ ನಗರ,ವಿಟ್ಲ ಮಂಗಳ,ಪುತ್ತೂರು ಮಂಗಳ,ಶ್ರೀಮಂಗಳ ಸೇರಿದಂತೆ ವಿವಿಧ ಜಾತಿಯ ಅಡಿಕೆ ಗಿಡಗಳು ಬಾಬು ಆಚಾರ್ಯ ಅವರ ಬಳಿ ಇದೆ.ವ್ಯಾಪಾರದ ದೃಷ್ಟಿಕೋನದಕ್ಕಿಂತಲೂ,ಆಸಕ್ತ ರೈತರಿಗೆ ಉತ್ತಮ ರೀತಿಯ ಅಡಿಕೆ ಗಿಡಗಳನ್ನು ನೀಡುವ ಉದ್ದೇಶದಿಂದ ಗಿಡಗಳನ್ನು ತಯಾರು ಮಾಡುತ್ತಿದ್ದೇನೆ ಆದಾಯದ ಗಳಿಕೆಯನ್ನು ನೋಡದೆ ಅತಿ ಕಡಿಮೆ ದರದಲ್ಲಿ ಗಿಡಗಳನ್ನು ಮಾರಾಟ ಮಾಡುತ್ತೇನೆ ನನ್ನ ಕೈಲಾದಷ್ಟು ರೈತರಿಗೆ ನೆರವು ನೀಡಬೇಕ್ಕುನ್ನುವುದು ತನ್ನ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳುತ್ತಾರೆ.
ವರದಿ-ಜಗದೀಶ ದೇವಾಡಿಗ

Advertisement

Share
Team Kundapur Times

Recent Posts

ಅಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಹಕ್ಲಾಡಿ ಆಯ್ಕೆ

ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯ‌ರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…

3 weeks ago

ಕಾಪು:ಗೂಡ್ಸ್ ಟೆಂಪೋ ಪಲ್ಟಿ ನಾಲ್ವರು ಸಾವು

ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…

4 weeks ago

ಶಿಕ್ಷಕ ಸುರೇಂದ್ರಗೆ ಮಕ್ಕಳ ಮಿತ್ರ ಪ್ರಶಸ್ತಿ

ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…

1 month ago

ತ್ರಾಸಿ:ನಿಂತ್ತಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…

2 months ago

ಮರವಂತೆ ಸಮುದ್ರ ಕಿನಾರೆ ಸ್ವಚ್ಚತೆ

ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…

2 months ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…

2 months ago