ಕುಂದಾಪುರ:ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಗೊಂಡು ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ ಬುಧವಾರ ಯಶಸ್ವಿಯಾಗಿ ನೆರವೇರಿದೆ.ಚಂದ್ರಯಾನ-3 ಟೀಮ್ನಲ್ಲಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮಂಕಿ ಕೇಳಾಮನೆ ನಿವಾಸಿ ಪಾರ್ವತಿ ಶೆಟ್ಟಿ ಮತ್ತು ಕೆರಾಡಿ ಗ್ರಾಮದ ಚಪ್ಪರಮಕ್ಕಿ ದಿ.ಅಶೋಕ್ ಶೆಟ್ಟಿ ಅವರ ಮಗ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇರುವುದು ಕುಂದಾಪುರ ತಾಲೂಕಿಗೆ ಹೆಮ್ಮ.
ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇಸ್ರೋ ಚಂದ್ರಯಾನ-3 ರಲ್ಲಿ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್ನಲ್ಲಿ ಪ್ರೋಜೆಕ್ಟ್ ಮ್ಯಾನೇಂಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಯೋಜನೆಯ ಯಶಸ್ಸಿಗೆ ಆಕಾಶ್ ಶೆಟ್ಟಿ ಅವರು ತಮ್ಮದೆ ಆದ ಕೊಡುಗೆಯನ್ನು ನೀಡಿರುವುದು ಯುವ ವಿಜ್ಞಾನಿಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಿದೆ.ಕುಂದಾಪುರ- ಕೋಟದ ವಿವೇಕ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗವನ್ನು ಮಾಡಿದ ಅವರು ಬಳಿಕ ಹಾಸನದ ಮಲ್ನಾಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿ,ಎಂ.ಟೆಕ್ ಪೂರೈಸಿದ್ದರು.2015 ರಿಂದ ಆಕಾಶ್ ಶೆಟ್ಟಿ ಅವರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರು ಚಂದ್ರಯಾನ-2 ರಲ್ಲಿ ಕೂಡ ಕರ್ತವ್ಯವನ್ನು ನಿರ್ವಹಿಸಿದ್ದರು.
ವಿಶ್ವವು ಬೆರಗು ಗಣ್ಣಿನಿಂದ ನೋಡುತ್ತಿದ್ದ ಚಂದ್ರಯಾನ -3 ಯಶಸ್ಸಿಗೆ ಆಕಾಶ್ ಶೆಟ್ಟಿ ಅವರ ತಾಯಿ ಪಾರ್ವತಿ ಶೆಟ್ಟಿ ಮಂಕಿ-ಗುಜ್ಜಾಡಿ ಮತ್ತು ಕುಟುಂಬಸ್ಥರು ಸಂತೋಷವನ್ನು ವ್ಯಕ್ತಪಡಿಸಿದ್ದು ದೇಶಕ್ಕೆ ಮತ್ತು ನಮಗೆ ಹೆಮ್ಮ ಸಂಗತಿ ಆಗಿದೆ ಎಂದು ವಿಜಯ ಕರ್ನಾಟಕದೊಂದಿಗೆ ಖುಷಿಯನ್ನು ಹಂಚಿಕೊಂಡರು. ಪ್ರಸ್ತುತ ಆಕಾಶ್ ಶೆಟ್ಟಿ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ವಾಸವಾಗಿದ್ದಾರೆ.
ಚಂದ್ರಯಾನ -3 ತಂಡದಲ್ಲಿ ನಮ್ಮ ಮನೆ ಹುಡುಗ ಕೆಲಸ ಮಾಡಿವುರುದು ನಮಗೆ ಬಹಳಷ್ಟು ಖುಷಿಕೊಟ್ಟಿದೆ.ಇದೊಂದು ಅದ್ಭುತವಾದ ಕ್ಷಣ.ದೇಶದ ಕೋಟ್ಯಾಂತರ ಜನರ ಆಸೆ ಈಡೇರಿದ ಸಂತೋಷದ ಗಳಿಗೆಯು ಹೌದು.
-ರತ್ನಾಕರ ಶೆಟ್ಟಿ ಮಂಕಿ-ಗುಜ್ಜಾಡಿ,ದೈಹಿಕ ಶಿಕ್ಷಣ ಶಿಕ್ಷಕರು (ಆಕಾಶ್ ಶೆಟ್ಟಿ ಅವರ ದೊಡ್ಡಮ್ಮನ ಮಗ)
ದೇಶವೆ ಹೆಮ್ಮೆ ಪಡುವಂತ ಯೋಜನೆಯಲ್ಲಿ ನನ್ನ ಮಗ ಕೆಲಸ ಮಾಡಿರುವುದು ನನ್ನ ಜೀವನ ಸಾರ್ಥಕತೆಯನ್ನು ಕಂಡಿದೆ.ಚಂದ್ರಯಾನ- 2 ರಲ್ಲಿ ಹತಾಶೆಯನ್ನು ಪಟ್ಟಿದ್ದ ನಾವು,ಚಂದ್ರಯಾನ-3 ರಲ್ಲಿ ಖುಷಿ ಕಂಡಿದ್ದೇವೆ.ಇವೊಂದು ಕ್ಷಣವನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ.
-ಪಾರ್ವತಿ ಶೆಟ್ಟಿ,ಮಂಕಿ-ಗುಜ್ಜಾಡಿ,ಆಕಾಶ್ ಶೆಟ್ಟಿ ತಾಯಿ
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…
ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…