ಕುಂದಾಪುರ

ಪಡುಕೋಣೆ:ನಾಟಿ ವೈದ್ಯ ಮಾಕ್ಷಿಮ್ ಒಲಿವೆರಾ ಗಿಡಮೂಲಿಕೆ ಔಷಧ ನೀಡಿಕೆ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೋಣೆ ನಿವಾಸಿ ಮಾಕ್ಷಿಮ್ ಒಲಿವೆರಾ ಅವರು ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುವುದರ ಮುಖೇನ ಸಾವಿರಾರು ಜನರನ್ನು ರೋಗ ಮುಕ್ತಗೊಳಿಸುವುದರ ಮೂಲಕ ವಿಶಿಷ್ಟವಾದ ಸಾಧನೆಗೆ ಪಾತ್ರರಾಗಿದ್ದಾರೆ ಅವರ ಸಮಾಜಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ನಾಟಿ ಔಷಧವನ್ನು ಕೊಡುತ್ತಿರುವ ತಮ್ಮ ತಂದೆಯೊಂದಿಗೆ ಕೂಡಿಕೊಂಡು ಮಾಕ್ಷಿಮ್ ಒಲಿವೆರಾ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಪ್ರಕೃತಿಯಲ್ಲಿ ಸಿಗುವ ಔಷಧ ಗಿಡಗಳ ಮಾಹಿತಿಯನ್ನು ಪಡೆದುಕೊಂಡು ಕ್ರಮೇಣ ತಂದೆಯ ಕಾಲದ ನಂತರ ಸ್ವತಂತ್ರವಾಗಿ ನಾಟಿ ಔಷಧವನ್ನು ನೀಡುತ್ತಾ ಬಂದಿರುತ್ತಾರೆ.
ಋಷಿಮುನಿಗಳು,ವೇದ ಪಂಡಿತರ ಕಾಲದಲ್ಲಿದ್ದ ನಾಟಿ ಔಷಧ ಪದ್ಧತಿಗೆ ಶತ ಶತಮಾನಗಳಷ್ಟು ಇತಿಹಾಸವಿದೆ ಭಾರತದ ಔಷಧ ಮೂಲವೆ ನಾಟಿ ಔಷಧ ಎಂದರೆ ತಪ್ಪಾಗಲಾರದು.ಆಧುನಿಕ ಚಿಕಿತ್ಸಾ ಪದ್ಧತಿಯ ಕಾಲದಲ್ಲಿಯೂ ನಾಟಿ ಔಷಧಕ್ಕೆ ಬಹಳಷ್ಟು ಮಾನ್ಯತೆ ಇದೆ.ನಾಟಿ ಔಷಧದ ಚಿಕಿತ್ಸೆಯನ್ನು ಪಡೆದುಕೊಳ್ಳಲು ವಿದೇಶಿಗರು ಭಾರತದ ಹಳ್ಳಿಗಳತ್ತಾ ಧಾವಿಸಿ ಬರುತ್ತಿರುವುದು ಒಂದು ದೊಡ್ಡ ನಿದರ್ಶನವಾಗಿದೆ.

Advertisement

ಕನಿಷ್ಠ ದರದಲ್ಲಿ ರೋಗ ಗುಣಪಡಿಸುವಿಕೆ:ನಾಟಿ ವೈದ್ಯರಾದ ಮಾಕ್ಷಿಮ್ ಒಲಿವೆರಾ ಅವರು ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾಧಿ,6 ರೀತಿಯ ಜಾಂಡೀಸ್ ಕಾಯಿಲೆಗಳು,ಗರ್ಭಕೋಶದ ಸಮಸ್ಯೆ ಹಾಗೂ ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡುತ್ತಾರೆ.ಸಕ್ಕರೆ ಕಾಯಿಲೆಯಂತ ರೋಗಕ್ಕೂ ಮಾಕ್ಷಿಮ್ ಒಲಿವೆರಾ ನೀಡುವ ಔಷಧ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ ಎಂದು ಔಷಧವನ್ನು ಪಡೆದುಕೊಂಡವರು ಹೇಳುತ್ತಾರೆ.ಸಾಮಾಜಿಕ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವ ಅವರು ರೋಗಿಗಳಿಂದ ನಿರ್ಧಿಷ್ಟವಾಗಿ ಹಣವನ್ನು ಕೇಳಿ ಪಡೆಯುವುದೆ ಇಲ್ಲ ಸ್ವ ಇಚ್ಚೆಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ ಅವರ ಕೈಗುಣದಿಂದ ಸಾವಿರಾರು ರೋಗಿಗಳು ನಾನಾ ಕಾಯಿಲೆಯಿಂದ ಗುಣ ಮುಖರಾಗಿದ್ದಾರೆ.ಮಾಕ್ಷಿಮ್ ಒಲಿವೆರಾ ಅವರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾ ರಾಜ್ಯದಿಂದಲೂ ಜನರು ಬರುತ್ತಾರೆ.
ನಾಟಿ ಔಷಧ ಪದ್ಧತಿ ತಂದೆಯವರ ಕಾಲದಿಂದ ಬಂದ ಬಳುವಳಿ ಆಗಿದೆ.ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುತ್ತಿದ್ದೇನೆ.ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾದಿ ಸೇರಿದಂತೆ ಹಲವರಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡಲಾಗುತ್ತಿದ್ದು.ಊರ,ಪರಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾದಿಂದಲೂ ಬರುತ್ತಾರೆ ಎಂದು ಮಾಕ್ಷಿಮ್ ಒಲಿವೆರಾ ಹೇಳುತ್ತಾರೆ.
ಮಾಕ್ಷಿಮ್ ಒಲಿವೆರಾ ಅವರ ದೂರವಾಣಿ ಸಂಖ್ಯೆ -9535293305

@ಲೇಖನ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement
Advertisement

Share
Team Kundapur Times

Recent Posts

ಶ್ರೀ ಕೃಷ್ಣಾನಂದತೀರ್ಥಮಹಾಸ್ವಾಮಿ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀಶಂಕರಾಚಾರ್ಯ…

1 week ago

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ “ಐಕ್ಯಂ” 2k25 ಕಾರ್ಯಕ್ರಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ "ಐಕ್ಯಂ" 2025 ಅದ್ದೂರಿಯಿಂದ ನಡೆಯಿತು.ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ…

1 week ago

ಯುವಕ ಮಂಡಲ ತ್ರಾಸಿ 59ನೇ ವಾರ್ಷಿಕೋತ್ಸವ ಸಂಭ್ರಮ

ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು…

2 weeks ago

ಕೃಷ್ಣ ಮಠ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ

ಉಡುಪಿ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ವಿದ್ಯಾರ್ಥಿಗಳಿಂದ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ ನಡೆಯಿತು.ವಿದ್ಯಾರ್ಥಿಗಳು ಹೆಜ್ಞೆ…

2 weeks ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕ ಕ್ರೀಡಾಕೂಟ 2024-2025

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ಜರುಗಿತು.ಹಿರಿಯ ದೈಹಿಕ ನಿರ್ದೇಶಕ ಯುನೈಟೆಡ್ ಉಡುಪಿ…

2 weeks ago

ಸ್ಕೈಡೈನಿಂಗ್ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಸಚಿವ

ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ…

3 weeks ago