ಕುಂದಾಪುರ:ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಜನಪ್ರೀಯ ಎಚ್.ಪಿ ಫ್ಯೂಲ್ಸ್ ನ ಘಟಕ ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವುದರಿಂದ ಪರಿಸರದ ಜನರಿಗೆ ಉತ್ತಮ ದರ್ಜೆ ತೈಲ ಸಿಗುವಂತಾಗಲಿದೆ ಎಂದು ಎಚ್.ಪಿ.ಸಿ.ಎಲ್ ಜೋನ್ ಹೆಡ್ ಮಂಗಳೂರು ನವಿನ್ ಕುಮಾರ್ ಹೇಳಿದರು.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಅರಾಟೆ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಮಲ್ ಫ್ಯೂಲ್ಸ್ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿರಾ ಶೆಟ್ಟಿ ಗುಲ್ವಾಡಿ ದೊಡ್ಮಮನೆ ಮತ್ತು ಗುಲಾಬಿ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ ಅವರು ಪೆಟ್ರೋಲ್ ಮತ್ತು ಡಿಸೇಲ್ ಬಂಕ್ ಉದ್ಘಾಟಿಸಿ ಶುಭಹಾರೈಸಿದರು.
ಕಮಲ್ ಫ್ಯೂಲ್ಸ್ ಮಾಲೀಕರಾದ ನಾಗರಾಜ ಶೆಟ್ಟಿ ಗುಲ್ವಾಡಿ ದೊಡ್ಮನೆ ಮತ್ತು ರತ್ನಾಕರ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ,ಹೊಸಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅರಾಟೆ,ವಿರೇಂದ್ರ ಶೆಟ್ಟಿ ಗಂಟಿಹೊಳೆ,ವಸಂತ ಹೆಗ್ಡೆ ತಲ್ಲೂರು,ಸೂಲಣ್ಯ ಶೆಟ್ಟಿ,ರವಿರಾಜ ಶೆಟ್ಟಿ ಮೊವಾಡಿ,ಪ್ರಭಾಕರ ಶೆಟ್ಟಿ,ಸುಧಾಕರ ಶೆಟ್ಟಿ,ಭಾಸ್ಕರ ಶೆಟ್ಟಿ ನೂಜಾಡಿ,ಸರ್ವತ್ತೋಮ ಶೆಟ್ಟಿ ಸಹೋದರರು ತಲ್ಲೂರು ದೊಡ್ಮನೆ,ಜಯಪ್ರಕಾಶ್ ಶೆಟ್ಟಿ ಹಕ್ಲಾಡಿ,ಆದರ್ಶ ಶೆಟ್ಟಿ ಗುಲ್ವಾಡಿ ದೊಡ್ಮನೆ,ಜಯರಾಮ ಶೆಟ್ಟಿ,ಚೇತನ ಶೆಟ್ಟಿ,ನಂದೀಶ ಶೆಟ್ಟಿ,ಪ್ರಭಾಕರ ಶೆಟ್ಟಿ ಗುಲ್ವಾಡಿ,ಚಂದ್ರಶೇಖರ ಶೆಟ್ಟಿ,ಸಂತೋಷ ಶೆಟ್ಟಿ,ಅಮೃತ ಎನ್ ಶೆಟ್ಟಿ,ರಂಜನಿ ಆರ್ ಶೆಟ್ಟಿ ಮತ್ತು ಮಕ್ಕಳು,ಪ್ರದೀಪ ಶೆಟ್ಟಿ ಮತ್ತು ಪ್ರಕಾಶ ಶೆಟ್ಟಿ ಮುಳ್ಳಿಕಟ್ಟೆ,ಡಾ.ಪ್ರಹ್ಲಾದ ಶೆಟ್ಟಿ ಮತ್ತು ಗುಲ್ವಾಡಿ ದೊಡ್ಮನೆ ಕುಟುಂಬಿಕರು ಹಾಗೂ ಮೊವಾಡಿ ಉದ್ರಿ ಪಟೇಲರ ಮನೆ ಕುಟುಂಬಿಕರು,ಸ್ನೇಹಿತರು,ಹಿತೈಷಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಮಲ್ ಫ್ಯೂಲ್ಸ್ ಮಾಲೀಕರಾದ ನಾಗರಾಜ ಶೆಟ್ಟಿ ಗುಲ್ವಾಡಿ ದೊಡ್ಮನೆ ಸ್ವಾಗತಿಸಿದರು.ರತ್ನಾಕರ ಶೆಟ್ಟಿ ಮೊವಾಡಿ ಉದ್ರಿ ಪಟೇಲರ ಮನೆ ವಂದಿಸಿದರು.
ಕಮಲ್ ಫ್ಯೂಲ್ಸ್ ಅರಾಟೆಯಲ್ಲಿ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ವಾಸ್ತು ಪೂಜೆ,ಗಣಹ ಹೋಮ,ಸುದರ್ಶನ ಹೋಮವನ್ನು ನೆರವೇರಿಸಲಾಯಿತು.ಶ್ರೀ ನಾಗದೇವರಿಗೆ ಹನ್ನೆರಡು ಕಳಶ ಹೋಮ,ಸ್ವಾಮಿ,ಚೌಡೇಶ್ವರಿ ಮತ್ತು ಹೈಗುಳಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…