ಪ್ರಮುಖ

ಕಮಲ್ ಫ್ಯೂಲ್ಸ್ ಶುಭಾರಂಭ

Share

ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಕುಂದಾಪುರ ತಾಲೂಕಿನ ಅರಾಟೆಯಲ್ಲಿ ನಿರ್ಮಾಣವಾಗಿರುವುದರಿಂದ ಪರಿಸರದ ಜನರಿಗೆ ಉತ್ತಮ ದರ್ಜೆ ತೈಲ ಸಿಗುವಂತಾಗಲಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನಿರ್ಮಾಣವಾಗಿರುವ ಕಮಲ್ ಫ್ಯೂಲ್ಸ್‍ನ ಹಸಿರು ಗಾರ್ಡನ್ ನೊಡುಗರ ಮನ ಸೆಳೆಯುತ್ತಿದೆ.ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಸಹಿತ ಶೌಚಾಲಯ ಹಾಗೂ ನೈಟ್ರೋಜನ್ ಗಾಳಿ ಹಾಕುವ ಯಂತ್ರ ಕೂಡ ಲಭ್ಯವಿದ್ದು.ಬ್ಯಾಟರಿ ಚಾಲಿತ ವಾಹನಗಳಿಗೆ ಚಾರ್ಚ್‍ಂಜಿಗ್ ಸ್ಟೇಷನ್ ಕೂಡ ಲಭ್ಯವಾಗಲಿದೆ.ಒಂದೆ ಸೂರಿನಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.ದಕ್ಷತೆಯುಳ್ಳ ಪೆಟ್ರೋಲ್ ಮತ್ತು ಡಿಸೇಲ್ ಹಾಕಿಸಿಕೊಳ್ಳಲು ಕಮಲ್ ಫ್ಯೂಲ್ಸ್‍ಗೆ ಭೇಟಿ ನೀಡಬಹುದು.
ಕಮಲ್ ಫ್ಯೂಲ್ಸ್ ಮಾಲೀಕರಾದ ನಾಗರಾಜ ಶೆಟ್ಟಿ ಗುಲ್ವಾಡಿ ದೊಡ್ಮನೆ ಅವರು ಮಾತನಾಡಿ,ಒಂದಿಷ್ಟು ಜನರಿಗೆ ಉದ್ಯೋಗ ನೀಡುವ ದೃಷ್ಟಿಕೋನದೊಂದಿಗೆ ಹಾಗೂ ಊರಿನಲ್ಲಿ ಉದ್ಯಮವನ್ನು ಸ್ಥಾಪನೆ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಶುಭಗಳಿಗೆಯಲ್ಲಿ ಕಮಲ್ ಪೆಟ್ರೋಲ್ ಬಂಕ್‍ನ್ನು ಅರಾಟೆಯಲ್ಲಿ ಆರಂಭಿಸಲಾಗಿದ್ದು.ಉತ್ತಮ ದರ್ಜೆ ತೈಲ ಮತ್ತು ಸೇವೆಯನ್ನು ನೀಡಲಾಗುವುದು ಎಂದು ಹೇಳಿದರು.ಎಲ್ಲರ ಸಹಕಾರವನ್ನು ಕೇಳಿಕೊಂಡರು.
ಕಮಲ್ ಫ್ಯೂಲ್ಸ್ ಮಾಲೀಕರಾದ ರತ್ನಾಕರ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ ಮಾತನಾಡಿ,ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಕಮಲ್ ಫ್ಯೂಲ್ಸ್ ಪೆಟ್ರೋಲ್ ಪಂಪ್‍ನ್ನು ಎಲ್ಲಾ ರೀತಿಯ ಕಾನೂನಿನ ಚೌಕಟ್ಟನ್ನು ಅನುಸರಿಸುವುದರ ಮುಖೇನ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ನಿರ್ಮಾಣಮಾಡಲಾಗಿದೆ.ಉತ್ತಮ ರೀತಿಯ ಪಾರ್ಕಿಂಗ್ ವ್ಯವಸ್ಥೆ,ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು.ಗುಣಮಟ್ಟದ ತೈಲವನ್ನು ಹಾಕುವುದರ ಮೂಲಕ ಸೇವೆಯನ್ನು ನೀಡಲಾಗುತ್ತಿದ್ದು.ಎಲ್ಲರೂ ಸಹಕಾರ ಮಾಡಬೇಕೆಂದು ವಿನಂತಿಸಿಕೊಂಡರು.
ಎಚ್.ಪಿ.ಸಿ.ಎಲ್ ಜೋನ್ ಹೆಡ್ ಮಂಗಳೂರು ನವಿನ್ ಕುಮಾರ್ ಅವರು ಕಮಲ್ ಫ್ಯೂಲ್ಸ್ ಕಛೇರಿ ಮತ್ತು ಇಂದಿರಾ ಶೆಟ್ಟಿ ಗುಲ್ವಾಡಿ ದೊಡ್ಮಮನೆ ಮತ್ತು ಗುಲಾಬಿ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ ಪೆಟ್ರೋಲ್ ಮತ್ತು ಡಿಸೇಲ್ ಬಂಕ್ ಉದ್ಘಾಟಿಸಿದರು.ಸ್ನೇಹಿತರು,ಬಂಧು ಮಿತ್ರರು,ಹಿತೈಷಿಗಳು,ಕುಟುಂಬಿಕರು ಕಮಲ್ ಫ್ಯೂಲ್ಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶುಭಾಶಯ ಕೋರಿದರು.ವಾಹನಗಳಿಗೆ ತೈಲವನ್ನು ಹಾಕುವುದರ ಮುಖೇನ ಚಾಲನೆಯನ್ನು ನೀಡಲಾಯಿತು.

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

3 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago