ಕುಂದಾಪುರ

ಪಡುಕೋಣೆ:ನಾಟಿ ವೈದ್ಯ ಮಾಕ್ಷಿಮ್ ಒಲಿವೆರಾ ಗಿಡಮೂಲಿಕೆ ಔಷಧ ನೀಡಿಕೆ

Share

ಕುಂದಾಪುರ:ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೋಣೆ ನಿವಾಸಿ ಮಾಕ್ಷಿಮ್ ಒಲಿವೆರಾ ಅವರು ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುವುದರ ಮುಖೇನ ಸಾವಿರಾರು ಜನರನ್ನು ರೋಗ ಮುಕ್ತಗೊಳಿಸುವುದರ ಮೂಲಕ ವಿಶಿಷ್ಟವಾದ ಸಾಧನೆಗೆ ಪಾತ್ರರಾಗಿದ್ದಾರೆ ಅವರ ಸಮಾಜಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ನಾಟಿ ಔಷಧವನ್ನು ಕೊಡುತ್ತಿರುವ ತಮ್ಮ ತಂದೆಯೊಂದಿಗೆ ಕೂಡಿಕೊಂಡು ಮಾಕ್ಷಿಮ್ ಒಲಿವೆರಾ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಪ್ರಕೃತಿಯಲ್ಲಿ ಸಿಗುವ ಔಷಧ ಗಿಡಗಳ ಮಾಹಿತಿಯನ್ನು ಪಡೆದುಕೊಂಡು ಕ್ರಮೇಣ ತಂದೆಯ ಕಾಲದ ನಂತರ ಸ್ವತಂತ್ರವಾಗಿ ನಾಟಿ ಔಷಧವನ್ನು ನೀಡುತ್ತಾ ಬಂದಿರುತ್ತಾರೆ.
ಋಷಿಮುನಿಗಳು,ವೇದ ಪಂಡಿತರ ಕಾಲದಲ್ಲಿದ್ದ ನಾಟಿ ಔಷಧ ಪದ್ಧತಿಗೆ ಶತ ಶತಮಾನಗಳಷ್ಟು ಇತಿಹಾಸವಿದೆ ಭಾರತದ ಔಷಧ ಮೂಲವೆ ನಾಟಿ ಔಷಧ ಎಂದರೆ ತಪ್ಪಾಗಲಾರದು.ಆಧುನಿಕ ಚಿಕಿತ್ಸಾ ಪದ್ಧತಿಯ ಕಾಲದಲ್ಲಿಯೂ ನಾಟಿ ಔಷಧಕ್ಕೆ ಬಹಳಷ್ಟು ಮಾನ್ಯತೆ ಇದೆ.ನಾಟಿ ಔಷಧದ ಚಿಕಿತ್ಸೆಯನ್ನು ಪಡೆದುಕೊಳ್ಳಲು ವಿದೇಶಿಗರು ಭಾರತದ ಹಳ್ಳಿಗಳತ್ತಾ ಧಾವಿಸಿ ಬರುತ್ತಿರುವುದು ಒಂದು ದೊಡ್ಡ ನಿದರ್ಶನವಾಗಿದೆ.

ಕನಿಷ್ಠ ದರದಲ್ಲಿ ರೋಗ ಗುಣಪಡಿಸುವಿಕೆ:ನಾಟಿ ವೈದ್ಯರಾದ ಮಾಕ್ಷಿಮ್ ಒಲಿವೆರಾ ಅವರು ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾಧಿ,6 ರೀತಿಯ ಜಾಂಡೀಸ್ ಕಾಯಿಲೆಗಳು,ಗರ್ಭಕೋಶದ ಸಮಸ್ಯೆ ಹಾಗೂ ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡುತ್ತಾರೆ.ಸಕ್ಕರೆ ಕಾಯಿಲೆಯಂತ ರೋಗಕ್ಕೂ ಮಾಕ್ಷಿಮ್ ಒಲಿವೆರಾ ನೀಡುವ ಔಷಧ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ ಎಂದು ಔಷಧವನ್ನು ಪಡೆದುಕೊಂಡವರು ಹೇಳುತ್ತಾರೆ.ಸಾಮಾಜಿಕ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವ ಅವರು ರೋಗಿಗಳಿಂದ ನಿರ್ಧಿಷ್ಟವಾಗಿ ಹಣವನ್ನು ಕೇಳಿ ಪಡೆಯುವುದೆ ಇಲ್ಲ ಸ್ವ ಇಚ್ಚೆಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ ಅವರ ಕೈಗುಣದಿಂದ ಸಾವಿರಾರು ರೋಗಿಗಳು ನಾನಾ ಕಾಯಿಲೆಯಿಂದ ಗುಣ ಮುಖರಾಗಿದ್ದಾರೆ.ಮಾಕ್ಷಿಮ್ ಒಲಿವೆರಾ ಅವರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾ ರಾಜ್ಯದಿಂದಲೂ ಜನರು ಬರುತ್ತಾರೆ.
ನಾಟಿ ಔಷಧ ಪದ್ಧತಿ ತಂದೆಯವರ ಕಾಲದಿಂದ ಬಂದ ಬಳುವಳಿ ಆಗಿದೆ.ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುತ್ತಿದ್ದೇನೆ.ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾದಿ ಸೇರಿದಂತೆ ಹಲವರಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡಲಾಗುತ್ತಿದ್ದು.ಊರ,ಪರಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾದಿಂದಲೂ ಬರುತ್ತಾರೆ ಎಂದು ಮಾಕ್ಷಿಮ್ ಒಲಿವೆರಾ ಹೇಳುತ್ತಾರೆ.
ಮಾಕ್ಷಿಮ್ ಒಲಿವೆರಾ ಅವರ ದೂರವಾಣಿ ಸಂಖ್ಯೆ -9535293305

@ಲೇಖನ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

4 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago